ಅವನಿಲ್ಲಿ.. ಇವಳಲ್ಲಿ.. ಮದುವೆಯಾದ 20 ದಿನಕ್ಕೆ ದೂರವಾಯ್ತು ಜೋಡಿ – ಪ್ರೇಮ ಪಕ್ಷಿಗಳ ಮೂಕರೋದನೆ ಕೇಳೋರ್ಯಾರು?  

ಅವನಿಲ್ಲಿ.. ಇವಳಲ್ಲಿ.. ಮದುವೆಯಾದ 20 ದಿನಕ್ಕೆ ದೂರವಾಯ್ತು ಜೋಡಿ – ಪ್ರೇಮ ಪಕ್ಷಿಗಳ ಮೂಕರೋದನೆ ಕೇಳೋರ್ಯಾರು?  

ಅವರಿಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಪರಿಯಚವಾಗಿ ಸ್ನೇಹಿತರಾಗಿದ್ರು. ಸಲಿಗೆ ಬೆಳೆಯುತ್ತಾ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಪ್ರೀತಿಸಿದ ಇವರಿಬ್ಬರು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ಮದುವೆಯಾದ 20 ದಿನದಲ್ಲಿ ಇವರಿಬ್ಬರು ದೂರವಾಗಿದ್ದಾರೆ.. ಅವಳಲ್ಲಿ.. ನಾನಿಲ್ಲಿ ಅಂತಾ ಪ್ರಿಯತಮನ ರೋದನೆ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ ಹೋದಷ್ಟೇ ಸ್ಪೀಡ್ ಆಗಿ ವಾಪಸ್ ಆದ ಜಗದೀಶ್ ಶೆಟ್ಟರ್ – ‘ಕೈ’ಗೆ ಬೈ ಬೈ ಹೇಳಲು ಕಾರಣವೇನು?

ಅಷ್ಟಕ್ಕೂ ಆಗಿದ್ದೇನು?

ಈ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆದಿದೆ. ಸಿದ್ದಾರ್ಥ್​ ರಾಜಸ್ಥಾನ ಮೂಲದ ಯುವತಿಯೊಬ್ಬಳ ಜೊತೆಗೆ ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯ ಹೊಂದಿದ್ದ. ಆ ಪರಿಚಯ ಪ್ರೀತಿಗೆ ತಿರುಗಿತ್ತು. ವಿಶೇಷ ಅಂದರೆ ಪ್ರೇಮದಲ್ಲಿಯೂ ಇಬ್ಬರು ಸಾಮ್ಯತೆ ಹೊಂದಿದ್ದಾರೆ. ಅಂದರೆ ಇಬ್ಬರಿಗೂ ಮಾತು ಬರುತ್ತಿರಲಿಲ್ಲ. ಅಕ್ಷರದ ಪ್ರೀತಿಗೆ ಸಾಕ್ಷಿಯಾಗಿದ್ದ ಇಬ್ಬರು ಮದುವೆಯಾಗಲು ನಿರ್ಧರಿಸಿ ಬಾಗಲಕೋಟೆಯಲ್ಲಿಯೇ ಮದುವೆಯಾಗಿದ್ದಾರೆ. ಆದರೆ ಮದುವೆಯಾದ ಕೇವಲ 20 ದಿನಗಳಲ್ಲಿ ಮಾತುಬಾರದ ಈ ದಂಪತಿ ಬೇರ್ಪಟ್ಟಿದ್ದಾರೆ.

ಹೊಸ ಬದುಕಲ್ಲಿ ಹೆಜ್ಜೆ ಇಟ್ಟ ಕೆಲವೇ ದಿನಗಳಲ್ಲಿ ಯುವತಿಯ ಕಡೆಯವರು ಕಿಡ್ನ್ಯಾಪ್ ದೂರು ಕೊಟ್ಟಿದ್ದಾರೆ. ಬಳಿಕ ರಾಜಸ್ಥಾನದ ಪೊಲೀಸರ ಸಹಕಾರದೊಂದಿಗೆ ಯುವತಿಯನ್ನ ತಮ್ಮ ಬಾಗಲಕೋಟೆಗೆ ಬಂದು ಮನೆಗೆ ಕರೆದೊಯ್ದಿದ್ದಾರೆ.

ಇದೀಗ ಪತ್ನಿ ರೋದಿಯಾ ಇಲ್ಲದೇ ಸಿದ್ದಾರ್ಥ್ ಒಂಟಿಯಾಗಿದ್ದಾನೆ. ಮನದರಸಿ ತನ್ನೊಂದಿಗೆ ಇಲ್ಲ ಎಂದು ಮೂಕರೋದನೆ ಅನುಭವಿಸುತ್ತಿದ್ದಾನೆ. ಇನ್ನು ಇಬ್ಬರಿಗೂ ಈ ಹಿಂದೆ ಮದುವೆಯೂ ಆಗಿತ್ತು ಎಂದು ಹೇಳಲಾಗುತ್ತಿದೆ.

Shwetha M