ಎಟಿಎಂ ಹಣ ದೋಚಲು ಕಳ್ಳರ ಕಸರತ್ತು –  ಕಣ್ಣಮುಂದೆಯೇ ಸುಟ್ಟು ಹೋಯ್ತು ಕಂತೆ ಕಂತೆ ಕಾಸು!

ಎಟಿಎಂ ಹಣ ದೋಚಲು ಕಳ್ಳರ ಕಸರತ್ತು –  ಕಣ್ಣಮುಂದೆಯೇ ಸುಟ್ಟು ಹೋಯ್ತು ಕಂತೆ ಕಂತೆ ಕಾಸು!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ  ಟೌನ್ ಬಳಿ ಎಟಿಎಂ ಕಳ್ಳತನಕ್ಕೆ ಯತ್ನ ನಡೆದಿದೆ. ವಿಪರ್ಯಾಸ ಅಂದ್ರೆ ಎಟಿಎಂನಲ್ಲಿದ್ದ ಹಣ ಕಳ್ಳರ ಪಾಲಾಗದೇ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ: 4 ವರ್ಷಗಳಿಂದ ಮಹಿಳೆಯ ಅಲೆಮಾರಿ ಜೀವನ – ಸತ್ತ ಪ್ರಾಣಿಗಳೇ ಆಹಾರ, ಪ್ರಕೃತಿಯೇ ಬದುಕಿನ ಆಧಾರ..!

ಅಷ್ಟಕ್ಕೂ ಆಗಿದ್ದೇನು?

ಇಬ್ಬರು ಕಳ್ಳರು ಬುಧವಾರ ರಾತ್ರಿ 1:50ರ ಸುಮಾರಿಗೆ ನೆಲಮಂಗಲ ಟೌನ್ ಬಳಿ ಇರುವ ಎಟಿಎಂಗೆ ನುಗ್ಗಿ ಕಟರ್ ಮೂಲಕ ಎಟಿಎಂ ಯಂತ್ರ ಕಟ್ ಮಾಡಲು ಯತ್ನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಮುಂಬೈ ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಕಟ್ಟಡ ಮಾಲಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಕಟ್ಟಡದ ಮಾಲೀಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಾಲಿಕರು ಸ್ಥಳಕ್ಕೆ ಬರುತ್ತಿಂದ ಕಳ್ಳರು ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನೆಲ್ಲ ಸ್ಥಳದಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.

ಅಧಿಕಾರಿಗಳ ಸಮಯ ಪ್ರಜ್ಞೆಯಿಂದಾಗಿ ಹಣ ಕಳ್ಳರ ಪಾಲಾಗಿಲ್ಲ. ವಿಪರ್ಯಾಸ ಅಂದ್ರೆ ಕಳ್ಳರು ಎಸ್ಕೇಪ್‌ ಆಗುತ್ತಿದ್ದಂತೆ ಹಣ ಸುಟ್ಟು ಕರಕಲಾಗಿದೆ. ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್ ಬಳಸಿ ಕಟ್ ಮಾಡುವ ವೇಳೆ ಬೆಂಕಿ ತಗುಲಿದೆ. ಈ ವೇಳೆ ಸಾವಿರಾರು ರೂಪಾಯಿ ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಬ್ಯಾಂಕ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shwetha M