ಆಂಧ್ರ ದೇವರ ಉತ್ಸವದಲ್ಲಿ ದುರಂತ – ದೊಣ್ಣೆ ಕಾಳಗದಲ್ಲಿ 4 ಮಂದಿ ಸಾ*ವು,100ಕ್ಕೂ ಅಧಿಕ ಮಂದಿಗೆ ಗಾಯ

ಆಂಧ್ರ ಪ್ರದೇಶದಲ್ಲಿ ಭೀಕರ ದುರಂತ ನಡೆದಿದೆ. ಸಾಂಪ್ರದಾಯಿಕ ದೇವರ ಆಚರಣೆ ದುರಂತವಾಗಿ ಮಾರ್ಪಟ್ಟಿದ್ದು, ದೊಣ್ಣೆ ಕಾಳಗದಲ್ಲಿ ಕನಿಷ್ಠ 4 ಮಂದಿ ಸಾವಿಗೀಡಾಗಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟು ಬೆಟ್ಟಗಳಲ್ಲಿ ಗುರುವಾರ ರಾತ್ರಿ ನಡೆದ ಬನ್ನಿ ಉತ್ಸವ ಅಕ್ಷರಶಃ ದುರಂತವಾಗಿ ಮಾರ್ಪಟ್ಟಿದೆ. ದೇವರಗಟ್ಟು ದೊಣ್ಣೆ ಕಾಳಗದಲ್ಲಿ ನಾಲ್ವರು ಸಾವನ್ನಪ್ಪಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ‘ಶತಮಾನಗಳಷ್ಟು ಹಳೆಯದಾದ ಈ ಆಚರಣೆಗಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಿಂದ ಸುಮಾರು ಮೂರು ಲಕ್ಷ ಭಕ್ತರು ಶ್ರೀ ಮಾಲಾ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದರು. ಭೈರವನು ಮಣಿ ಮತ್ತು ಮಲ್ಲಾಸುರ ಎಂಬ ರಾಕ್ಷಸರನ್ನು ಸಂಹರಿಸಿದ ಕಾರಣಕ್ಕಾಗಿ ಈ ಉತ್ಸವ ನಡೆಸಲಾಗುತ್ತದೆ. ಇದರಲ್ಲಿ ಕರ್ರಲ ಸಮರಂ (ದೊಣ್ಣೆ ಸಂಘರ್ಷ) ಎಂದು ಕರೆಯಲ್ಪಡುವ ವಾರ್ಷಿಕ ಬನ್ನಿ ಉತ್ಸವ ಪ್ರಮುಖ ಆಕರ್ಷಣೆಯಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 3,500ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಮುಂಬರುವ ಎಲ್ಲಾ ಚುನಾವಣೆಗಳಿಗೆ JDS – BJP ಮೈತ್ರಿ! – ಹೆಚ್ಡಿ ದೇವೇಗೌಡ
ಭೈರವನು ಮಣಿ ಮತ್ತು ಮಲ್ಲಾಸುರ ರಾಕ್ಷಸರನ್ನು ಸಂಹರಿಸುವಂತೆ ಶಿವನ ಸಾಂಕೇತಿಕ ಪುನರ್ನಿರ್ಮಾಣದ ಕಾರ್ಯಕ್ರಮದಲ್ಲಿ ನಿರ್ಧಿಷ್ಠ ಭಕ್ತರು ದೊಣ್ಣೆಗಳಿಂದ ಪರಸ್ಪರ ಬಡಿದಾಡುತ್ತಾರೆ. ಈ ಬಡಿದಾಟ ಮತ್ತು ಭಾರೀ ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿ ನಾಲ್ವರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಗಂಭೀರವಾಗಿ ಗಾಯಗೊಂಡ ಏಳು ಭಕ್ತರನ್ನು ಅದೋನಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಡಜನ್ಗಟ್ಟಲೆ ಗಾಯಾಳುಗಳು ಆಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇವಾಲಯ ಸಮಿತಿಯ ಅಧ್ಯಕ್ಷ ಜಿ. ಶ್ರೀನಿವಾಸುಲು ಅವರು, ಆಚರಣೆಯಲ್ಲಿ ರಕ್ತಸ್ರಾವದ ಗಾಯಗಳು ದೈವಿಕ ಆಶೀರ್ವಾದದ ಸಂಕೇತವೆಂದು ಭಕ್ತರು ನಂಬುತ್ತಾರೆ. ಈ ಕಾರ್ಯಕ್ರಮಕ್ಕಾಗಿ ಸುತ್ತಮುತ್ತಲ ನೆರಡಿಕಿ, ಕೊಥಪೇಟ ಮತ್ತು ಹತ್ತಿರದ ಹಳ್ಳಿಗಳ ಗ್ರಾಮಸ್ಥರು ಶಿವನ ಅನುಯಾಯಿಗಳನ್ನು ಪ್ರತಿನಿಧಿಸುತ್ತಾರೆ, ಆದರೆ ಪ್ರತಿಸ್ಪರ್ಧಿ ಗುಂಪುಗಳು ರಾಕ್ಷಸರನ್ನು ಚಿತ್ರಿಸುತ್ತವೆ, ಇದರ ಪರಿಣಾಮವಾಗಿ ಭೀಕರ ಆದರೆ ಧಾರ್ಮಿಕ ಘರ್ಷಣೆಗಳು ಉಂಟಾಗುತ್ತವೆ ಎಂದು ಹೇಳಿದ್ದಾರೆ. ಅಂತೆಯೇ ಪುನರಾವರ್ತಿತ ಸಾವುನೋವುಗಳ ಹೊರತಾಗಿಯೂ, ಭಾಗವಹಿಸುವವರು ಯುದ್ಧವನ್ನು ಪವಿತ್ರ ಸಂಪ್ರದಾಯವೆಂದು ಪರಿಗಣಿಸುವುದರಿಂದ ಯಾವುದೇ ಪೊಲೀಸ್ ದೂರುಗಳು ದಾಖಲಾಗುವುದಿಲ್ಲ. ಸುಮಾರು 800 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತಾದರೂ ಭಾರಿ ಜನಸಂದಣಿಯು ಭದ್ರತಾ ವ್ಯವಸ್ಥೆಗೇ ಸವಾಲೆಸೆದು ಅವ್ಯವಸ್ಥೆ ಸೃಷ್ಟಿಸಿತು.


ನೋಡಿರಿ

