ಸಾವಿನ ಹೊಸ್ತಿಲಲ್ಲಿ ಲಕ್ಷ್ಮೀ, ಸಂಭ್ರಮದಲ್ಲಿ ಭಾಗ್ಯ! – ಲಡ್ಡು ಬಗ್ಗೆ ಯೋಚನೆಯೇ ಇಲ್ವಾ?
ಕಾಲ್ಪನಿಕ ಆದ್ರೂ ಲಿಂಕ್‌ ಬೇಡ್ವಾ?

ಸಾವಿನ ಹೊಸ್ತಿಲಲ್ಲಿ ಲಕ್ಷ್ಮೀ, ಸಂಭ್ರಮದಲ್ಲಿ ಭಾಗ್ಯ! – ಲಡ್ಡು ಬಗ್ಗೆ ಯೋಚನೆಯೇ ಇಲ್ವಾ?ಕಾಲ್ಪನಿಕ ಆದ್ರೂ ಲಿಂಕ್‌ ಬೇಡ್ವಾ?

ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಭಾಗ್ಯಲಕ್ಷ್ಮೀ ‌ ಹಾಗೂ ಲಕ್ಷ್ಮೀ ಬಾರಮ್ಮ ವೀಕ್ಷಕರ ಮನಗೆದ್ದಿದೆ.. ಭಾಗ್ಯ ಲಕ್ಷ್ಮೀ ಸೀರಿಯಲ್‌ನಲ್ಲಿ ಸೊಸೆಯೇ ತನಗೆ ಎಲ್ಲಾ ಎನ್ನುವ ಕುಸುಮಾ, ಇತ್ತ ಲಕ್ಷ್ಮೀಬಾರಮ್ಮ ಸೀರಿಯಲ್ ನಲ್ಲಿ  ತನ್ನ ಮಗನಿಗೆ ತಾನೇ ಆದ್ಯತೆ ಆಗಿರಬೇಕು ಎನ್ನುವ ಅತಿ ಆಸೆಯಲ್ಲಿರುವ ಕಾವೇರಿ.. ಅದರ ಮಧ್ಯೆ ಆಗಾಗ ಅಕ್ಕ ತಂಗಿಯ ಬಾಂಧವ್ಯವನ್ನು ತೋರಿಸಲಾಗುತ್ತಿದೆ. ಇದೀಗ ಎರಡು ಸೀರಿಯಲ್‌ ಕತೆ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯ 5ಸ್ಟಾರ್‌ ಹೋಟೆಲ್‌ನಲ್ಲಿ ಶೇಫ್‌ ಆಗಿ ಸೆಲೆಕ್ಟ್‌ ಆಗಿ ಸಂಭ್ರಮ ಪಡ್ತಾ ಇದ್ರೆ, ಲಕ್ಷ್ಮೀ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ.. ಇದೀಗ ವೀಕ್ಷಕರಿಗೆ ಹಲವು ಪ್ರಶ್ನೆಗಳು ಕಾಡ್ತಾ ಇದೆ.. ತಂಗಿ ಸಾಯೋ ಸ್ಥಿತಿಯಲ್ಲಿದ್ರೂ ಅಕ್ಕನಿಗೆ ಏನೂ ಅನ್ನಿಸ್ತಿಲ್ವಾ? ಲಕ್ಷ್ಮೀ ವಿಚಾರ ಗೊತ್ತಿದ್ರೂ ಭಾಗ್ಯ ಮುಖದಲ್ಲಿ ಸಂಭ್ರಮ ಬಿಟ್ರೆ ಒಂಚೂರು ನೋವೇ ಕಾಣ್ತಾ ಇಲ್ವಾಲ್ಲ ಯಾಕೆ ಅಂತಾ ಕೇಳ್ತಾ ಇದ್ದಾರೆ. ಅಷ್ಟೇ ಅಲ್ಲದೇ ಸೀರಿಯಲ್‌ ಟೀಂ ಕಾಟಾಚಾರಕ್ಕೆ ಸೀನ್‌ಗಳನ್ನ ಬರೀತಾರಾ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ.

ಇದನ್ನೂ ಓದಿ: IND Vs PAK ಕದನಕ್ಕೆ ಮುಹೂರ್ತ – ಪಾಕ್​ನಲ್ಲಿ ಚಾಂಪಿಯನ್ಸ್ ಟ್ರೋಫಿ ಫೈಟ್

ಲಕ್ಷ್ಮೀ ಬಾರಮ್ಮ ಹಾಗೂ ಭಾಗ್ಯ ಲಕ್ಷ್ಮೀ ಸೀರಿಯಲ್‌ ಸದ್ಯ ರೋಚಕ ಹಂತ ತಲುಪಿದೆ. ಭಾಗ್ಯ ಸ್ಟಾರ್‌ ಹೋಟೆಲ್‌ನಲ್ಲಿ ಶೆಫ್‌ ಆಗಿ ಸೆಲೆಕ್ಟ್‌ ಆಗಿದ್ದಾಳೆ.. ಆಕೆಯ ಸಾಧನೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.. ಆದ್ರೆ ಭಾಗ್ಯ ತಂಗಿ ಲಡ್ಡು ಆಸ್ಪ್ರತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸ್ತಾ ಇದ್ದಾಳೆ.. ವೈಷ್ಣವ್, ಲಕ್ಷ್ಮೀಯನ್ನು ಉಳಿಸಿಕೊಳ್ಳಲೇಬೇಕೆಂದು ಹಠ ಮಾಡಿ, ವ್ರತ ಮಾಡಿ ಬಂದಿದ್ದಾನೆ. ತಾನೇ ಇಷ್ಟ ಪಟ್ಟು ಮದುವೆ ಮಾಡಿಸಿದ್ದ ಕಾವೇರಿಗೆ ಲಕ್ಷ್ಮೀ ವೈಷ್ಣವ್‌ ಜೊತೆ ಇರೋದು  ಇಷ್ಟವಿಲ್ಲ. ಮಗನ ಜೀವನದಲ್ಲಿ ಹುಡುಗಿಯರೆ ಇರುವಂತೆ ಇಲ್ಲ. ಅತ್ತ ಕಡೆ ಕೀರ್ತಿಯನ್ನ ಕೊಲೆ ಆರೋಪಿ ಎಂಬಂತೆ ಬಿಂಬಿಸಿ, ಇತ್ತ  ಲಕ್ಷ್ಮೀಯನ್ನ ಸಾಯಿಸಲು ಕಾವೇರಿ ಮುಂದಾಗಿದ್ದಾಳೆ. ಐಸಿಯು ಒಳಗೆ ಬಂದ ಕಾವೇರಿ  ಆಕ್ಸಿಜನ್ ತೆಗೆದು ಲಕ್ಷ್ಮೀ ಉಸಿರಾಟ ನಿಲ್ಲಿಸಲು ಹೊರಟಿದ್ದಳು. ತಕ್ಷಣ ಅಲ್ಲಿಗೆ ಕುಸುಮಾ ಬಂದಿದ್ದಕ್ಕೆ ಬಚಾವ್ ಆದಳು ಲಕ್ಷ್ಮೀ.  ಬಳಿಕ ಕುಸುಮಾ ಕಾವೇರಿಗೆ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಿದ್ದಾಳೆ..

ಕುಸುಮಾಗೆ ಭಾಗ್ಯಳಂತೆ ಲಕ್ಷ್ಮೀಯೂ ತುಂಬಾ ಇಷ್ಟ..  ವೈಷ್ಣವ್ ಗೆ ಹುಡುಗಿ ನೋಡಬೇಕು ಎಂದಾಗ ಕುಸುಮಾನೇ ಮುಂದೆ ನಿಂತು ನೋಡಿ, ಮದುವೆ ಮಾಡಿಸಿದ್ದು. ಹೀಗಾಗಿ ತುಂಬಾನೇ ಇಷ್ಟ ಪಡುತ್ತಾಳೆ. ಆದರೆ‌ ಲಕ್ಷ್ಮೀಗೆ ಚಾಕು ಹಾಕಿದ್ದರು ಕುಸುಮಾಗೆ ನೋಡುವ ಆತುರವೇ ಇಲ್ಲ. ಇನ್ನು ಭಾಗ್ಯಾ ಕೂಡ ಒಂದೇ ದಿನ ಬಂದು ಕಣ್ಣೀರಿಟ್ಟು ಹೋಗಿದ್ದು. ಕುಸುಮಾ ಮನೆಯಲ್ಲೂ ಲಕ್ಷ್ಮೀಯ ವಿಚಾರವೇ ಪ್ರಸ್ತಾಪವಾಗಿಲ್ಲ.  ಹೀಗಾಗಿ ನಿಜ ಜೀವನದಲ್ಲಿ ಇಷ್ಟೆಲ್ಲಾ ಸಮಸ್ಯೆಯಾದಾಗ ಮನೆಯಲ್ಲಿ ಚರ್ಚೆ ಮಾಡದೆ ಇರುತ್ತಾರಾ ಅಂತಾ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.. ಯಾರೇ ಆಗಿರ್ಲಿ ತಂಗಿಗೆ ಸಮಸ್ಯೆ ಆದ್ರೆ ಅಕ್ಕ ಆದವಳಿಗೆ ಜೀವವೇ ಹೋದಂತೆ ಭಾಸವಾಗುತ್ತೆ.. ಕೈಕಾಲು ಆಡಲ್ಲ.. ಆದ್ರೆ ಭಾಗ್ಯ ಇಷ್ಟೊಂದು ಕೂಲ್‌ ಆಗಿರಲು ಹೇಗೆ ಸಾಧ್ಯ ಅಂತಾ ವೀಕ್ಷಕರು ಕೇಳ್ತಾ ಇದ್ದಾರೆ.. ಆರಂಭದಲ್ಲಿ ಅಕ್ಕ ತಂಗಿ ಕತೆಯನ್ನು ಒಂದೇ ಸೀರಿಯಲ್‌ನಲ್ಲಿ ತೋರಿಸಲಾಗುತ್ತಿತ್ತು.. ಬಳಿಕ ಭಾಗ್ಯ ಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಅಂತಾ  ಟೈಟಲ್‌ ಕೊಟ್ಟು ಸೀರಿಯಲ್‌ ಅನ್ನ ಎರಡು ಭಾಗ ಮಾಡಲಾಯ್ತು.. ಆದ್ರೂ ಆಗಾಗ ಎರಡು ಮನೆಯವರನ್ನ ಒಟ್ಟಾಗಿ ತೋರಿಸಲಾಗುತ್ತಿತ್ತು. ಆದ್ರೆ ಈ ಸೀರಿಯಸ್‌ ಮ್ಯಾಟರ್ ನಲ್ಲಿ ಯಾಕೆ ಸೀರಿಯಲ್‌ ಟೀಮ್‌ ಎಡವಿತು? ಎರಡು ಸೀರಿಯಲ್‌ಗೆ ಒಂಚೂರು ಲಿಂಕ್‌ ಆದ್ರೂ ಕೊಡ್ಬಾರ್ದಿತ್ತಾ ಅಂತಾ ವೀಕ್ಷಕರು ಸೀರಿಯಲ್‌ ಟೀಮ್‌ ಗೆ ಪ್ರಶ್ನೆ ಮಾಡ್ತಾ ಇದ್ದಾರೆ.. ಸೀರಿಯಲ್‌ ಬರೋ ಕತೆ ಕಾಲ್ವನಿಕ ಆಗಿದ್ರೂ ವೀಕ್ಷಕರು ತುಂಬಾನೇ ಸೀರಿಯಸ್‌ ಆಗಿ ತೆಗೆದುಕೊಂಡಿದ್ದಾರೆ..  ಸಣ್ಣಪುಟ್ಟ ತಪ್ಪುಗಳನ್ನೇ ವೀಕ್ಷರು ಬೊಟ್ಟು ಮಾಡುತ್ತಿದ್ದಾರೆ..

Shwetha M

Leave a Reply

Your email address will not be published. Required fields are marked *