ಬೆಂಗಳೂರಿನ ಇನ್ಸಿಡೆಂಟ್ ಬಳಿಕ ಎಚ್ಚೆತ್ತ ಬಿಸಿಸಿಐ – ಐಪಿಎಲ್ ನಲ್ಲಿ ಮುಂದಿನ ಸೀಸನ್ ಗಳಲ್ಲಿ ಹೊಸ ರೂಲ್ಸ್

ಇದೊಂದು ಕಪ್ಗಾಗಿ.. ಇದೊಂದು ಚಾಂಪಿಯನ್ ಟೈಟಲ್ಗಾಗಿ ಆರ್ಸಿಬಿ ಸತತ 18 ವರ್ಷ ಕಾಯಬೇಕಾಯ್ತು. ಕೊನೆಗೂ ಟ್ರೋಫಿ ಕೈ ಸೇರ್ತು ಅನ್ನುವಾಗ್ಲೇ ಅದೇ ಕಪ್ಗೆ ರಕ್ತದ ಕಲೆ ಮೆತ್ತಿಕೊಂಡಿದೆ. ಹನ್ನೊಂದು ಜನರ ಅತ್ಯಮೂಲ್ಯ ಜೀವಗಳನ್ನ ಕಳ್ಕೊಂಡಿದ್ದೇವೆ. ಇಡೀ ಕ್ರಿಕೆಟ್ ಜಗತ್ತನ್ನೇ ಆಘಾತಕ್ಕೀಡು ಮಾಡಿರೋ ಈ ದುರಂತದ ಬೆನ್ನಲ್ಲೇ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಆರ್ಸಿಬಿಗೆ ನೀಡಿದ ಟ್ರೋಫಿ ಹಿಂಪಡೆದಿದೆ. ಹಾಗೇ ನೆಕ್ಸ್ಟ್ ಟ್ರೋಫಿ ಗೆಲ್ಲುವ ಎಲ್ಲಾ ತಂಡಗಳಿಗೂ ಬಿಗ್ ಶಾಕ್ ಕೊಟ್ಟಿದೆ.
ಇದನ್ನೂ ಓದಿ : ಸಿಎಂ, ಡಿಸಿಎಂ, ಗೃಹಸಚಿವರು RCB ಘಟನೆಯ ಜವಾಬ್ದಾರಿ ಹೊತ್ತು ಈ ಕೂಡಲೇ ರಾಜೀನಾಮೆ ನೀಡಬೇಕು – ಬಿ.ಎಸ್. ಯಡಿಯೂರಪ್ಪ
ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತವಾಗಿ 11 ಜನ ಪ್ರಾಣ ಬಿಟ್ಟಿದ್ದಾರೆ. ಆರ್ಸಿಬಿ ವಿಕ್ಟರಿ ಪರೇಡ್ನಲ್ಲಿ ನಡೆದ ಈ ಘನಘೋರ ದುರಂತಕ್ಕೆ ಐಪಿಎಲ್ & ಬಿಸಿಸಿಐ ಮ್ಯಾನೇಜ್ಮೆಂಟ್ ಕೂಡ ಕೆರಳಿ ಕೆಂಡವಾಗಿದೆ. ಇಷ್ಟೆಲ್ಲಾ ಅವಾಂತರಕ್ಕೆ ನಾವು ಹೊಣೆ ಅಲ್ಲ ಅಂತಾ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ರು. ಅಲ್ದೇ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವದ ವಿಚಾರವಾಗಿ ಬಿಸಿಸಿಐ ಜೊತೆಗೆ ಕರ್ನಾಟಕ ಕ್ರಿಕೆಟ್ ಆಸೋಸಿಯೇಷನ್ ಕಡೆಯಿಂದ ಯಾವುದೇ ಮಾಹಿತಿ ನೀಡಿರಲಿಲ್ಲ. ಸೋ ಇದಕ್ಕೂ ನಮ್ಗೂ ಯಾವುದೇ ಸಂಬಂಧ ಇಲ್ಲ ಅಂತಾ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಹಾಗೇ ಈ ಟ್ರಾಜಿಡಿ ಬಳಿಕ ಮುಂದಿನ ಐಪಿಎಲ್ ಫೈನಲ್ ಪಂದ್ಯಗಳನ್ನ ಗೆದ್ದ ತಂಡಗಳಿಗೆ ಸ್ಟ್ರಿಕ್ಟ್ ರೂಲ್ಸ್ ತರೋ ಹಿಂಟ್ ಕೊಟ್ಟಿದ್ದಾರೆ.
ಬೆಂಗಳೂರಿನ ಇನ್ಸಿಡೆಂಟ್ ಬಳಿಕ ಬಿಸಿಸಿಐ ಮುಂದಿನ ದಿನಗಳಲ್ಲಿ ಇಂತಹ ಘೋರ ಘಟನೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. 11 ಜನರ ಸಾವಿನ ಹಿಂದೆ ಕೆಎಸ್ಸಿಎ ಹಾಗೇ ಆರ್ಸಿಬಿ ಫ್ರಾಂಚೈಸಿಯ ಎಡವಟ್ಟುಗಳು ಆಗಿರೋದನ್ನ ಕೂಡ ಗಮನಿಸಿ ಮುಂದಿನ ದಿನಗಳಲ್ಲಿ ಇಂತಾ ತಪ್ಪುಗಳು ಎಸಗದಂತೆ ಅಲರ್ಟ್ ಆಗಿದೆ. ಹಾಗೇ 2026ರ ಸೀಸನ್ನ ಬಳಿಕ ಐಪಿಎಲ್ ಗೆಲ್ಲುವಂತ ವಿಜೇತ ತಂಡಗಳಿಗೆ ಒಂದಷ್ಟು ಗೈಡ್ ಲೈನ್ಸ್ ರಿಲೀಸ್ ಮಾಡಲಾಗುತ್ತೆ. ವಿಜಯೋತ್ಸವ, ಪರೇಡ್ ನಡೆಸೋಕೆ ಮುಂದಾಗಿದ್ರೆ ಮೊದಲು ಐಪಿಎಲ್ ಹಾಗೇ ಬಿಸಿಸಿಐ ಮ್ಯಾನೇಜ್ಮೆಂಟ್ಗೆ ತಿಳಿಸಬೇಕು. ಕಾರ್ಯಕ್ರಮ ಎಲ್ಲಿ ಯಾವಾಗ ಎಷ್ಟು ಗಂಟೆಗೆ ಅನ್ನೋದನ್ನೆಲ್ಲಾ ತಿಳಿಸಿ ಮೇಲಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲೇಬೇಕು. ಯಾಕಂದ್ರೆ ಆರ್ಸಿಬಿ ತಮ್ಮ ವಿಕ್ಟರಿ ಪರೇಡ್ ಬಗ್ಗೆ ಐಪಿಎಲ್ ಮ್ಯಾನೇಜ್ಮೆಂಟ್ ಗಮನಕ್ಕೆ ತಂದಿರಲೇ ಇಲ್ಲ. ಅಲ್ದೇ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜನೆಗೂ ಮೊದಲು ಸೂಕ್ತ ಭದ್ರತೆ ತೆಗೆದುಕೊಳ್ಳಲಾಗಿದ್ಯಾ, ಎಷ್ಟು ಜನ ಸೇರಬಹುದು, ಅಭಿಮಾನಿಗಳ ಸೇಫ್ಟಿಗೆ ಏನೆಲ್ಲಾ ಕ್ರಮಗಳನ್ನ ಕೈಗೊಳ್ಳಲಾಗಿದೆ ಅನ್ನೋದ್ರ ಬಗ್ಗೆ ಮಾಹಿತಿ ಕೊಡ್ಬೇಕು. ಹಾಗೇ ಅಭಿಮಾನಿಗಳಿಗೆ ಕಾರ್ಯಕ್ರಮಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಕೊಡ್ಬೇಕು. ಎಷ್ಟು ಗಂಟೆಗೆ ಪ್ರೋಗ್ರಾಂ ಇರುತ್ತೆ, ಎಷ್ಟು ಜನರಿಗೆ ಅವಕಾಶ ಇರುತ್ತೆ, ಟಿಕೆಟ್ಗಳನ್ನ ಹೇಗೆ ಪಡೆಯಬೇಕು ಅನ್ನೋ ಬಗ್ಗೆ ಫ್ಯಾನ್ಸ್ಗೆ ಕ್ಲಾರಿಟಿ
2007 ಮತ್ತು 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ಬಿಸಿಸಿಐ ಮುಂಬೈನಲ್ಲಿ ವಿಜಯೋತ್ಸವ ಮೆರವಣಿಗೆಗಳನ್ನು ಆಯೋಜನೆ ಮಾಡಿತ್ತು. ಹಾಗೇ ಯಶಸ್ವಿಯಾಗಿ ನಿಭಾಯಿಸಿತ್ತು. ಆದರೆ ಆ ಕಾರ್ಯಕ್ರಮಗಳು ಸಣ್ಣ ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ. ಆದ್ರೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮ ವಿಧಾನಸೌಧದಲ್ಲಿ ಪ್ರಾರಂಭವಾಗಿ 2 ಕಿಲೋ ಮೀಟರ್ ದೂರದಲ್ಲಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಗೊಳ್ಳಬೇಕಿತ್ತು. ಮೊದ್ಲೇ ಬೆಂಗಳೂರಲ್ಲಿ ವೆಹಿಕಲ್ಸ್ ಓಡಾಡೋದೇ ಕಷ್ಟ. ಅಂಥಾದ್ರಲ್ಲಿ ಸಣ್ಣ ಜಾಗದಲ್ಲಿ ಲಕ್ಷಾಂತರ ಜನ ಸೇರಿದ್ದು ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು. ಅದ್ರ ಜೊತೆಗೆ ಓಪನ್-ಟಾಪ್ ಬಸ್ ಪೆರೇಡ್ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದು ಗೊಂದಲವನ್ನು ಜಾಸ್ತಿ ಮಾಡಿತ್ತು. ಹಾಗೇ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳ ಮೊದಲು ಫ್ರಾಂಚೈಸಿ ಅದಕ್ಕಾಗಿ ವಿಶೇಷ ಪಾಸ್ಗಳನ್ನು ನೀಡಲಾಗುವುದು ಎಂದು ಘೋಷಿಸಿತ್ತು.
ಇನ್ನು ಆರ್ಸಿಬಿ ಅಭಿಮಾನಿಗಳ ದುರಂತ ಅಂತ್ಯದ ನಡುವೆ ಬಿಸಿಸಿಐ ಆರ್ಸಿಬಿಯಿಂದ ಟ್ರೋಫಿಯನ್ನು ಹಿಂದಕ್ಕೆ ಪಡೆದುಕೊಂಡಿದೆ. ಹಾಗಂತ ಈ ಸಾವುನೋವುಗಳಿಂದಾಗಿ ವಾಪಸ್ ಪಡೆದಿದ್ದಲ್ಲ. ಬಿಸಿಸಿಐ ಐಪಿಎಲ್ ಟ್ರೋಫಿಯನ್ನು ಆರ್ಸಿಬಿಯಿಂದ ಅಷ್ಟೇ ಅಲ್ಲ ಇದಕ್ಕೂ ಮೊದ್ಲು ಗೆದ್ದ ಎಲ್ಲಾ ತಂಡಗಳಿಂದಲೂ ಹಿಂದಕ್ಕೆ ಪಡೆದುಕೊಂಡಿದೆ. ಬಿಸಿಸಿಐ ನಿಯಮಗಳ ಪ್ರಕಾರ, ಯಾವುದೇ ತಂಡವು ಐಪಿಎಲ್ನಲ್ಲಿ ಗೆದ್ದಾಗ ಅದರ ಮೂಲ ಟ್ರೋಫಿಯನ್ನು ನೀಡಲಾಗುತ್ತದೆ. ಹಾಗೇ ಒಂದೆರಡು ದಿನಗಳನ್ನ ಬಿಟ್ಟು ಅದನ್ನು ಹಿಂದಕ್ಕೆ ತೆಗೆದುಕೊಂಡು ಅದೇ ಮಾದರಿಯ ಮತ್ತೊಂದು ಟ್ರೋಫಿಯನ್ನು ನೀಡಲಾಗುತ್ತದೆ. ವರದಿಗಳ ಪ್ರಕಾರ ಐಪಿಎಲ್ ಟ್ರೋಫಿಯ ಬೆಲೆ 30 ರಿಂದ 50 ಲಕ್ಷ ರೂಪಾಯಿ ಆಗಿದ್ದು ಇದು ಇಡೀ ಕ್ರೀಡಾ ಜಗತ್ತಿನಲ್ಲಿ ಅತ್ಯಂತ ದುಬಾರಿ ಟ್ರೋಫಿಗಳಲ್ಲಿ ಒಂದಾಗಿದೆ. ಈ ಟ್ರೋಫಿಯನ್ನು 2008 ರಿಂದಲೂ ಭಾರತದ ಖ್ಯಾತ ಆಭರಣ ಕಂಪನಿ ಓರ್ರಾ ತಯಾರಿಸುತ್ತಿದೆ. ಐಪಿಎಲ್ ಟ್ರೋಫಿಯನ್ನು ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಲಾಗಿದೆ. ಇದರ ತೂಕ 6 ಕೆಜಿ ಇದ್ದು 26 ಇಂಚು ಎತ್ತರವಿದೆ.