ಲಕ್ಷ್ಮೀ ಮೈಯಲ್ಲಿ ಕೀರ್ತಿ ಆತ್ಮ..  ಶ್ರೇಷ್ಠಾ ಮೇಲೂ ದೆವ್ವ ಬಂತಾ? – ಎರಡು ಸೀರಿಯಲ್‌.. ಭಯಾನಕ ಟ್ವಿಸ್ಟ್!!

ಲಕ್ಷ್ಮೀ ಮೈಯಲ್ಲಿ ಕೀರ್ತಿ ಆತ್ಮ..  ಶ್ರೇಷ್ಠಾ ಮೇಲೂ ದೆವ್ವ ಬಂತಾ? – ಎರಡು ಸೀರಿಯಲ್‌.. ಭಯಾನಕ ಟ್ವಿಸ್ಟ್!!

ಕಲರ್ಸ್‌ ಕನ್ನಡದಲ್ಲಿ ಭಾಗ್ಯ ಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ರೋಚಕ ತಿರುವು ಪಡ್ಕೊಂಡಿದೆ. ಪ್ರತಿ ಎಪಿಸೋಡ್​ನಲ್ಲಿಯೂ ಹೊಸ ಟ್ವಿಸ್ಟ್, ಟರ್ನಿಂಗ್ ಪಾಯಿಂಟ್ಸ್​ ಸೇರಿಕೊಂಡು ಸೀರಿಯಲ್ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸುತ್ತಿದೆ. ಇದೀಗ ಶ್ರೇಷ್ಠಾ ಮಯ್ಯಲ್ಲಿ ದೆವ್ವ ಹಿಡಿದವರಂತೆ ಆಡಿದ್ರೆ ಇತ್ತ, ಕೀರ್ತಿ ಆತ್ಮ ಲಕ್ಷೀ ದೇಹದಲ್ಲಿ ಸೇರ್ಕೊಂಡಿದೆ.. ಇದೀಗ ಲಕ್ಷ್ಮೀ ಮನೆಯವರ ಮುಂದೆ ಹೆಂಗೆಂಗೋ ಆಡ್ತಿದ್ದಾಳೆ. ಇದನ್ನ ನೋಡಿ ವೀಕ್ಷಕರು ಕೂಡ ಶಾಕ್‌ ಆಗಿದ್ದಾರೆ. ತಾಂಡವ್‌ ಹಾಗೂ ಕಾವೇರಿಗೆ ಮುಂದೈತೆ ಮಾರಿ ಹಬ್ಬ ಅಂತಾ ವೀಕ್ಷರು ಹೇಳ್ತಿದ್ದಾರೆ.

ಇದನ್ನೂ ಓದಿ : LSG ಮಾಲೀಕರಿಗೆ KL ಟಾಂಗ್ – ಕನ್ನಡಿಗ ರಾಹುಲ್ RCBಗೆ ಪಕ್ಕಾ

ಭಾಗ್ಯ ಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಈಗ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ. ಅಕ್ಕ-ತಂಗಿಯ ಕತೆ ಮೊದಲಿನಿಂದಲೂ ಟಫ್​ ಫೈಟ್​ ಕೊಡುತ್ತಾ ಬಂದಿದೆ.. ಭಾಗ್ಯ ಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ, ಶ್ರೇಷ್ಠ ಹಾಗೂ ತಾಂಡವ್​ ಸುತ್ತ ಕಥೆಯನ್ನು ಎಳೆಯಲಾಗಿದೆ. ಹೀಗಾಗಿ ಅಭಿಮಾನಿಗಳು ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಕೀರ್ತಿ, ಲಕ್ಷ್ಮೀ, ತಾಂಡವ್‌ ಹಾಗೂ ಕಾವೇರಿ ಸುತ್ತ ಕತೆಯನ್ನ ಎಳೆಯಲಾಗಿದೆ.

ಹೌದು, ಇತ್ತ ಭಾಗ್ಯ ಅತ್ತೆಯ ಮುದ್ದಿನ ಸೊಸೆ ಆಗಿದ್ರೆ. ಇತ್ತ ಕಾವೇರಿಗೆ ಲಕ್ಷ್ಮೀನ ಕಂಡ್ರೆ ಆಗೋದೆ ಇಲ್ಲ. ಭಾಗ್ಯ ಲಕ್ಷ್ಮೀ ಸೀರಿಯಲ್‌ನಲ್ಲಿ ತಾಂಡವ್‌ ಹಳಿ ತಪ್ಪಿಯಾಗಿದೆ. ಗಂಡನನ್ನ ಉಳಿಸಿಕೊಳ್ಳಲು ಭಾಗ್ಯ ಹೋರಾಡ್ತಿದ್ದಾಳೆ. ಆದ್ರೆ ಇತ್ತ ಶ್ರೇಷ್ಠ ತಾಂಡವ್​ನನ್ನು ಮದುವೆ ಆಗ್ಬೇಕು ಅಂತ ಖತರ್ನಾಕ್ ಪ್ಲಾನ್ ಮಾಡುತ್ತಿದ್ದಾಳೆ. ಆದರೆ ಇತ್ತ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಯ ಕುತಂತ್ರಕ್ಕೆ ಕೀರ್ತಿ ಬಲಿಯಾಗಿದ್ದಾಳೆ.. ಕೊಲೆ ಮಾಡಿ ಬಂದಿದ್ರು ಕೂಡ ಕಾವೇರಿ ಒಂಚೂರು ಪಾಪಪ್ರಜ್ಞೆ ಕಾಡ್ತಿಲ್ಲ.. ಮನೆಗೆ ಬಂದು ಡ್ಯಾನ್ಸ್‌ ಮಾಡಿ ಲಕ್ಷ್ಮೀ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಆದಾದ ಮೇಲೆ ಲಕ್ಷ್ಮೀ ವಿಚಿತ್ರವಾಗಿ ಆಡ್ತಿದ್ದಾಳೆ.. ಕೀರ್ತಿ ಶ್ರದ್ಧಾಂಜಲಿ ಸಭೆಯಲ್ಲಿ  ಕೀರ್ತಿ ಆತ್ಮ ಲಕ್ಷ್ಮೀ ಮೇಲೆ ಬಂದಿದೆ.

ಹೌದು ಕಲರ್ಸ್‌ ಕನ್ನಡ ವಾಹಿನಿ ಲಕ್ಷ್ಮೀಬಾರಮ್ಮ ಸೀರಿಯಲ್‌ ನ ಪ್ರೋಮೋ ಬಿಡುಗಡೆ ಮಾಡಿದೆ. ಕೀರ್ತಿಯ ಡೈರಿ  ಲಕ್ಷ್ಮೀ ಕೈಗೆ ಸಿಕ್ಕಿದ್ದು, ಅದನ್ನ ಆಕೆ ಓದಿದ್ದಾಳೆ. ಆ ಬಳಿಕ ಅವಳಲ್ಲಿ ಬದಲಾವಣೆ ಆಗಿದೆ. ಕೀರ್ತಿ ರೀತಿಯೇ ರೆಡಿ ಆಗಿ ಬಂದ ಲಕ್ಷ್ಮೀ ವೈಷ್ಣವ್‌ನನ್ನು ವೈಷ್ ಅಂತ ಕರೆದು ತಬ್ಬಿಕೊಂಡಿದ್ದಾಳೆ. ಇನ್ನು ನಾನು ಬದುಕಿದ್ದೀನಿ, ನನಗ್ಯಾಕೆ ಶ್ರದ್ಧಾಂಜಲಿ ಸಭೆ ಮಾಡ್ತೀರಾ ಅಂತ ಲಕ್ಷ್ಮೀ, ಕೀರ್ತಿ ಫೋಟೋವನ್ನು ಎಸೆದಿದ್ದಾಳೆ. ಲಕ್ಷ್ಮೀ ವರ್ತನೆ ಎಲ್ಲರಿಗೂ ಶಾಕ್‌ ಆಗುವಂತೆ ಮಾಡಿದೆ. ಕೀರ್ತಿ ಕೊಲೆ ಮಾಡಿರುವ ಕಾವೇರಿಗೆ ಈಗ ಲಕ್ಷ್ಮೀಯದ್ದೇ ಚಿಂತೆ ಆಗಿದೆ. ಸತ್ಯ ಕಂಡುಹಿಡಿಯುತ್ತೀನಿ, ಕೀರ್ತಿಗೆ ನ್ಯಾಯ ಕೊಡಸ್ತೀನಿ ಅಂತಿದ್ದ ಲಕ್ಷ್ಮೀ ಈಗ ಹೀಗ್ಯಾಕೆ ವರ್ತಿಸುತ್ತಿದ್ದಾಳೆ ಎನ್ನೋದು ಇನ್ನೊಂದು ಪ್ರಶ್ನೆ.

ಇನ್ನು ಬೆಟ್ಟದ ಮೇಲೆ ಕಾವೇರಿ ತಳ್ಳಿದ್ದರಿಂದಲೇ ಕೀರ್ತಿ ಕೆಳಗಡೆ ಬಿದ್ದಳು. ಅಲ್ಲಿ ಅವಳಿಗೆ ಪ್ರಜ್ಞೆ ತಪ್ಪಿತೋ ಅಥವಾ ಸತ್ತು ಹೋದಳೋ ಗೊತ್ತಿಲ್ಲ. ಎಲ್ಲರೂ ಕೀರ್ತಿ ಹುಡುಕಾಟದಲ್ಲಿರುವಾಗಲೇ ಕೀರ್ತಿಯದ್ದು ಎನ್ನಲಾದ ದೇಹವನ್ನು ತಂದು ಅಂತ್ಯಸಂಸ್ಕಾರ ಮಾಡಲಾಯ್ತು. ಬೆಟ್ಟದ ಮೇಲಿಂದ ಬಿದ್ದಾಗ ಅವಳ ಮುಖ ವಿಕಾರವಾಗಿರಲಿಲ್ಲ. ಆದರೆ ಎಪಿಸೋಡ್‌ನಲ್ಲಿ ಅವಳ ಮುಖವನ್ನೇ ತೋರಿಸದೆ ಅಂತ್ಯಕ್ರಿಯೆ ಮಾಡಲಾಗಿದೆ. ಕೀರ್ತಿಯ ಮುಖ ನೋಡಬೇಕು ಅಂತ ಲಕ್ಷ್ಮೀ ಒತ್ತಿ ಒತ್ತಿ ಹೇಳಿದರೂ ಕೂಡ “ಎಲ್ಲ ಪರೀಕ್ಷೆ ಮಾಡಿಯಾಗಿದೆ, ಅದು ಕೀರ್ತಿಯೇ” ಅಂತ ವೈಷ್ಣವ್ ಹೇಳಿದ್ದನು. ಇದನ್ನು ನೋಡಿದರೆ ಕೀರ್ತಿ ಸತ್ತಿಲ್ಲ, ಲಕ್ಷ್ಮೀ ಸತ್ಯ ಕಂಡುಹಿಡಿಯಲು ಹೀಗೆ ಆಡ್ತಿದ್ದಾಳೆ. ಕೀರ್ತಿ ಮುಂದೊಂದು ದಿನ ಧಾರಾವಾಹಿಯಲ್ಲಿ ಕಾಣಿಸ್ತಾಳೆ ಅಂತಾ ವೀಕ್ಷಕರು ಊಹೆ ಮಾಡ್ತಿದ್ದಾರೆ.

ಇದೀಗ ಲಕ್ಷ್ಮೀ ಕೀರ್ತಿಯಾಗಿ ಬದಲಾಗುತ್ತಿರೋದನ್ನ ನೋಡಿ ಫ್ಯಾನ್ಸ್‌ ಸಿಕ್ಕಾಪಟ್ಟೆ ಕಾಮೆಂಟ್‌ ಮಾಡ್ತಿದ್ದಾರೆ.. ನೋಡು ನೋಡು ಲಕ್ಷ್ಮೀ ಕೀರ್ತಿಯಾಗಿ ಬದಲಾಗ್ತಿದ್ದಾಳೆ ಅಂತಾ ವಿಷ್ಟುವರ್ಧನ್‌ ಸಿನಿಮಾ ಆಪ್ತಮಿತ್ರಗೆ ಹೋಲಿಕೆ ಮಾಡ್ತಿದ್ದಾರೆ. ಇನ್ನು ಕೆಲವರು ಕಾವೇರಿಯ ಮೋಸವನ್ನು ಬಯಲು ಮಾಡಲು ಲಕ್ಷ್ಮೀ ಈ ರೀತಿ ನಾಟಕ ಮಾಡುತ್ತಿರುವ ಸಾಧ್ಯತೆ ಜಾಸ್ತಿ ಇದೆ ಅಂತಾ ಹೇಳ್ತಿದ್ದಾರೆ.. ಮುಂದಿನ ದಿನಗಳಲ್ಲಿ ಕಾವೇರಿಯು ಲಕ್ಷ್ಮೀಯನ್ನು ಸಾಯಿಸಲು ಮುಹೂರ್ತ ಇಡ್ತಾಳೆ ಅಂತಾ ವೀಕ್ಷಕರು ಕುತೂಹಲದಿಂದ ಸೀರಿಯಲ್‌ ನೋಡ್ತಿದ್ದಾರೆ.

ಇನ್ನು ಭಾಗ್ಯಲಕ್ಷ್ಮೀ ಸೀರಿಯಲ್‌ ವಿಚಾರಕ್ಕೆ ಬರೋದಾದ್ರೆ‌ ತಾಂಡವ್ ಭಾಗ್ಯಳಿಗೆ ಡಿವೋರ್ಸ್‌ ನೀಡಿ ಶ್ರೇಷ್ಠಾಳನ್ನು ಮದುವೆ ಆಗೋ ಪ್ಲಾನ್ಸ್‌ ಮಾಡಿದ್ದ,.. ಆದ್ರೆ ಭಾಗ್ಯ ಡಿವೋರ್ಸ್‌ ಕೊಡಲು ಒಪ್ಪದೇ ಗಂಡನನ್ನ ಉಳಿಸಿಕೊಳ್ಳೋ ಹೋರಾಟ ಮಾಡ್ತಿದ್ದಾಳೆ. ಶ್ರೇಷ್ಠಾ ಎರಡು ಮಕ್ಕಳ ತಂದೆಯನ್ನ ಮದುವೆ ಆಗ್ತಾ ಇರೋದು ಅನ್ನೋ ವಿಚಾರ ಆಕೆಯ ಮನೆಯವರಿಗೆ ಗೊತ್ತಾಗಿದೆ. ಹೀಗಾಗಿ ಈ ಮದುವೆಗೆ ಒಪ್ಪಿಲ್ಲ. ನಿವ್ಯಾರು ಇಲ್ಲದೇ ನಾನು ಅವನನ್ನ ಮದುವೆ ಆಗ್ತೀನಿ ಅಂತಾ ಸವಾಲ್‌ ಹಾಕಿದ್ದಾಳೆ.. ಮೈಯಲ್ಲಿ ದೆವ್ವ ಬಂದವರಂತೆ ಆಡ್ತಿದ್ದಾಳೆ. ನಾಳೆಯೇ ನಮ್ಮಿಬ್ರ ಮದುವೆ ಅಂತಾ ತಾಂಡವ್‌ಗೆ ಹೇಳಿದ್ದಾಳೆ. ಈಗ ತಾಂಡವ್‌ ಅಡಕತ್ತರಿಯಲ್ಲಿ ಸಿಲುಕಿದ್ದಾನೆ. ಜೊತೆಗೆ ಶ್ರೇಷ್ಠ ನಾಗವಲ್ಲಿಯಾಗಿ ಆಡುತ್ತಿರೋ ಮಾತುಗಳು ಎದೆಬಡಿತ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಸದ್ಯ ಮುಂದಿನ ಎಪಿಸೋಡ್​ಗಳಲ್ಲಿ ಈ ಎರಡು ಸೀರಿಯಲ್​ಗಳು ಹೇಗೆ ತಿರುವು ಪಡೆದುಕೊಳ್ಳುತ್ತೆ ಅಂತಾ ಫ್ಯಾನ್ಸ್‌ ಕೂಡ ಕಾಯ್ತಿದ್ದಾರೆ.

Shwetha M