ಬೇಷರಂ ಹಾಡಿನಲ್ಲಿ ಕೇಸರಿ ಡ್ರೆಸ್! – ‘ಶಾರುಖ್ ಸಿಕ್ರೆ ಜೀವಂತ ಸುಡ್ತೇನೆ’ – ಆಯೋಧ್ಯೆ ಸಂತ

ಬೇಷರಂ ಹಾಡಿನಲ್ಲಿ ಕೇಸರಿ ಡ್ರೆಸ್! – ‘ಶಾರುಖ್ ಸಿಕ್ರೆ ಜೀವಂತ ಸುಡ್ತೇನೆ’ – ಆಯೋಧ್ಯೆ ಸಂತ

ಮುಂಬೈ: ಶಾರುಖ್‌ ಖಾನ್ ಅಭಿನಯದ ಪಠಾನ್ ಚಿತ್ರದ ಬೇಷರಂ ಹಾಡು ಇದೀಗ ವಿವಾದಕ್ಕೊಳಗಾಗಿರುವುದು ತಿಳಿದೇ ಇದೆ. ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಹಸಿಬಿಸಿಯಾಗಿ ಕಂಡುಬಂದಿದ್ದು, ಹಾಡು ಹಾಗೂ ಪಠಾನ್ ಚಿತ್ರವನ್ನು ನಿಷೇಧಿಸಬೇಕೆಂದು ಇಂಟರ್ನೆಟ್‌ನಲ್ಲಿ ಬಾಯ್ಕಾಟ್ ಅಭಿಯಾನ ಆರಂಭವಾಗಿದೆ. ಹಿಂದೂ ಧರ್ಮದ ಪಾವಿತ್ರ್ಯ ಹಾಗೂ ಹಿಂದುತ್ವ ಧ್ವಜದ ಪ್ರತೀಕವಾಗಿರುವ ಕೇಸರಿ ಬಣ್ಣವನ್ನು ಚಿತ್ರದಲ್ಲಿ ಅಸಭ್ಯವಾಗಿ ಪ್ರದರ್ಶಿಸಲಾಗಿದೆ ಎಂಬುದಾಗಿ ಹೆಚ್ಚಿನ ಜನಪರ ನಾಯಕರು ಧ್ವನಿ ಎತ್ತಿದ್ದಾರೆ. ಅಲ್ಲದೇ ಹಿಂದುತ್ವಕ್ಕೆ ಅಪಪ್ರಚಾರವಾಗಿದೆ ಎಂಬ ಕೂಗು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಆಯೋಧ್ಯೆ ಸಂತರೊಬ್ಬರು ಬಾಲಿವುಡ್ ನಟ ಶಾರುಖ್ ಖಾನ್  ಸಿಕ್ಕರೆ ಜೀವಂತವಾಗಿ ಸುಟ್ಟು ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ‘ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ’ -ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಬೇಷರಂ ಹಾಡು ಕುರಿತು ಅಸಹಮಧಾನ ವ್ಯಕ್ತಪಡಿಸಿರುವ ಆಯೋಧ್ಯೆಯ ತಪಸ್ವಿ ಚಾವ್ನಿಯ ಮಹಂತ್ ಪರಮಹಂಸ ಆಚಾರ್ಯ, ‘ಬೇಷರಂ ರಂಗ್’ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ. ಈ ಬಗ್ಗೆ ನಮ್ಮ ಸನಾತನ ಧರ್ಮದ ಜನರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ನಾವು ಶಾರುಖ್ ಖಾನ್ ಅವರ ಪೋಸ್ಟರ್ ನ್ನು ಸುಟ್ಟು ಹಾಕಿದ್ದೇವೆ. ನಾನು ಶಾರುಖ್ ಖಾನ್ ಅವರನ್ನು ಭೇಟಿಯಾದರೆ, ಜೀವಂತವಾಗಿ ಸುಡುತ್ತೇನೆ ಎಂದಿದ್ದಾರೆ.

‘ಪಠಾಣ’ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದರೆ ಬೆಂಕಿ ಹಚ್ಚುತ್ತೇನೆ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ‘ಪಠಾಣ್’ಚಿತ್ರವನ್ನು ಬಹಿಷ್ಕರಿಸುವಂತೆ ಮನವಿ ಮಾಡಿದ್ದಾರೆ.

ಈ ಹಿಂದೆ ಹನುಮಾನ್ ಗರ್ಹಿಯ ಅರ್ಚಕ ಮಹಂತ್ ರಾಜು ದಾಸ್ ಕೂಡ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರಾಜಕಾರಣಿಗಳು ಮತ್ತು ಬಲಪಂಥೀಯ ಬೆಂಬಲಿಗರು ಚಿತ್ರದ ‘ಬೇಷರಂ ರಂಗ್’ ಹಾಡಿನಲ್ಲಿ ಕೇಸರಿ ಬಣ್ಣದ ಬಟ್ಟೆಗಳನ್ನು ವಿರೋಧಿಸುತ್ತಿದ್ದಾರೆ. ಅಲ್ಲದೇ ಶಾರುಖ್‌ ಖಾನ್ ವಿರುದ್ಧ ಮುಸ್ಲಿಂ ಸಂಘಟನೆಗಳು ಸಹ ಅಪಸ್ವರ ಎತ್ತಿವೆ.

suddiyaana