ಮಹಾಭಾರತದಲ್ಲಿ ಅರ್ಜುನ ಸ್ತ್ರೀಯಾಗಿದ್ದೇಕೆ.? ಊರ್ವಶಿ ನಪುಂಸಕ ಶಾಪ ಕೊಟ್ಟಿದ್ದೇಕೆ?

ಮಹಾಭಾರತ ಯುದ್ಧವು ತನ್ನಲ್ಲಿ ಎಣಿಕೆಗೂ ಮೀರಿದಷ್ಟು ನಿಗೂಢ ರಹಸ್ಯಗಳನ್ನು ಕೆದಕಿದಷ್ಟು ಸಿಗುವ ವಿಸ್ಮಯಕಾರಿ ಕಥೆಗಳನ್ನು ಹೊಂದಿರುವ ಯುದ್ಧವಾಗಿದೆ. ಮಹಾಭಾರತವೆಂದರೆ ಹಾಗೇ ಕೌರವರು ಮತ್ತು ಪಾಂಡವರ ನಡುವಿನ ಯುದ್ಧವನ್ನು ನೆನಪಿಸುವ ಅವಧಿ. ಕೌರವರು ಮತ್ತು ಪಾಂಡವರ ನಡುವೆ ಜೂಜಾಟ ನಡೆದಾಗ ಕೌರವರು ಆಡಿದ ಮೋಸದಾಟಕ್ಕೆ ಪಾಂಡವರು ಕಾಡಿನಲ್ಲಿ 12 ವರ್ಷಗಳ ವನವಾಸವನ್ನು ಮತ್ತು 1 ವರ್ಷಗಳ ಅಜ್ಞಾತವಾಸವನ್ನು ಅನುಭವಿಸುವಂತಾಯಿತು. ಪಾಂಡವರು ವನವಸಾದಲ್ಲಿದ್ದ ಸಮಯದಲ್ಲಿ ಪಾಂಡವರಲ್ಲಿ ಮಹಾನ್ ಯೋಧನಾದ, ಗಾಂಢೀವಧಾರಿಯಾದ ಅರ್ಜುನನು ಒಂದಿಷ್ಟು ದಿನಗಳ ಕಾಲ ನಪುಂಸಕನಾಗಿ ಇರಬೇಕಾದ ಸಂದರ್ಭ ಎದುರಾಯಿತು. ಅರ್ಜುನನಿಗೆ ಯಾಕೆ ಈ ಸ್ಥತಿ ಎದುರಾಯಿತು ಎನ್ನುವುದರ ಕುರಿತು ನೋಡೋಣ.
ಮಹಾಭಾರತ ಅವಧಿಯಲ್ಲಿ ಪಾಂಡವರಿಗೆ ಕಾಡಿನಲ್ಲಿ ವನವಾಸವನ್ನು ಅನುಭವಿಸುವ ಶಿಕ್ಷೆಯನ್ನು ನೀಡಲಾಯಿತು. ಇದಕ್ಕಾಗಿ ಪಾಂಡವರೆಲ್ಲಾ ಕಾಡಿನತ್ತ ಸಾಗುತ್ತಾರೆ. ಈ ಸಮಯದಲ್ಲಿ ಅವರು ಯಾರು ಕೂಡ ತಮ್ಮನ್ನು ಗುರುತಿಸಬಾರದು ಎಂದು ಹೆಸರು ಮತ್ತು ವೇಷವನ್ನು ಮರೆಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಅರ್ಜುನನು ಕೂಡ ತನ್ನ ವೇಷವನ್ನು ಮರೆಮಾಡಿಕೊಳ್ಳುತ್ತಾನೆ. ಅರ್ಜುನನು ನಪುಂಸಕನ ವೇಷವನ್ನು ಹಾಕಿಕೊಂಡು ವಿರಾಟ ರಾಜನ ಅರಮನೆಯಲ್ಲಿ ಅಡುಗೆ ಭಟ್ಟನಾಗಿ ಸೇರಿಕೊಳ್ಳುತ್ತಾನೆ. ಅರ್ಜುನನು ಯಾಕೆ ನಪುಸಂಕನ ವೇಷವನ್ನೇ ಧರಿಸುವುದರ ಹಿಂದೆ ಒಂದು ಕಥೆ ಕೂಡ ಇದೆ. ಅದು ಏನು ಅನ್ನೋದ್ದನ್ನ ನಿಮ್ಗೆ ತಿಳಿಸಿಕೊಡುತ್ತೇನೆ..
ಪಾಂಡವರು ವನವಾಸದಲ್ಲಿದ್ದ ಸಂದರ್ಭದಲ್ಲಿ, ಒಂದು ದಿನ ಮಾಧವ ಅಂದರೆ ಶ್ರೀಕೃಷ್ಣ ಪಾಂಡವರನ್ನು ಭೇಟಿಯಾಗಲು ಬರುತ್ತಾನೆ. ಆಗ ಶ್ರೀಕೃಷ್ಣನು ಅರ್ಜುನನ್ನು ಕುರಿತು ಯುದ್ಧದ ಸಮಯದಲ್ಲಿ ನಿಮಗೆ ದೈವಿಕ ಆಯುಧಗಳ ಅವಶ್ಯಕತೆ ತುಂಬಾನೇ ಇದೆ, ಆದ್ದರಿಂದ ನೀವು ದೇವತೆಗಳನ್ನು ಸಂತೋಷಪಡಿಸುವುದು ತುಂಬಾನೇ ಮುಖ್ಯ ಎಂಬುದನ್ನು ಹೇಳುತ್ತಾನೆ. ಶ್ರೀಕೃಷ್ಣನ ಮಾತುಗಳನ್ನು ಕೇಳಿ, ಅರ್ಜುನನು ತಪಸ್ಸು ಮಾಡಲು ಹೊರಟನು. ಅರ್ಜುನನ ತಪಸ್ಸನ್ನು ಪರೀಕ್ಷೆ ಮಾಡುವುದಕ್ಕಾಗಿ ಶಿವನು ಬೇಟೆಗಾರನ ವೇಷವನ್ನು ಹಾಕಿಕೊಂಡು ಅರ್ಜುನನು ತಪಸ್ಸನ್ನು ಮಾಡುತ್ತಿರುವ ಸ್ಥಳಕ್ಕೆ ಬರುತ್ತಾನೆ. ಅರ್ಜುನನ ತಪಸ್ಸಿಗೆ ಭಾವುಕನಾದ ಶಿವನು ಆತನಿಗೆ ಒಂದಿಷ್ಟು ದೈವಿಕ ಆಯುಧಗಳನ್ನು ನೀಡುತ್ತಾನೆ. ಅರ್ಜುನನಿಂದ ಸಂತುಷ್ಟನಾದ ದೇವರಾಜ ಇಂದ್ರನು ಅರ್ಜುನನ್ನು ಸ್ವರ್ಗಕ್ಕೆ ಆಹ್ವಾನಿಸಿ ಇನ್ನಿತರ ದೇವರು ಮತ್ತು ದೇವತೆಗಳು ದೈವಿಕ ಆಯುಧಗಳನ್ನು ನೀಡುವಂತೆ ಮಾಡಿದನು. ನಂತರ ಇಂದ್ರನು ಅರ್ಜುನನನ್ನು ಚಿತ್ರ ಸೇನನ ಬಳಿಗೆ ಸಂಗೀತ ಮತ್ತು ನೃತ್ಯವನ್ನು ಕಲಿಯುವುದಕ್ಕಾಗಿ ಕಳುಹಿಸಿದನು. ದೇವರ ಆದೇಶವನ್ನು ಪಡೆದ ನಂತರ, ಚಿತ್ರ ಸೇನನು ಅರ್ಜುನನನ್ನು ಸಂಗೀತ ಮತ್ತು ನೃತ್ಯ ಕಲೆಯಲ್ಲಿ ಪ್ರವೀಣನನ್ನಾಗಿ ಮಾಡಿದನು ಮತ್ತು ಅರ್ಜುನನು ಸಂಗೀತ ಮತ್ತು ನೃತ್ಯವನ್ನು ಕಲಿಯುತ್ತಿದ್ದಾಗ, ದೇವಲೋಕದ ಅತ್ಯಂತ ಸುಂದರಿಯಾದ ಊರ್ವಶಿ ಅರ್ಜುನನತ್ತ ಆಕರ್ಷಿತಳಾದಳು.
ಅರ್ಜುನನಿಗೆ ಊರ್ವಶಿ ನೀಡಿದ ಶಾಪ
ಅರ್ಜುನನ ಮೇಲಿದ್ದ ಪ್ರೀತಿಯನ್ನು ಊರ್ವಶಿ ಅರ್ಜುನನಿಗೆ ಪ್ರಸ್ತಾಪಿಸುತ್ತಾಳೆ. ಅರ್ಜುನ ಊರ್ವಶಿ ಸುಂದರಿಯಾಗಿದ್ದರೂ ಆಕೆಯ ಪ್ರೇಮ ಪ್ರಸ್ತಾಪವನ್ನು ನಿರಾಕರಿಸುತ್ತಾನೆ. ಯಾಕೆಂದರೆ, ಊರ್ವಶಿ ಹಿಂದಿನ ಜನ್ಮದಲ್ಲಿ ಅರ್ಜುನನಿಗೆ ರಾಜಮಾತೆಯಾಗಿದ್ದಳು. ಅರ್ಜುನನ ಪ್ರಕಾರ, ಊರ್ವಶಿ ತಾಯಿಯ ಸಮನಾಗಿದ್ದಳು. ಅರ್ಜುನ ಊರ್ವಶಿಯ ಪ್ರೀತಿಯನ್ನು ನಿರಾಕರಿಸಿದ ಕಾರಣ ಆಕೆಗೆ ಅರ್ಜುನನ ಮೇಲೆ ಕೋಪವುಂಟಾಯಿತು. ಕೋಪಗೊಂಡ ಊರ್ವಶಿ ಅರ್ಜುನನಿಗೆ ನೀನು ಮುಂದಿನ ಒಂದು ವರ್ಷದ ಕಾಲ ನಪುಂಸಕನಾಗಿ ಇರುವಂತೆ ಶಾಪವನ್ನು ನೀಡಿದಳು. ಅರ್ಜುನನು ಇದನ್ನು ಭಗವಾನ್ ಇಂದ್ರನಿಗೆ ಹೇಳಿದಾಗ, ವನವಾಸದ ಸಮಯದಲ್ಲಿ ಈ ಶಾಪವು ವರವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದನು. ಶಾಪದ ಪ್ರಕಾರ, ಅರ್ಜುನನು ರಾಜಕುಮಾರಿಯ ಗುರುವಾಗಿ ವನವಾಸದ ದಿನಗಳಲ್ಲಿ ನಪುಂಸಕನಾಗಿ ಕಾಡಿನಲ್ಲಿ ಸುರಕ್ಷಿತವಾಗಿರಲು ಸಾಧ್ಯವಾಯಿತು. ..

ನೋಡಿರಿ

