‘ಕಾಲುಂಗುರ ಲಡ್ಡು ಕಾಲಿಗೆ.. ತಾಳಿ ಕೀರ್ತಿ ಕೊರಳಿಗೆ’ – ‘ಭಾಗ್ಯಲಕ್ಷ್ಮೀ’ಯ ವೈಷ್ಣವ್ ಮದುವೆಯಾಗಿದ್ದು ಯಾರನ್ನ?

‘ಕಾಲುಂಗುರ ಲಡ್ಡು ಕಾಲಿಗೆ.. ತಾಳಿ ಕೀರ್ತಿ ಕೊರಳಿಗೆ’ – ‘ಭಾಗ್ಯಲಕ್ಷ್ಮೀ’ಯ ವೈಷ್ಣವ್ ಮದುವೆಯಾಗಿದ್ದು ಯಾರನ್ನ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಈಗಾಗ್ಲೇ ಸಾಕಷ್ಟು ಜನಮನ್ನಣೆ ಗಳಿಸಿದೆ. ಸದ್ಯ ಸೀರಿಯಲ್ ನಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಮದುವೆ ಸಂಪ್ರದಾಯಗಳು ಭರ್ಜರಿಯಾಗಿ ನಡೆಯುತ್ತಿವೆ. ಕೀರ್ತಿಯನ್ನ ಮನಸಾರೆ ಪ್ರೀತಿಸಿದ್ದ ವೈಷ್ಣವ್ ಹೆತ್ತವರ ಒತ್ತಾಸೆಗೆ ಕಟ್ಟು ಬಿದ್ದು ಲಕ್ಷ್ಮೀಯನ್ನೇ ಮದುವೆಯಾಗ್ತಾನಾ ಅಥವಾ ಕೀರ್ತಿಯನ್ನೇ ಕೈಹಿಡಿಯುತ್ತಾನಾ ಅನ್ನೋ ಸಸ್ಪೆನ್ಸ್ ಎಲ್ಲರನ್ನ ಕಾಡ್ತಿದೆ.

ಈಗಾಗ್ಲೇ ಲಕ್ಷ್ಮೀ ಹಾಗೂ ವೈಷ್ಣವ್ ಅರಿಶಿನ ಶಾಸ್ತ್ರ ಮುಗಿದಿದ್ದು ಮನೆ ಮಂದಿಯೆಲ್ಲಾ ಸಂಭ್ರಮದಿಂದ ಭಾಗಿಯಾಗಿದ್ದಾರೆ. ದೇವಸ್ಥಾನದಲ್ಲಿ ಇಬ್ಬರ ಮದುವೆ ನಡೆಯುತ್ತಿದ್ದು ಕೀರ್ತಿ ಕೂಡ ಬಂದಿದ್ದಾಳೆ. ಕೀರ್ತಿ ಹಾಗೂ ವೈಷ್ಣವ್ ಮುಖಾಮುಖಿ ಭೇಟಿಯಾದಾಗ ಇಬ್ಬರ ಮಧ್ಯೆ ವಾಗ್ವಾದ ನಡೆಯುತ್ತೆ. ಈ ವೇಳೆ ವೈಷ್ಣವ್ ನಾನೇ ಬೇಡ ಎಂದ ಮೇಲೆ ನಾನು ಕೊಡಿಸಿರುವ ಸರವನ್ನ ಯಾಕೆ ಹಾಕಿಕೊಂಡಿದ್ದೀಯಾ ಕೊಡು ಅಂತಾನೆ. ಆಗ ಕೀರ್ತಿ ಬಿಚ್ಚಿ ಕೊಡುತ್ತಾಳೆ. ಈ ವೇಳೆ ಲಕ್ಷ್ಮೀ ಅಲ್ಲಿಗೆ ಬರುತ್ತಾಳೆ. ಕೀರ್ತಿಯ ಮುಂದೆ ಬೇಕಂತಲೇ ಆ ಸರವನ್ನ ಲಕ್ಷ್ಮೀ ಕೊರಳಿಗೆ ವೈಷ್ಣವ್ ಹಾಕುತ್ತಾನೆ. ಬಳಿಕ ಈಗಲೂ ಕಾಲ ಮಿಂಚಿಲ್ಲ ನಾವಿಬ್ಬರೂ ಒಂದಾಗಬಹುದು ಎಂಬುದನ್ನ ಸೂಕ್ಷ್ಮವಾಗಿ ಕೀರ್ತಿಗೆ ತಿಳಿಸುತ್ತಾನೆ. ಆದ್ರೆ ಕೀರ್ತಿ ಮಾತ್ರ ವೈಷ್ಣವ್ ಮೇಲೆ ಗರಂ ಆಗಿಯೇ ಇದ್ದಾಳೆ.

ಇದನ್ನೂ ಓದಿ : ಚಂದನವನಕ್ಕೆ ಕಾಲಿಡ್ತಿದ್ದಾರೆ ದಿ ಗ್ರೇಟ್ ಖಲಿ – ‘ಕೆಂಡದ ಸೆರಗು’ ಚಿತ್ರದಲ್ಲಿ ‘ರಿಯಲ್ ಫೈಟರ್’ ಹವಾ..!

ಮತ್ತೊಂದೆಡೆ ಕಾಲುಂಗುರ ಶಾಸ್ತ್ರ ನೆರವೇರಿದ್ದು ಲಕ್ಷ್ಮೀ ಕಾಲಿಗೆ ಕಾಲುಂಗುರ ಹಾಕಲಾಗಿದೆ. ತಂಗಿಯ ಮದುವೆ ಸಂಭ್ರಮ ನೋಡಿ ಭಾಗ್ಯ ಫುಲ್ ಖುಷಿಯಲ್ಲಿದ್ದಾಳೆ. ನಿನ್ನೆ, ಮೊನ್ನೆಯವರೆಗೂ ನನ್ನ ಮಡಿಲಲ್ಲಿ ಹಾಡಿಕೊಂಡಿದ್ದ ಲಡ್ಡು ಈಗ ಮದುವೆಯಾಗುತ್ತಿದ್ದಾಳೆ. ಅವಳ ಕಾಲಿಗೆ ಕಾಲುಂಗುರ ತೊಡಿಸಿದ್ದೇವೆ ಎಂದು ಖುಷಿಯಿಂದ ಕಣ್ಣೀರಾಕಿದ್ದಾಳೆ. ಇದೇ ವೇಳೆ ಕಾಲುಂಗುರದ ಮಹತ್ವವನ್ನ ಹೇಳಿದ್ದಾಳೆ.

ಲಕ್ಷ್ಮೀ ಜೊತೆ ಮದುವೆ ಇಷ್ಟವಿಲ್ಲದ ವೈಷ್ಣವ್ ಯಾವುದನ್ನೂ ನೇರಾನೇರ ಹೇಳಿಕೊಳ್ತಿಲ್ಲ. ಪತ್ರದಲ್ಲಿ ಆಗಿರುವ ಎಡವಟ್ಟಿನ ಬಗ್ಗೆಯೂ ವೈಷ್ಣವ್​ಗೆ ಅರಿವಿಲ್ಲ. ಹೀಗಾಗಿ ಲಕ್ಷ್ಮೀ ಎಲ್ಲಾ ಗೊತ್ತಿದ್ರೂ ನನ್ನನ್ನ ಮದುವೆಯಾಗ್ತಿದ್ದಾಳೆ ಎಂದು ಅಪಾರ್ಥ ಮಾಡಿಕೊಂಡಿದ್ದಾನೆ. ಕಾಲುಂಗುರ ನಿನ್ನ ಕಾಲಿಗೇ ಆದ್ರೂ ತಾಳಿ ಮಾತ್ರ ನಾನು ಕೀರ್ತಿ ಕೊರಳಿಗೇ ಕಟ್ಟೋದು ಅಂತಾ ನಿರ್ಧರಿಸಿದ್ದಾನೆ. ಆದ್ರೀಗ ವೈಷ್ಣವ್ ಯಾರ ಕೊರಳಿಗೆ ತಾಳಿ ಕಟ್ಟುತ್ತಾನೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

suddiyaana