ಫ್ಯಾನ್ಸ್ ಐಡಿಯಾ ಕಿಟಕಿ ಹಾರಿದ ಮದುಮಗ – ಕುಸುಮಾ ಕೈಗೆ ಸಿಕ್ಕಿಬಿದ್ದ ತಾಂಡವ್‌
ಗಂಡನ ಮದ್ವೆಗೆ ಭಾಗ್ಯ ಬ್ರೇಕ್

ಫ್ಯಾನ್ಸ್ ಐಡಿಯಾ ಕಿಟಕಿ ಹಾರಿದ ಮದುಮಗ – ಕುಸುಮಾ ಕೈಗೆ ಸಿಕ್ಕಿಬಿದ್ದ ತಾಂಡವ್‌ಗಂಡನ ಮದ್ವೆಗೆ ಭಾಗ್ಯ ಬ್ರೇಕ್

ಫ್ಯಾನ್ಸ್ ಹೇಳಿದ್ದನ್ನ ಭಾಗ್ಯ ಲಕ್ಷ್ಮೀ ಸೀರಿಯಲ್‌ ತಂಡ ಸೀರಿಯಸ್ಸಾಗಿಯೇ ತಗೊಂಡಿರೋ ಹಾಗಿದೆ. ತಾಂಡವ್ ಹೆದ್ರಬೇಡ. ಕಿಟಕಿ ಹಾರಿ ಬಾರೋ ಅಂತಾ ಸುಮ್ಮನೆ ಕಾಲೆಳೆದಿದ್ದು ಅಷ್ಟೇ. ನೋಡಿದ್ರೆ, ಮದುಮಗ ತಾಂಡವ್ ಫ್ಯಾನ್ಸ್ ಹೇಳಿದಂಗೆ ಮಾಡಿಯೇ ಬಿಟ್ಟಿದ್ದಾರೆ. ಸೀದಾ ಕಿಟಕಿ ಹಾರಿ ಓಡೋಡಿ ಬಂದಿದ್ದಾನೆ. ಈ ಮೂಲಕ ಭಾಗ್ಯ ಲಕ್ಷ್ಮೀ ಸೀರಿಯಲ್‌ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಸದ್ಯ ತಾಂಡವ್‌ ಶ್ರೇಷ್ಠಾ ಮದುವೆ ಡ್ರಾಮ ಎಲ್ಲಿವರೆಗೂ ಬಂತು? ಶ್ರೇಷ್ಠಾ ನಾಗವಲ್ಲಿ ಅವತಾರಕ್ಕೆ ಫುಲ್ ಸ್ಟಾಪ್ ಬಿತ್ತಾ? ಕುಸುಮಾ ಇರುವಾಗ ತಾಂಡವ್ ಮದು ಮಗ ಆಗಲು ಸಾಧ್ಯಾನಾ ಅನ್ನೋ ವೀಕ್ಷಕರ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಇದನ್ನೂ ಓದಿ: ಡೆಂಗ್ಯೂ  ‘ಸಾಂಕ್ರಾಮಿಕ ಕಾಯಿಲೆ’- ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ!

ಭಾಗ್ಯ ಲಕ್ಷ್ಮೀ ಸೀರಿಯಲ್‌ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಿದೆ. ಶ್ರೇಷ್ಠಾ ತಾಂಡವ್‌ ಮದುವೆಗೆ ಭರ್ಜರಿ ಸಿದ್ಧತೆ ನಡೆದಿದೆ. ಭಾಗ್ಯ ಮೇಲೆ ಸೇಡು ತೀರಿಸಿಕೊಳ್ಳಲು ಶ್ರೇಷ್ಠಾ ಭರ್ಜರಿ ಪ್ಲ್ಯಾನ್‌ ಮಾಡಿದ್ದಾಳೆ.. ಅರಿಸಿನ, ಕುಂಕುಮ, ಹೂವು ಏನೂ ಬೇಡ ಎಂದು ಹೇಳಿದ್ದ ಶ್ರೇಷ್ಠಾ ಗ್ರ್ಯಾಂಡ್‌ ಆಗಿ ಮದುವೆ ಆಗಲು ಮುಂದಾಗಿದ್ದಾಳೆ.. ಬಾಡಿಗೆಗೆ ಜನ ಕರೆಸಿ, ಎಲ್ಲಾ ಶಾಸ್ತ್ರಗಳನ್ನ ಮಾಡಿಸ್ತಿದ್ದಾಳೆ.. ಈ ಹೊತ್ತಲ್ಲೇ ಭಾಗ್ಯ ಕುಸುಮಾ, ಶ್ರೇಷ್ಠಾ ತಂದೆ ತಾಯಿಯೊಂದಿಗೆ ಮದುವೆ ಹಾಲ್‌ ಗೆ ಎಂಟ್ರಿ ಕೊಟ್ಟಿದ್ದಾಳೆ. ಶ್ರೇಷ್ಠಾಳ ಸಂಭ್ರಮ ನೋಡಿ ಭಾಗ್ಯ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾಳೆ. ಅಷ್ಟೇ ಅಲ್ಲ, ಅರಿಶಿನ ಶಾಸ್ತ್ರಕ್ಕೆ ರೆಡಿಯಾಗಿ ಕೂತಿರೋ ಶ್ರೇಷ್ಠಾಗೆ ನಾನೇ ಅರಿಶಿನ ಹಚ್ಚುತ್ತೇನೆ ಬಾ ಎಂದು ಭಾಗ್ಯಾ, ಶ್ರೇಷ್ಠಾಳನ್ನು ಕರೆದುಕೊಂಡು ಹೋಗುತ್ತಾಳೆ. ವಧುವಿಗೆ ಅರಿಶಿನ ಹಚ್ಚಿ ಆಶೀರ್ವಾದ ಮಾಡಿ ಎಂದು ಪುರೋಹಿತರು ಹೇಳುತ್ತಾರೆ. ಆಗ ಭಾಗ್ಯಾ ಶ್ರೇಷ್ಠಾ ಕಿವಿ ಬಳಿ ಬಂದು, ಈ ಮದುವೆ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ, ನಿನ್ನ ಮದುವೆ ನಿಲ್ಲಿಸೋಕೆ ನಾವೆಲ್ಲಾ ಬಂದಿರುವುದು ಎನ್ನುತ್ತಾಳೆ. ಆಗ ಶ್ರೇಷ್ಠಾ, ಕೋಪದಿಂದ ಭಾಗ್ಯಗೆ ಸವಾಲ್‌ ಹಾಕಿದ್ದಾಳೆ.. ತಾನು ಮದುವೆ ಆಗಿ ನಿನ್ಗೆ ಸರ್‌ಪ್ರೈಸ್‌ ಕೊಡ್ತೇನೆ ಅಂತಾ ಹೇಳಿದ್ದಾಳೆ..

ಇನ್ನು ಕುಸುಮಾ,  ಶ್ರೇಷ್ಠಾಳಿಗಂತೂ ಬುದ್ಧಿ ಇಲ್ಲ, ಆಕೆಯನ್ನ ಮದುವೆ ಆಗುತ್ತಿರುವ ಹುಡುಗನಿಗಾದರೂ ಬುದ್ಧಿ ಬೇಡವೇ? ಎಲ್ಲಿ ಆ ಹುಡುಗ ? ಎಂದು ಯಶೋಧಾಳನ್ನು ಪ್ರಶ್ನಿಸುತ್ತಾಳೆ. ಸರಿ ನೀವೆಲ್ಲಾ ಇಲ್ಲೇ ಇರಿ, ನಾನು ಹೋಗಿ ಹುಡುಗನ್ನು ಹುಡುಕಿ ತರುತ್ತೇನೆ ಎಂದು ಕುಸುಮಾ ವರನನ್ನು ಭೇಟಿ ಆಗಲು ಹೊರಡುತ್ತಾಳೆ.  ಈ ವೇಳೆ ತಾಂಡವ್‌ ಹಾಲ್‌ಗೆ ಎಂಟ್ರಿ ಕೊಟ್ಟಿದ್ದಾನೆ..  ಈ ವೇಳೆ ಮದುಮಗ ಬಂದಿರೋ ಸುದ್ದಿ ಕುಸುಮಾಗೆ ಗೊತ್ತಾಗಿದೆ. ಮಂಟಪದ ಬಳಿ ಕುಸುಮಾ ಭಾಗ್ಯ ಹೋಗುತ್ತಿದ್ದಂತೆ, ಅಮ್ಮನನ್ನು ನೋಡಿ ತಾಂಡವ್‌  ಓಡಲು ಶುರುಮಾಡುತ್ತಾನೆ.. ಈ ವೇಳೆ ಕುಸುಮಾ ಓಡಿ ಹೋಗಿ ತಾಂಡವ್‌ ನನ್ನ ಹಿಡಿದ್ರೂ ಕೂಡಾ ತಾಂಡವ್ ಮುಖ ಕಾಣಿಸಲ್ಲ. ಕುಸುಮಾಗೆ ತನ್ನ ಮಗನೇ ಶ್ರೇಷ್ಠಾಳ ಮದುಮಗ ಅನ್ನೋದು ಗೊತ್ತಾಗಲ್ಲ. ಆದರೆ, ಇತ್ತ ಕುಸುಮ ಬೇರೆ ಕಾರಣಕ್ಕೆ ಮನೆಗೆ ಬಂದಾಗ ಕೈಗೆ ಮದುವೆ ಆಮಂತ್ರಣ ಸಿಗುತ್ತದೆ. ಅದರಲ್ಲಿ ಶ್ರೇಷ್ಠಾಳ ಜೊತೆ ತಾಂಡವ್ ಮದುವೆ ಫೋಟೋ ಶೂಟ್ ಮಾಡಿಕೊಂಡಿರೋ ಫೋಟೋ ಸಿಗುತ್ತದೆ. ಆಗ ಮದುವೆಯ ಡ್ರಾಮಕ್ಕೆ ಫುಲ್ ಸ್ಟಾಪ್ ಬೀಳೋದು ಗ್ಯಾರಂಟಿ. ಮತ್ತೊಂದೆಡೆ ದಡ್ಡಿ ಭಾಗ್ಯ ಯಾವತ್ತಿದ್ರೂ ಸ್ಮಾರ್ಟ್ ಅನ್ನೋದನ್ನ ಸೀರಿಯಲ್ ಟೀಮ್ ತೋರಿಸದೇ ಇರಲ್ಲ. ಇಲ್ಲಿ ಭಾಗ್ಯ ಕೂಡಾ ಶ್ರೇಷ್ಠಾಳಿಗೆ ಮದುವೆ ಆಗಲು ಬಿಡಲ್ಲ. ಭಾಗ್ಯ ಆಡಿದ ಮಾತು ಮರೆಯೋಕೆ ಚಾನ್ಸೇ ಇಲ್ಲ. ಇಲ್ಲಿ ಇರೋ ಕುತೂಹಲ ಏನಂದ್ರೆ, ತಾಂಡವ್ ಮೊದಲು ಸಿಕ್ಕಿಬೀಳೋದು ಅಮ್ಮನ ಕೈಗಾ, ಹೆಂಡ್ತಿ ಕೈಯಲ್ಲಾ ಅನ್ನೋದು.

Shwetha M

Leave a Reply

Your email address will not be published. Required fields are marked *