ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆ – ಕೇಂದ್ರ ಕಾನೂನು ಸಚಿವರನ್ನ ದಿಢೀರ್ ಬದಲಿಸಿದ್ದೇಕೆ?

ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆ – ಕೇಂದ್ರ ಕಾನೂನು ಸಚಿವರನ್ನ ದಿಢೀರ್ ಬದಲಿಸಿದ್ದೇಕೆ?

ಮೋದಿ ಸರ್ಕಾರದಲ್ಲಿ ಮಹತ್ವದ ಬದಲಾವಣೆಯಾಗಿದೆ. ಕೇಂದ್ರ ಕಾನೂನು ಸಚಿವ ಸ್ಥಾನದಿಂದ ಕಿರಣ್​ ರಿಜಿಜು ಅವರನ್ನ ದಿಢೀರ್ ಕೆಳಗಿಳಿಸಲಾಗಿದೆ. ಕಾನೂನು ಸಚಿವ ಸ್ಥಾನದಿಂದ ಗೇಟ್​ಪಾಸ್ ನೀಡಿ ಕಿರಣ್ ರಿಜಿಜುರನ್ನ ಭೂ ವಿಜ್ಞಾನ ಸಚಿವಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಇನ್ನು ಅರ್ಜುನ್ ರಾಮ್ ಮೇಘ್ವಾಲ್​​ರನ್ನ ನೂತನ ಕೇಂದ್ರ ಕಾನೂನು ಸಚಿವರಾಗಿ ನೇಮಕ ಮಾಡಲಾಗಿದೆ. ಜಡ್ಜ್​​ಗಳ ನೇಮಕ ವಿಚಾರವಾಗಿ ಸೇರಿದಂತೆ ಕಾನೂನಿಗೆ ಸಂಬಂಧಿಸಿ ಕಿರಣ್ ರಿಜಿಜು ಮತ್ತು ಸುಪ್ರೀಂಕೋರ್ಟ್ ಮಧ್ಯೆ ಆಗಾಗ ಭಿನ್ನಾಭಿಪ್ರಾಯಗಳು ಉಂಟಾಗುತ್ತಿದ್ವು. ಸುಪ್ರೀಂಕೋರ್ಟ್​ನ ಕೆಲ ನಿರ್ಧಾರಗಳಿಗೆ ಕಿರಣ್ ರಿಜಿಜು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ರು. ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗದ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ಸ್ಪಷ್ಟವಾಗಿತ್ತು. ಇನ್ನು ಜಡ್ಜ್​​ಗಳನ್ನ ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿ ಕೂಡ ಇರಬೇಕು ಅಂತಾ ಒತ್ತಾಯಿಸಿದ್ರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಈಗ ಪ್ರಧಾನಿ ಮೋದಿ ಕಾನೂನೂ ಸಚಿವ ಸ್ಥಾನದಿಂದ ಕಿರಣ್​ ರಿಜಿಜುಗೆ ಗೇಟ್​ಪಾಸ್ ನೀಡಿದ್ದಾರೆ.

suddiyaana