ದಿಕ್ಕೇ ತೋಚದೆ ಓಡುತ್ತಿದ್ದ ಭಾಗ್ಯಾಗೆ ಕಾರು ಡಿಕ್ಕಿ – ಮನೆಯವ್ರಿಗೆ ತಾಂಡವ್ ಹೇಳಿದ್ದೇನು?
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕುತೂಹಲಕಾರಿ ತಿರುವು

ದಿಕ್ಕೇ ತೋಚದೆ ಓಡುತ್ತಿದ್ದ ಭಾಗ್ಯಾಗೆ ಕಾರು ಡಿಕ್ಕಿ – ಮನೆಯವ್ರಿಗೆ ತಾಂಡವ್ ಹೇಳಿದ್ದೇನು?ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕುತೂಹಲಕಾರಿ ತಿರುವು

ನೀನು ಇಷ್ಟವಿಲ್ಲ ಮನೆಗೆ ಬರಬೇಡ ಅಂತಾ ಗಂಡ ಹೇಳಿದ್ದಾನೆ. ಜೋರು ಮಳೆ ಸುರಿಯುತ್ತಿದೆ. ಅಪಘಾತವಾಗಿ ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದಾಳೆ. ಹಾಗಾದ್ರೆ ಭಾಗ್ಯ ಮುಂದೆ ಏನು ಮಾಡ್ತಾಳೆ? ಯಾರ ಮನೆಗೆ ಹೋಗ್ತಾಳೆ? ಕಥೆಯಲ್ಲಿ ಏನಾಗಬಹುದು? ಸದ್ಯಕ್ಕೆ ಕನ್ನಡ ಸೀರಿಯಲ್ ಅಭಿಮಾನಿಗಳನ್ನ ಕಾಡುತ್ತಿರುವ ಪ್ರಶ್ನೆಗಳಿವು. ಯಾಕೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ  ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ.

ಪ್ರಸಾರವಾದ ಕೆಲವೇ ದಿನಗಳಲ್ಲಿ ಜನಮನ್ನಣೆ ಗಳಿಸಿರುವ ಭಾಗ್ಯಲಕ್ಷ್ಮೀ ಧಾರಾವಾಗಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ಜೈಲು ಸೇರಿದ್ದ ತಾಂಡವ್ ನನ್ನ ಭಾಗ್ಯ ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಾಳೆ. ಬಳಿಕ ತನ್ನಿಷ್ಟದ ಸ್ಥಳಕ್ಕೆ ಹೆಂಡ್ತಿಯನ್ನ ಕರೆದುಕೊಂಡು ಹೋಗುವ ತಾಂಡವ್ ನೀನು ನನಗೆ ಇಷ್ಟ ಇಲ್ಲ ಅನ್ನೋದನ್ನ ಹೇಳಿದ್ದಾನೆ. ಎಲ್ಲಾದ್ರೂ ದೂರ ಹೊರಟೋಗು ಯಾರ ಕಣ್ಣಿಗೂ ಕಾಣಬೇಡ. ನೀನು ಅದೃಷ್ಟನ ಮದುವೆಯಾದೆ ನಾನು ದುರಾದೃಷ್ಟನ ಮದುವೆಯಾದೆ. ನನ್ನ ಮದುವೆಯಾದ ಮೇಲೆ ನಿನ್ನ ಅದೃಷ್ಟದ ಬಾಗಿಲು ತೆಗೆಯಿತು ನನ್ನ ಅದೃಷ್ಟದ ಬಾಗಿಲು ಶಾಶ್ವತವಾಗಿ ಮುಚ್ಚಿ ಹೋಯ್ತು ಅಂತಾ ತನ್ನ ಸಿಟ್ಟು ಹೊರಹಾಕಿದ್ದಾನೆ.

ಇದನ್ನೂ ಓದಿ : ಮುದ್ದಿನ ನಾಯಿ ನಾಪತ್ತೆಯಾಗಿದ್ದಕ್ಕೆ ನಟಿ ರಮ್ಯಾ ಕಣ್ಣೀರು – ಶ್ವಾನವನ್ನು ಹುಡುಕಿಕೊಡುವಂತೆ ಮನವಿ ಮಾಡಿದ ಮೋಹಕತಾರೆ..!

ತಾಂಡವ್ ಬಿಟ್ಟು ಹೋದ ಬಳಿಕ ಭಾಗ್ಯ ಅಕ್ಷರಶಃ ಬೀದಿಗೆ ಬಿದ್ದಿದ್ದಾಳೆ. ಜೋರು ಮಳೆಯ ನಡುವೆ ದಾರಿಯಲ್ಲಿ ಕುಸಿದು ಕುಳಿತಿದ್ದಾಳೆ. ಮುಂದೆ ಏನು ಮಾಡ್ಬೇಕು ಅಂತಾ ದಿಕ್ಕೇ ತೋಚದಾಗಿದೆ. ಇಲ್ಲ ನಾನು ಮನೆಗೆ ಹೋಗ್ಬೇಕು ಗುಂಡಣ್ಣ, ಬಂಗಾರಿ ಎಲ್ರೂ ಕಾಯ್ತಿರ್ತಾರೆ ಅಂತಾ ಓಡೋಕೆ ಶುರು ಮಾಡ್ತಾಳೆ. ಅತ್ತೆ ಕಾಯ್ತಿರ್ತಾರೆ, ಗುಂಡಣ್ಣ ಹೋಂ ವರ್ಕ್ ಬರೆದಿದ್ದಾನೋ ಇಲ್ವೋ. ಮಾವ ಚಿಂತೆಯಲ್ಲಿರ್ತಾರೆ. ಇವ್ರು ಮನೆಗೆ ಬರಬಾರದು ಅಂತಾ ಹೇಳಿದ್ದಾರೆ. ಏನ್ ಮಾಡ್ಲಿ ಅಂತಾ ಕಣ್ಣೀರಿಡುತ್ತ ಬರುವಾಗ್ಲೇ ಕಾರೊಂದು ಡಿಕ್ಕಿಯಾಗಿದೆ. ಭಾಗ್ಯ ಪ್ರಜ್ಞೆ ತಪ್ಪಿ ರಸ್ತೆಗೆ ಬಿದ್ದಿದ್ದಾಳೆ.

ಇತ್ತ ಭಾಗ್ಯಾಳನ್ನ ಅರ್ಧದಲ್ಲೇ ಬಿಟ್ಟು ಮನೆಗೆ ಬಂದಿರುವ ತಾಂಡವ್ ಅಪ್ಪನಿಗೆ ಹುಷಾರು ತಪ್ಪಿದ್ದು, ಶ್ರೇಷ್ಠಾ ಸಿಟ್ಟಾಗಿದ್ದು, ಜೈಲಿಗೆ ಹೋಗಿದ್ದು, ಜನರ ಮುಂದೆ ಅವಮಾನವಾಗಿದ್ದಕ್ಕೆಲ್ಲಾ ಆ ದರಿದ್ರ ಭಾಗ್ಯಾನೇ ಕಾರಣ ಅಂತಾ ಬೈದುಕೊಳ್ತಾನೆ. ಹಾಗೇ ಕೊನೆಗೂ ಭಾಗ್ಯಾಳನ್ನ ಮನೆಯಿಂದ ಕಳ್ಸೋ ಅವಕಾಶ ಇಷ್ಟು ದಿನಗಳ ನಂತರ ಸಿಕ್ಕೇಬಿಡ್ತು. ಸದ್ಯ ನನ್ ಲೈಫಿಂದ ತೊಲಗಿದ್ಲು. ಪೀಡೆ ಹೋಯ್ತು ಅಂತಾ ಹಾಯಾಗಿ ಇದ್ದುಬಿಡ್ತೇನೆ  ಅಂತಾ ಖುಷಿ ಪಡ್ತಿದ್ದಾನೆ. ಹಾಗೇ ಭಾಗ್ಯ ತವರು ಮನೆಗೆ ಹೋಗಿದ್ದಾಳೆ ಅಂತಾ ತನ್ನ ತಂದೆ ತಾಯಿ ಬಳಿ ಸುಳ್ಳು ಹೇಳಿದ್ದಾನೆ. ಹೀಗಾಗಿ ಭಾಗ್ಯ ಮರಳಿ ಮನೆಗೆ ಬರ್ತಾಳೋ..? ತವರು ಮನೆಗೆ ಹೋಗ್ತಾಳೋ..? ಕಾರು ಡಿಕ್ಕಿಯಾದವರೇ ಕರೆದೊಯ್ದು ಆರೈಕೆ ಮಾಡುತ್ತಾರೋ..? ಧಾರಾವಾಹಿಯಲ್ಲಿ ಮುಂದೇನು ಆಗಬಹುದೆಂದು ಅಭಿಮಾನಿಗಳೆಲ್ಲಾ ಕಾತರದಿಂದ ಕಾಯ್ತಿದ್ದಾರೆ.

suddiyaana