ಐಟಿ ಅಧಿಕಾರಿಗಳ ದಾಳಿ – ಮನೆ ಅಂಗಳದ ಮರದಲ್ಲಿ ಸಿಕ್ಕಿದ್ದು 1 ಕೋಟಿ ರೂಪಾಯಿ..!

ಐಟಿ ಅಧಿಕಾರಿಗಳ ದಾಳಿ – ಮನೆ ಅಂಗಳದ ಮರದಲ್ಲಿ ಸಿಕ್ಕಿದ್ದು 1 ಕೋಟಿ ರೂಪಾಯಿ..!

ಐಟಿ ಅಧಿಕಾರಿಗಳಿಗೆ ಖಚಿತ ಮಾಹಿತಿಯೇನೋ ಸಿಕ್ಕಿತ್ತು. ಹೀಗಾಗಿಯೇ ದಾಳಿ ಮಾಡಲು ಸೀದಾ ಮನೆಗೆ ಬಂದಿದ್ದರು. ಮನೆಯೆಲ್ಲಾ ತಡಕಾಡಿದರೂ ಏನೂ ಸಿಗಲಿಲ್ಲ. ಆದರೂ ಐಟಿ ಅಧಿಕಾರಿಗಳಿಗೆ ಏನೋ ಅನುಮಾನ. ಮನೆಯಂಗಳದ ಮರದಲ್ಲಿ ಏನೋ ಇದೆ ಅನ್ನೋದು ಕಣ್ಣಿಗೆ ಬಿತ್ತು. ಮಾವಿನ ಹಣ್ಣಿನ ಬಾಕ್ಸ್ ಈ ಮರದಲ್ಲಿ ಯಾಕಿದೆ ಅಂತಾ ನೋಡಿದರೆ, ಅಲ್ಲಿ ಏನು ಬೇಕಿತ್ತೋ ಅದೇ ಸಿಕ್ಕಿತ್ತು. ಮೈಸೂರಿನಲ್ಲಿ ಕೆ. ಸುಬ್ರಹ್ಮಣ್ಯ ರೈ ಎಂಬುವವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಕಂಡು ಬಂದಿರುವ ಸನ್ನಿವೇಶವಿದು.

ಇದನ್ನೂ ಓದಿ: ಮಾಜಿ ಅಧಿಕಾರಿ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ರೂಪಾಯಿಗೂ ಅಧಿಕ ನಗದು ವಶ

ಮೈಸೂರಿನಲ್ಲಿ ಕೆ. ಸುಬ್ರಹ್ಮಣ್ಯ ರೈ ಎಂಬುವವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ 1 ಕೋಟಿ ರೂಪಾಯಿ ನಗದು ವಶ ಪಡೆಸಿಕೊಂಡಿದ್ದಾರೆ. ಸುಬ್ರಹ್ಮಣ್ಯ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸಹೋದರ. ಮೈಸೂರಿನ ಸುಬ್ರಹ್ಮಣ್ಯ ರೈ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಲು ಬಂದಾಗ, ಅವರ ಮನೆಯ ಅಂಗಳದ ಮರದಲ್ಲಿ ಮಾವಿನ ಹಣ್ಣಿನ ಬಾಕ್ಸ್‌ವೊಂದು ಕಣ್ಣಿಗೆ ಬಿದ್ದಿದೆ. ಆ ಬಾಕ್ಸ್‌ನಲ್ಲಿ ಬಚ್ಚಿಡಲಾಗಿದ್ದ 1 ಕೋಟಿ ರೂಪಾಯಿ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮನೆಯಂಗಳದ ಗಿಡದಲ್ಲಿ ಬಚ್ಚಿಟ್ಟಿದ್ದ ಕೋಟಿ ರೂಪಾಯಿ ದುಡ್ಡನ್ನು ಎಣಿಕೆ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅಶೋಕ್ ರೈ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ.ಈ ಮೊದಲು ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದ್ರೆ, ಟಿಕೆಟ್​ ಕೈತಪ್ಪಿದ್ದರಿಂದ ಅಶೋಕ್​ ರೈ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

suddiyaana