ಮಕ್ಕಳಿಗೆ ಕಂಟಕವಾಯಿತಾ ಐಸ್‌ಕ್ರೀಂ? – ಅವಳಿ ಮಕ್ಕಳ ಸಾವಿನ ಸುತ್ತ ಅನುಮಾನದ ಹುತ್ತ!  

ಮಕ್ಕಳಿಗೆ ಕಂಟಕವಾಯಿತಾ ಐಸ್‌ಕ್ರೀಂ? – ಅವಳಿ ಮಕ್ಕಳ ಸಾವಿನ ಸುತ್ತ ಅನುಮಾನದ ಹುತ್ತ!  

ಅವರಿಬ್ಬರು ಅವಳಿ ಮಕ್ಕಳು. ಎಂದಿನಂತೆ ಖುಷಿಯಿಂದ ಆಟವಾಡುತ್ತಾ ಇದ್ರು.. ತಳ್ಳುಗಾಡಿಯಲ್ಲಿ ಐಸ್‌ ಕ್ರೀಂ ಬಂತೆಂದು ಮಕ್ಕಳಿಗೆ ತಾಯಿ ಐಸ್‌ಕ್ರೀಂ ಕೊಡಿಸಿದ್ದಳು. ಪ್ರೀತಿಯಿಂದ ಕೊಡಿಸಿದ ಐಸ್‌ಕ್ರೀಂ ಮಕ್ಕಳ ಪ್ರಾಣ ತೆಗೆದಿದೆ.

ಇದನ್ನೂ ಓದಿ: ಗುಜರಾತ್ ಟೈಟಾನ್ಸ್ ಸೋತ ಮೇಲೆ ಗಿಲ್ ಒಪ್ಪಿಕೊಂಡ ಸತ್ಯವೇನು? – ಡಿಸಿ ಕ್ಯಾಪ್ಟನ್ ರಿಷಭ್ ಪಂತ್ ವಿಶ್ವಕಪ್‌ಗೆ ಫಿಕ್ಸ್?

ಅಷ್ಟಕ್ಕೂ ಆಗಿದ್ದೇನು?

ಈ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೂಜಾ, ಪ್ರಸನ್ನ ದಂಪತಿ ಮಕ್ಕಳಾದ ತ್ರಿಶುಲ್ ಹಾಗೂ ತ್ರಿಶ ಸಾವನ್ನಪ್ಪಿದ ಕಂದಮ್ಮಗಳು. ಬುಧವಾರ ಮಧ್ಯಾಹ್ನ ತಳ್ಳುವ ಗಾಡಿಯಾತನಿಂದ ಪೂಜಾ ಐಸ್‌ಕ್ರೀಂ ಕೊಡಿಸಿದ್ದರು. ಆಕೆಯೇ ಮಕ್ಕಳಿಗೆ ಐಸ್‌ಕ್ರೀಂ ತಿನ್ನಿಸಿದ್ದರು. ಆನಂತರ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದೇ ಗ್ರಾಮದಲ್ಲಿ ಬೇರೆ ಮಕ್ಕಳು ಕೂಡ ತಳ್ಳುಗಾಡಿಯವನ ಬಳಿ ಐಸ್‌ಕ್ರೀಂ ‌ಖರೀದಿಸಿ ತಿಂದಿದ್ದರು. ಐಸ್‌ಕ್ರೀಂ ತಿಂದ ಬೇರೆ ಯಾರಿಗೂ ತೊಂದರೆ ಆಗಿಲ್ಲ ಎಂದು ಹೇಳಲಾಗುತ್ತಿದೆ.

ಅವಳಿ ಮಕ್ಕಳ ಸಾವಿಗೆ ಇದುವರೆಗೂ ಕಾರಣ ತಿಳಿದುಬಂದಿಲ್ಲ. ಮಿಮ್ಸ್ ಆಸ್ಪತ್ರೆಗೆ ಶವಗಳನ್ನು ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದು, ಪ್ರಕರಣ ದಾಖಲಾಗಿದೆ.

Shwetha M