ನಾಗಚೈನತ್ಯ ಮದುವೆಗೆ ಅಪಶಕುನ.. ಪ್ರಭಾಸ್‌ ಮದುವೆ ಆದ್ರೆ ಕಂಟಕ! -ಸ್ಪೋಟಕ ಭವಿಷ್ಯ ಜ್ಯೋತಿಷಿ ಯಾರು?

ನಾಗಚೈನತ್ಯ ಮದುವೆಗೆ ಅಪಶಕುನ.. ಪ್ರಭಾಸ್‌ ಮದುವೆ ಆದ್ರೆ ಕಂಟಕ! -ಸ್ಪೋಟಕ ಭವಿಷ್ಯ ಜ್ಯೋತಿಷಿ ಯಾರು?

ಶೋಭಿತಾ ಧೂಳಿಪಾಲ ಹಾಗೂ ನಾಗ ಚೈತನ್ಯ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.. ಇವರಿಬ್ಬರು ಎಂಗೇಜ್ ಮೆಂಟ್ ಮಾಡಿಕೊಂಡ ಬೆನ್ನಲ್ಲೇ ಹಾಟ್ ಟಾಪಿಕ್ ಆಗಿದ್ದಾರೆ. ಜನರ ಬಾಯಲ್ಲಿ ಇವರಿಬ್ಬರದ್ದೇ ಸುದ್ದಿ.. ಇದೀಗ ಈ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಂತೆ ಜ್ಯೋತಿಷಿಗಳು ಜಾತಕ ಹೇಳಲು ಶುರುಮಾಡ್ಕೊಂಡಿದ್ದಾರೆ.. ಒಂದಾದ ಮೇಲೊಂದು ಶಾಕಿಂಗ್ ಭವಿಷ್ಯ ಹೇಳ್ತಾ ಇದ್ದಾರೆ..  ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಬಗ್ಗೆ ಅಪಶಕುನದ ಮಾತುಗಳು ಕೇಳಿಬರ್ತಿದೆ. ಇದ್ರೀಂದಾಗಿ ಅಭಿಮಾನಿಗಳಲ್ಲೂ ಒಂದು ಪ್ರಶ್ನೆ ಮೂಡಿದೆ. ಮತ್ತೆ ನಾಗಚೈತನ್ಯ ಬಾಳಲ್ಲಿ ಬಿರುಗಾಳಿ ಏಳಲಿದ್ಯಾ ಅಂತಾ ತಲೆಕೆಡಿಸಿಕೊಂಡಿದ್ದಾರೆ.. ಅಷ್ಟಕ್ಕೂ ಜ್ಯೋತಿಷಿಗಳು ಏನೇನು ಭವಿಷ್ಯ ಹೇಳಿದ್ದಾರೆ? ಸೆಲೆಬ್ರಿಟಿಗಳಿಗೂ ಆ ಜ್ಯೋತಿಷಿಗೂ ಏನ್ ಸಂಬಂಧ? ಇವೆಲ್ಲದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಕಂಡಕ್ಟರ್‌ ಕೆಲಸಕ್ಕೆ ಕುತ್ತು! – ಮಹಿಳೆಯರ ಎಡವಟ್ಟಿನಿಂದ ನಿರ್ವಾಹಕರಿಗೆ ಶಿಕ್ಷೆ?

ತೆಲುಗು ಚಿತ್ರರಂಗದಲ್ಲಿ ಸದ್ಯಕ್ಕೆ ಓಡಾಡ್ತಿರೋ ಹಾಟ್ ನ್ಯೂಸ್ ಅಂದ್ರೆ ನಟ ನಾಗ ಚೈತನ್ಯಾ ಮತ್ತು ನಟಿ ಶೋಭಿತಾ ನಿಶ್ವಿತಾರ್ಥ. ನಮ್ಮಿಬ್ಬರ ನಡುವೆ ಏನೂ ಇಲ್ಲ.. ನಾವು ಸ್ನೇಹಿತರು.. ಎಂದು ಮಾಧ್ಯಮಗಳಿಗೆ ಗೂಬೆ ಕೂರಿಸುತ್ತಿದ್ದ ಈ ಜೋಡಿ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಾದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ನಿಶ್ಚಿತಾರ್ಥದ ಸುದ್ದಿ ತಿಳಿಸಿದ್ರು.. ಈ ಫೋಟೋ ವೈರಲ್ ಆಗುತ್ತಿದ್ದಂತೆ ಜ್ಯೋತಿಷಿಗಳೆಲ್ಲಾ ಹೊಸ ಜೋಡಿ ಬಗ್ಗೆ ಭವಿಷ್ಯ ಹೇಳಲು ಶುರು ಮಾಡ್ಕೊಂಡಿದ್ದಾರೆ.. ಮದುವೆಗೂ ಮುನ್ನವೇ ಶಾಕಿಂಗ್ ಭವಿಷ್ಯ ಹೇಳಿ ಭಾರಿ ಸುದ್ದಿಯಾಗ್ತಿದ್ದಾರೆ.

ಹೌದು ನಾಗಚೈತನ್ಯ ಶೋಭಿತಾ ನಿಶ್ಚಿತಾರ್ಥ ಆಗಿದ್ದೇ ಆಗಿದ್ದು.. ಇದೀಗ ಒಬ್ಬರಾದ್ಮೇಲೆ ಒಬ್ಬರು ಶಾಕಿಂಗ್ ಭವಿಷ್ಯ ಹೇಳ್ತಿದ್ದಾರೆ. ಹೌದು ಶೋಭಿತಾ, ನಾಗಚೈತನ್ಯ ಎಂಗೇಜ್ಮೆಂಟ್ ಆದ್ಮೇಲೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ಇದಕ್ಕೆ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದೇ ಸ್ವಾಮೀಜಿ ಈ ಹಿಂದೆ ನಾಗ ಚೈತನ್ಯ ಮತ್ತು ನಟಿ ಸಮಂತಾ ಪ್ರೀತಿಸಿ ಮದುವೆಯಾದಾಗಲೂ ಭವಿಷ್ಯ ನುಡಿದಿದ್ರು.. ಈ ಮದುವೆ ಹೆಚ್ಚಿನ ದಿನ ಇರುವುದಿಲ್ಲ.. ಮುರಿದು ಬೀಳುತ್ತದೆ ಎಂದು ಭವಿಷ್ಯ ನುಡಿದಿದ್ದರು. ವೇಣು ಸ್ವಾಮಿ ಒಬ್ಬ ಹುಚ್ಚ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರು.. ಪ್ರೀತಿಸಿ ಮದುವೆಯಾದವರ ಮೇಲೆ ಈತನಿಗೆ ಕೋಪ ಎಂದೆಲ್ಲಾ ಅಭಿಮಾನಿಗಳು ಆರೋಪ ಮಾಡಿದ್ರು. ವರ್ಷಗಳು ಕಳೆದಂತೆ ವೇಣು ಸ್ವಾಮಿ ಹೇಳಿದ್ದು ನಿಜವಾಯ್ತು. ಇದೀಗ ಮತ್ತೆ ನಾಗ ಚೈತನ್ಯಾ ಮತ್ತು ಶೋಭಿತಾ ಮುಂದಿನ ಜೀವನ ಹೇಗಿರುತ್ತದೆ ಎಂದು ವೇಣು ಸ್ವಾಮಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಈಗ ವೇಣು ಸ್ವಾಮಿಯನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಇವರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.

ವೇಣುಸ್ವಾಮಿ ಯಾರು?

ವೇಣುಸ್ವಾಮಿ ಸೆಲೆಬ್ರಿಟಿ ಜ್ಯೋತಿಷಿ ಅಂತಾನೇ ಫೇಮಸ್ ಆಗಿದ್ದಾರೆ.. ಟಾಲಿವುಡ್ ಸೆಲೆಬ್ರಿಟಿಗಳ ಹಾಗೂ ರಾಜಕೀಯ ಆಗುಹೋಗುಗಳ ಕುರಿತಾಗಿ ಭವಿಷ್ಯ ನುಡಿತಾರೆ. ತೆಲುಗು ಪ್ರೇಕ್ಷಕರಿಗೆ ವೇಣುಸ್ವಾಮಿ ಅವರ ಪರಿಚಯ ಹೊಸತೇನಲ್ಲ. ಸಾಮಾನ್ಯ ಜನರಿಂದ ಹಿಡಿದು ಟಾಲಿವುಡ್ ನ ಟಾಪ್ ಸೆಲೆಬ್ರಿಟಿಗಳಿಗೂ ವೇಣು ಸ್ವಾಮಿಯವರ ಹೆಸರು ಗೊತ್ತಿದೆ. ಟಾಲಿವುಡ್ ಸೆಲೆಬ್ರಿಟಿಗಳ ದಾಂಪತ್ಯ, ವಿಚ್ಚೇದನ, ಪ್ರೇಮ್ ಕಹಾನಿ ಬಗ್ಗೆ ಭವಿಷ್ಯ ಹೇಳಿ ಭಾರಿ ಸುದ್ದಿಯಲ್ಲಿರ್ತಾರೆ.. ಹೌದು, ವೇಣುಸ್ವಾಮಿ ಭವಿಷ್ಯ ಹೇಳ್ತಿದ್ದಾರೆ ಅಂದ್ರೆ ಇಲ್ಲರ ಕಿವಿ ನೆಟ್ಟಗಾಗುತ್ತೆ.. ಈ ಬಾರಿ ಏನ್ ಭವಿಷ್ಯ ಹೇಳ್ತಾರೆ ಅಂತಾ ಜನ ಕೂಡ ಕಾಯ್ತಾ ಇರ್ತಾರೆ.. ಇವ್ರ ಬಾಯಲ್ಲಿ ಒಳ್ಳೆದೇ ಬರಲಿ ಅಂತಾ ಎಲ್ಲರೂ ಮಾತಾಡ್ಕೊಳ್ತಾರೆ.. ಯಾಕಂದ್ರೆ ವೇಣುಸ್ವಾಮಿ ಹೇಳಿದ ಭವಿಷ್ಯ ಬಹುತೇಕ ಎಲ್ಲಾ ನಿಜವಾಗಿದೆ. ಹೌದು, ವೇಣುಸ್ವಾಮಿ ಅನೇಕ ಸ್ಟಾರ್ಗಳ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ್ದಾರೆ. ಪ್ರಭಾಸ್, ಜೂನಿಯರ್ ಎನ್ಟಿಆರ್, ಜಗನ್ ಮೋಹನ್ ರೆಡ್ಡಿ ಹೀಗೆ ಅನೇಕರ ಜೀವನದ ಬಗ್ಗೆ ಭವಿಷ್ಯ ಹೇಳಿದ್ದಾರೆ.

ವೇಣುಸ್ವಾಮಿ ಸ್ವಾಮಿ ಪ್ರಭಾಸ್ ಕೆರಿಯರ್ ಬಗ್ಗೆ ಭವಿಷ್ಯ ನುಡಿದಿದ್ದರು. ಬಾಹುಬಲಿ-2 ಬಳಿಕ ಪ್ರಭಾಸ್ ಕೆರಿಯರ್ ಕಷ್ಟವಿದೆ ಎಂದು ವೇಣುಸ್ವಾಮಿ ಹೇಳಿದ್ದರು. ಇದಾದ ಬಳಿಕ ಪ್ರಭಾಸ್ ಅವರ ಮೂರು ಸಿನಿಮಾಗಳು ಸೋತಿದ್ದವು. ಸಲಾರ್ ಸಿನಿಮಾ ಸೋಲುತ್ತೆ ಅಂತಾ ಹೇಳಿದ್ರು. ಆದ್ರೆ ಆ ಸಲ ಲಕ್ ಪ್ರಭಾಸ್ ಕಡೆ ಇತ್ತು.. ಸಲಾರ್ 700 ಕೋಟಿ ಗಳಿಸಿ ಹಿಟ್ ಆಗಿತ್ತು. ಇನ್ನು ಪ್ರಭಾಸ್ ಮದುವೆ ಬಗ್ಗೆ ಕೂಡ ಶಾಕಿಂಗ್ ಭವಿಷ್ಯ ಹೇಳಿದ್ದಾರೆ ವೇಣುಸ್ವಾಮಿ.. ಪ್ರಭಾಸ್ ಮದುವೆ ಆಗುವುದಿಲ್ಲ.. ಅವರ ಜಾತಕದಲ್ಲಿ ದೋಷವಿದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.

ಇನ್ನು ನಯನತಾರಾ ದಾಂಪತ್ಯದ ಬಗ್ಗೆ ಕೂಡ ವೇಣುಸ್ವಾಮಿ ಸ್ಪೋಟಕ ಭವಿಷ್ಯ ಹೇಳಿದ್ದಾರೆ. ನಯನತಾರಾ ದಾಂಪತ್ಯದಲ್ಲಿ ಬಿರುಕು ಉಂಟಾಗುತ್ತದೆ. ವಿಚ್ಚೇದನ ಪಡೆಯುತ್ತಾರೆ ಎಂದೂ ವೇಣುಸ್ವಾಮಿ ಹೇಳಿದ್ದಾರೆ.

ಇನ್ನು ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ  ಬಗ್ಗೆ ಸಾಕಷ್ಟು ಗಾಸಿಪ್ ಹರಿದಾದ್ತಾ ಇದೆ.. ಇವ್ರರಿಬ್ಬರ ಬಗ್ಗೆ ಕೂಡ ಶಾಕಿಂಗ್ ಭವಿಷ್ಯ ಹೇಳಿದ್ದಾರೆ ವೇಣುಸ್ವಾಮಿ.. ದೇವರಕೊಂಡ ಹಾಗೂ ರಶ್ಮಿಕಾ ಮದುವೆ ಆದ್ರೆ ಸುಖವಾಗಿರಲ್ಲ. ಇಬ್ಬರು ವಿಚ್ಚೇದನ ಪಡೆಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಪವನ್ ಕಲ್ಯಾಣ್ ಮೂರನೇ ಪತ್ನಿಯಿಂದಲೂ ವಿಚ್ಚೇದನ ಪಡೆಯುತ್ತಾರೆ. ರಾಜಕೀಯ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಅಂತಾ ವೇಣುಸ್ವಾಮಿ ಹೇಳಿದ್ದಾರೆ. ಇದರಲ್ಲಿ ಪವನ್ ಕಲ್ಯಾಣ್ ರಾಜಕೀಯ ಬದುಕು ಯಶಸ್ಸು ಕಂಡಿದೆ.

ಇನ್ನು ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ಸಿಪಿ ಪಕ್ಷ ಚುನಾವಣೆಯಲ್ಲಿ ಮೇಲುಗೈ ಸಾಧಿಸುತ್ತದೆ ಎನ್ನುವ ಭವಿಷ್ಯ ವೇಣು ಸ್ವಾಮಿ ನುಡಿದಿದ್ದರು. ಫಲಿತಾಂಶದ ಬಳಿಕ ಭವಿಷ್ಯ ಸುಳ್ಳಾಗಿದ್ದು. ಇದರಿಂದ ವೇಣು ಸ್ವಾಮಿ ಟ್ರೋಲ್ ಗೆ ಒಳಗಾಗಿದ್ದರು. ಇದರಿಂದ ಅವರು ಕ್ಷಮೆಯಾಚಿಸಿದ್ದರು. ಇನ್ಮುಂದೆ ಅವರು ಭವಿಷ್ಯ ನುಡಿಯಲ್ಲ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.

ಒಟ್ಟಿನಲ್ಲಿ ವೇಣುಸ್ವಾಮಿ ಸೆಲೆಬ್ರಿಟಿಗಳ ಬಗ್ಗೆ ಶಾಕಿಂಗ್‌ ಭವಿಷ್ಯ ಹೇಳಿ ಭಾರಿ ಸುದ್ದಿಯಲ್ಲಿದ್ದಾರೆ.. ಈ ಜ್ಯೋತಿಷಿ ಭವಿಷ್ಯ ನುಡಿದಿದ್ದನ್ನ ನೋಡಿ  ವೇಣು ಸ್ವಾಮಿ ಒಬ್ಬ ಹುಚ್ಚ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.. ಪ್ರೀತಿಸಿ ಮದುವೆಯಾದವರ ಮೇಲೆ ಈತನಿಗೆ ಕೋಪ ಎಂದೆಲ್ಲಾ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಆದ್ರೆ ವೇಣುಸ್ವಾಮಿ ಹೇಳಿರುವ ಭವಿಷ್ಯ ಕೆಲವು ನಿಜವಾಗಿದೆ.

Shwetha M

Leave a Reply

Your email address will not be published. Required fields are marked *