ಬ್ಯಾಂಕ್ ಜನಾರ್ದನ್ ಆರೋಗ್ಯದಲ್ಲಿ ಚೇತರಿಕೆ – ಸಹಕಲಾವಿದರನ್ನು ನೋಡಿ ಭಾವುಕರಾದ ಹಿರಿಯ ನಟ

ಬ್ಯಾಂಕ್ ಜನಾರ್ದನ್ ಆರೋಗ್ಯದಲ್ಲಿ ಚೇತರಿಕೆ – ಸಹಕಲಾವಿದರನ್ನು ನೋಡಿ ಭಾವುಕರಾದ ಹಿರಿಯ ನಟ

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಬ್ಯಾಂಕ್ ಜನಾರ್ದನ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬ್ಯಾಂಕ್ ಜನಾರ್ದನ್ ಅವರಿಗೆ ಸೆ.25, ಸೋಮವಾರ ಸಂಜೆ ಹೃದಯಾಘಾತವಾಗಿತ್ತು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಿರಿಯ ನಟನಿಗೆ ಚಿಕಿತ್ಸೆ ಮುಂದುವರೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಭೇಟಿಯಾದ ನಟ ಯಶ್‌! – ಹಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರಾ ರಾಕಿಭಾಯ್?‌

ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಸಂಬಂಧಿ ಸಮಸ್ಯೆ ಇದ್ದು, ಮೂರನೇ ಬಾರಿಗೆ ಅವರಿಗೆ ಈ ರೀತಿ ಹೃದಯಾಘಾತವಾಗಿದೆ ಎಂದು ಹೇಳಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿಯುತ್ತಿದ್ದಂತೆಯೇ, ಅನೇಕ ಸಹ ಕಲಾವಿದರು, ಅವರ ಆಪ್ತರು ಆಸ್ಪತ್ರೆಗೆ ಧಾವಿಸಿ, ಅವರ ಆರೋಗ್ಯ ವಿಚಾರಿಸಿದ್ದಾರೆ.  ಇನ್ನು ಬ್ಯಾಂಕ್ ಜನಾರ್ದನ್ ಅವರನ್ನು ಭೇಟಿ ಮಾಡಿದ ಮೇಲೆ ಸಮಾಧಾನವಾಗಿದೆ ಎಂದು ಸಹಕಲಾವಿದರು ಹೇಳಿದ್ದಾರೆ. ಅವರು ಆರೋಗ್ಯವಾಗಿದ್ದಾರೆ, ಆರಾಮಾಗಿದ್ದಾರೆ. ನಮ್ಮೊಂದಿಗೆ ಮಾತನಾಡಿದರು. ಕಲಾವಿದರು ಎಲ್ಲರೂ ಅವರನ್ನು ನೋಡಲು ಬಂದಿದ್ದಕ್ಕೆ ಖುಷಿಯಾದರು ಎಂದು ಸಹಕಲಾವಿದರು ತಿಳಿಸಿದ್ದಾರೆ. ಜನಾರ್ದನ್ ಅವರು ಹುಷಾರಾಗಿರಬೇಕು, ಅವರು ಬೇಗ ಗುಣಮುಖರಾಗಿ ವಾಪಸ್ ಬರಬೇಕು. ಆಸ್ಪತ್ರೆಯಿಂದ ಯಾವಾಗ ಡಿಸ್ಚಾರ್ಜ್ ಮಾಡುತ್ತಾರೆ ಎಂಬುದರ ಬಗ್ಗೆ ವೈದ್ಯರು ಏನೂ ಮಾಹಿತಿ ನೀಡಿಲ್ಲ. ಸದ್ಯಕ್ಕಂತೂ ಚಿಕಿತ್ಸೆ ನಡೆಯುತ್ತಲೇ ಇದೆ. ಯಾವುದೇ ಅಪಾಯ ಇಲ್ಲ, ನಮ್ಮನ್ನೆಲ್ಲ ನೋಡಿ ಬ್ಯಾಂಕ್ ಜನಾರ್ದನ್ ಅವರು ತುಂಬ ಭಾವುಕರಾದರು ಎಂದು ಸಹಕಲಾವಿದರು ತಿಳಿಸಿದ್ದಾರೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯವರಾದ ಪೋಷಕ ನಟ ಬ್ಯಾಂಕ್ ಜನಾರ್ದನ್ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. 80ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಜಗಜಾಂತರ, ತರ್ಲೆ ನನ್ಮಗ, ಶ್, ರೂಪಾಯಿ ರಾಜ, ಚೆಲುವ, ಮೇಕ್ಅಪ್, ರಂಗ ಎಸ್ಎಸ್ಎಲ್ಸಿ, ಲಿಫ್ಟ್ ಕೊಡ್ಲಾ ಸೇರಿದಂತೆ ನೂರಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

Sulekha