ಮದುವೆ ದಿನ ಮದುಮಗ ಲಾಕ್ – ತಾಂಡವ್ ಇಲ್ಲದೆ ಶ್ರೇಷ್ಠಾ ಮದುವೆ
ನಾಗವಲ್ಲಿಗೆ ಬುದ್ಧಿ ಕಲಿಸಿದ ಭಾಗ್ಯ

ಮದುವೆ ದಿನ ಮದುಮಗ ಲಾಕ್ – ತಾಂಡವ್ ಇಲ್ಲದೆ ಶ್ರೇಷ್ಠಾ ಮದುವೆನಾಗವಲ್ಲಿಗೆ ಬುದ್ಧಿ ಕಲಿಸಿದ ಭಾಗ್ಯ

ಭಾಗ್ಯಲಕ್ಷ್ನೀ ಸೀರಿಯಲ್ ನಲ್ಲಿ ಎಲ್ಲಾ ಓಕೆ. ಭಾಗ್ಯನಿಗೆ ತನ್ನ ಗಂಡ ತಾಂಡವ್ ಬಗ್ಗೆ ಸತ್ಯ ಗೊತ್ತಾಗೋದೇ ಇಲ್ಲ ಯಾಕೆ. ಈ ಪ್ರಶ್ನೆ ನಿಮಗೂ ಮೂಡಿರಬಹುದು. ಅದು ಸೀರಿಯಲ್ ಕಥೆ ಬಿಡಿ. ಧಾರಾವಾಹಿಯಲ್ಲಿ ಏನ್ ಬೇಕಾದ್ರೂ ನಡೆಯುತ್ತೆ. ಬುದ್ಧಿವಂತೆ ಭಾಗ್ಯ ಎಲ್ಲಾ ಕಂಡು ಹಿಡಿಯುತ್ತಾಳೆ. ಆದ್ರೆ, ತನ್ನ ಗಂಡನ ಸೆಕೆಂಡ್ ಸೆಟಪ್ ಮ್ಯಾಟರ್ ಮಾತ್ರ ಕಂಡು ಹಿಡಿಯೋದ್ರಲ್ಲಿ ಫೇಲ್ ಆಗಿದ್ದಾಳೆ. ಹಾಗಂತಾ ಶ್ರೇಷ್ಠಾ ಕುತ್ತಿಗೆಗೆ ತಾಂಡವ್ ತಾಳಿ ಕಟ್ತಾನಾ ಅಂತಲ್ಲ. ಭಾಗ್ಯ ತನಗೆ ಅರಿವಿಲ್ಲದಂತೆ ಗಂಡನ ಮದುವೆಗೆ ಅಡ್ಡಗಾಲು ಹಾಕಿದ್ದಾಳೆ. ಅದು ಹೇಗೆ ಎಂಬ ಡಿಟೇಲ್ಸ್ ಇಲ್ಲಿದೆ.

ಇದನ್ನೂ ಓದಿ: ಕಬಡ್ಡಿ ಅಖಾಡದಲ್ಲಿ ಕೋಟಿ ವೀರರು – ಬೆಂಗಳೂರು ಬುಲ್ಸ್ ಸ್ಟ್ರೆಂಥ್ ಹೇಗಿದೆ?

ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಶ್ರೇಷ್ಠಾ ಗೆಟಪ್ ಫುಲ್ ಚೇಂಜ್ ಆಗಿದೆ. ಒಂದು ರೇಂಜ್ ಗೆ ನಾಗವಲ್ಲಿಯೇ ಓಕೆ ಬಿಡಿ. ನಾಗವಲ್ಲಿಯನ್ನೂ ಮೀರಿಸೋ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ ಶ್ರೇಷ್ಠಾ. ಏನಾದರೂ ಮಾಡಿ ಭಾಗ್ಯಳಿಗೆ ಬುದ್ಧಿ ಕಲಿಸಲೇಬೇಕು ಅಂತಾ ಶ್ರೇಷ್ಠಾ ಅಪ್ಪ, ಅಮ್ಮನನ್ನೇ ಒದ್ದು, ಮದುವೆಗೆ ಮುಂದಾಗಿದ್ದಾಳೆ. ಪಾಪ.. ಭಾಗ್ಯ ಈಕೆ ಮದ್ವೆಯಾಗ್ತಿರೋದು ತನ್ನ ಗಂಡನನ್ನೇ ಅನ್ನೋ ವಿಷ್ಯನೇ ಗೊತ್ತಿಲ್ಲ, ಆದರೂ ಇಬ್ಬರು ಮಕ್ಕಳ ಅಪ್ಪನ ಜೊತೆ  ಮದ್ವೆಯಾಗ್ತಿದ್ದಾಳೆ ಅನ್ನೋದು ಮಾತ್ರ ಗೊತ್ತಿದೆ. ಸಾಲದಕ್ಕೆ ಮದ್ವೆ ಹೇಗೆ ತಪ್ಪಿಸ್ತಿಯಾ ನೋಡ್ತೇನೆ ಎಂದು ಭಾಗ್ಯಗೆ ಚಾಲೆಂಜ್​ ಹಾಕಿದ್ದಾಳೆ ಶ್ರೇಷ್ಠಾ.

ಭಾಗ್ಯಳ ಮೇಲಿನ ಸಿಟ್ಟಿಗೆ ಶ್ರೇಷ್ಠಾ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ರೆ, ಇತ್ತ ತಾಂಡವ್ ಸ್ಥಿತಿ ಕೇಳೋದೇ ಬೇಡ. ಶ್ರೇಷ್ಠಾ ತಾಂಡವ್​ ಜೊತೆ ಮದ್ವೆಯಾಗ್ತಿರೋ ಸತ್ಯ ಗೊತ್ತಿಲ್ಲದಿದ್ದರೂ, ಅವಳ ಹಿಂದೆ ಮುಂದೆ ತಿರುಗಾಡ್ತಿರೋ ತಾಂಡವ್​ ಅವಳ ಮದುವೆಗೆ ಹೋಗಿಯೇ ಹೋಗ್ತಾನೆ ಎನ್ನುವಷ್ಟು ತಲೆಯನ್ನು ಉಪಯೋಗಿಸಿದ್ದಾಳೆ ಕುಸುಮಾ. ಇದೇ ಕಾರಣಕ್ಕೆ ತಾಂಡವ್​ನನ್ನು ರೂಂ ಒಳಗೆ ಲಾಕ್​ ಮಾಡಿದ್ದಾಳೆ. ಇಡೀ ದಿನಕ್ಕಾಗುವಷ್ಟು ಏನು ಬೇಕೋ ಎಲ್ಲವನ್ನೂ ನೀಡುವಂತೆ ಭಾಗ್ಯಳಿಗೆ ಕುಸುಮಾ ಹೇಳಿದ್ದಾಳೆ. ಬೆಳಿಗ್ಗೆ ತಿಂಡಿಯಿಂದ ಹಿಡಿದು ರಾತ್ರಿಯ ಊಟದ ವರೆಗೆ ಎಲ್ಲವೂ ತಾಂಡವ್​ ರೂಮ್​ನಲ್ಲಿಯೇ ತಂದಿಡುವಂತೆ ಹೇಳಿದ್ದಾಳೆ ಕುಸುಮಾ. ಇದನ್ನು ಕೇಳಿ ತಾಂಡವ್​ಗೆ ಮೈಯೆಲ್ಲಾ ಉರಿದು ಹೋಗಿದೆ. ಇದೇನಿದು ಚಿಕ್ಕಮಕ್ಕಳಂತೆ ಎಂದು ಬೈದಿದ್ದಾನೆ. ಒಂದು ಕೆಲಸ ಮಾಡು, ಕೈ ಕಾಲು ಕಟ್ಟಿ ಹಾಕು ಎಂದಿದ್ದಾನೆ. ಸಮಯ ಬಂದ್ರೆ ಅದನ್ನೂ ಮಾಡ್ತೇನೆ ಎಂದಿದ್ದಾಳೆ ಕುಸುಮಾ. ಶ್ರೇಷ್ಠಾಳ ಹಿಂದೆ ಮುಂದೆ ತಿರುಗೋ ನೀನು ಅವಳ ಮದುವೆಗೆ ಹೋಗುವುದಿಲ್ಲ ಎನ್ನುವುದು ಏನು ಗ್ಯಾರೆಂಟಿ ಕೇಳುತ್ತಲೇ ಅಲ್ಲೇ ಕೂಡಿ ಹಾಕಿದ್ದಾಳೆ.

ಭಾಗ್ಯ ಅತ್ತೆ ಹೇಳಿದಂತೆ ತಾಂಡವ್ ಗೆ ಇಡೀ ದಿನಕ್ಕೆ ಬೇಕಾಗುವಷ್ಟು ರೆಡಿ ಮಾಡಿದ್ದಾಳೆ. ಮದುವೆ ದಿನವೇ ಮದುಮಗ ತಾಂಡವ್ ಲಾಕ್ ಆಗಿದ್ದಾರೆ. ಇದ್ರ ಮಧ್ಯೆ ಪ್ರೋಮೋ ನೋಡಿದ ಫ್ಯಾನ್ಸ್ ನಾನಾ ರೀತಿಯ ಕಾಮೆಂಟ್ ಮಾಡ್ತಿದ್ದಾರೆ. ​ ಅಭಿಮಾನಿಗಳು ವಾಷ್​ರೂಮ್​ ಬಗ್ಗೆ ಕಾಮೆಂಟ್ ಮಾಡ್ತಿದ್ದಾರೆ. ಕೂಡಿ ಹಾಕಿರೋ ಕೋಣೆಯಲ್ಲಿ ಅಟ್ಯಾಚ್​ ಬಾತ್​ರೂಮ್​ ಇದ್ಯಾ ಎಂದು ಕೇಳುತ್ತಿದ್ದಾರೆ. ಮತ್ತೆ ಕೆಲವರು, ಕಿಟಕಿಯಿಂದ ಹಾರು ಎಂದು ಸಲಹೆ ಕೊಡುತ್ತಿದ್ದಾರೆ. ಹಲವರಂತೂ ಕುಸುಮಾಳಿಗೆ ಭೇಷ್​ ಭೇಷ್​ ಎನ್ನುತ್ತಿದ್ದಾರೆ. ಅವನಿಗೆ ಅಲ್ಲೇ ಕೈ ಕಾಲು ಕಟ್ಟಿ ಕೂಡಿ ಹಾಕಿ, ಸುಮ್ಮನೇ ಬಿಡಬೇಡಿ ಎಂದಿದ್ದರೆ, ಮತ್ತೆ ಕೆಲವರು ಇಂಥ ಜಾಣ ಕುಸುಮಾಗೆ ಶ್ರೇಷ್ಠಾ ಮದ್ವೆಯಾಗ್ತಿರೋದು ತಾಂಡವ್​ನನ್ನೇ ಎನ್ನೋದು ಗೊತ್ತಾಗಿಲ್ಲ ಅನ್ನೋದೆ ವಿಚಿತ್ರ ಎನ್ನುತ್ತಿದ್ದಾರೆ. ಅತ್ತ ಮಗಳ ಇಂಥ ಕೆಟ್ಟ ವರ್ತನೆ ನೋಡಿ ಶ್ರೇಷ್ಠಾಳ ಅಪ್ಪ-ಅಮ್ಮನೂ ಮಗಳಿಗೆ ಬೈದಿದ್ದಾರೆ. ಅಂತೂ ಶ್ರೇಷ್ಠಾ ಮದ್ವೆಯಾಗೋ ಹಠಕ್ಕೆ ಬಿದ್ದಿದ್ದಾಳೆ. ಇತ್ತ ಮದುಮಗ ತಾಂಡವ್ ಮನೆಯಲ್ಲಿ ಲಾಕ್ ಆಗಿದ್ದಾನೆ. ಎಲ್ಲಾ ಗೊತ್ತಿರೋ ಪೂಜಾ ಕೂಡ ಇನ್ನೂ ಸೈಲೆಂಟ್​ ಆಗಿಯೇ ಇದ್ದಾಳೆ. ಈಗ ಶ್ರೇಷ್ಠಾ ಏನ್ ಮಾಡ್ತಾಳೆ. ತಾಂಡವ್ ಸೆಕೆಂಡ್ ಸೆಟಪ್ ಸೀಕ್ರೆಟ್ ರಿವೀಲ್ ಆಗುತ್ತಾ ಅನ್ನೋದೇ ಸಧ್ಯದ ಕುತೂಹಲ.

Shwetha M

Leave a Reply

Your email address will not be published. Required fields are marked *