ಅಪಘಾತಕ್ಕೀಡಾದವರಿಗೆ ಗೃಹಸಚಿವರಿಂದ ಸಹಾಯ – ವಿದ್ಯಾರ್ಥಿಗೆ ಪರೀಕ್ಷೆಗೆ ತೆರಳಲು ವ್ಯವಸ್ಥೆ

ಅಪಘಾತಕ್ಕೀಡಾದವರಿಗೆ ಗೃಹಸಚಿವರಿಂದ ಸಹಾಯ – ವಿದ್ಯಾರ್ಥಿಗೆ ಪರೀಕ್ಷೆಗೆ ತೆರಳಲು ವ್ಯವಸ್ಥೆ

ಶಿವಮೊಗ್ಗ: ಕಾರು ಅಪಘಾತಕ್ಕೀಡಾಗಿ ಅಪಾಯದಿಂದ ಪಾರಾಗಿ ಪರೀಕ್ಷೆ ಬರೆಯೋದು ಹೇಗೆ ಅನ್ನೋ ಚಿಂತೆಯಲ್ಲಿದ್ದ ವಿದ್ಯಾರ್ಥಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ನೆರವಾಗಿದ್ದಾರೆ. ಶಿವಮೊಗ್ಗದಿಂದ ಕಾರ್ಕಳಕ್ಕೆ ತೆರಳುವಾಗ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಸಮೀಪ ಕಾರೊಂದು ಅಪಘಾತಕ್ಕೀಡಾಗಿತ್ತು. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಇದೇ ವೇಳೆ ಶಿವಮೊಗ್ಗಕ್ಕೆ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಕಾರು ಅಪಘಾತಕ್ಕೀಡಾಗಿದ್ದನ್ನು ಗಮಿಸಿದ್ದಾರೆ. ಸ್ಥಳದಲ್ಲಿ ನೆರೆದಿದ್ದ ಪ್ರಯಾಣಿಕರನ್ನ ಸಂತೈಸಿದ್ದಾರೆ. ಈ ವೇಳೆ ಪರೀಕ್ಷೆ ಬರೆಯಲು ಕಾರ್ಕಳಕ್ಕೆ ತೆರಳಬೇಕಿದ್ದ ವಿದ್ಯಾರ್ಥಿಗೆ ವ್ಯವಸ್ಥೆ ಮಾಡಿ, ಆತನಿಗೆ ಯಾವುದೇ ಸಮಸ್ಯೆ ಆಗದಂತೆ ಕಳುಹಿಸಿಕೊಟ್ಟಿದ್ದಾರೆ.

suddiyaana