ಶಕುಂತಲಾ ಮನೆ ಹಾಳು ಪ್ಲ್ಯಾನ್‌ ಸಕ್ಸಸ್‌ – ಎಲ್ಲರೆದುರು ಕೆಟ್ಟವಳಾದ ಭೂಮಿಕಾ
ಹಳ್ಳ ಹಿಡಿಯುತ್ತಾ ಅಮೃತಧಾರೆ ಸೀರಿಯಲ್?‌

ಶಕುಂತಲಾ ಮನೆ ಹಾಳು ಪ್ಲ್ಯಾನ್‌ ಸಕ್ಸಸ್‌ – ಎಲ್ಲರೆದುರು ಕೆಟ್ಟವಳಾದ ಭೂಮಿಕಾಹಳ್ಳ ಹಿಡಿಯುತ್ತಾ ಅಮೃತಧಾರೆ ಸೀರಿಯಲ್?‌

ಜೀ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಅಮೃತಧಾರೆ ಸೀರಿಯಲ್‌ ಮಹಾ ತಿರುವಿನತ್ತ ಸಾಗಿದೆ. ಕಳೆದ ಕೆಲವು ದಿನಗಳಿಂದ ಅಪೇಕ್ಷಾ ಮತ್ತು ಪಾರ್ಥನ ಪ್ರೀತಿಯ ನೋವು, ಗೋಳಿನ ಕಥೆಯನ್ನೇ  ತೋರಿಸಲಾಗುತ್ತಿದೆ.. ಅಮರ ಮಧುರ ಪ್ರೇಮ ಎನ್ನುವ ರೀತಿ ಸಾಗುತ್ತಿದ್ದ ಅಪ್ಪಿ ಪಾರ್ಥ ಪ್ರೀತಿಗೆ ಶಕುಂತಳಾ ವಿಲನ್‌ ಆಗಿದ್ದಾಳೆ.. ಇವರ ಪ್ರೀತಿಗೆ ಸಪೋರ್ಟ್‌ ಮಾಡ್ತಿದ್ದ ಭೂಮಿಯನ್ನು ಕೂಡ ಎಲ್ಲರ ಕಣ್ಣಿಗೆ ಕೆಟ್ಟವಳಂತೆ ಕಾಣುವ ಹಾಗೆ ಮಾಡಿದ್ದಾಳೆ. ಇದೀಗ ಈ ಗೋಳಿಕ ಕತೆ ವೀಕ್ಷಕರಿಗೆ ಸಿಟ್ಟು ತರಿಸಿದೆ.. ಎಲ್ಲಾ ಸೀರಿಯಲ್‌ನಂತೆ ಈ ಸೀರಿಯಲ್‌ ಕೂಡ ಹಳ್ಳ ಹಿಡಿತಾ ಇದೆ.. ಸೀರಿಯಲ್‌ ಟೀಮ್‌ ಹೀಗೆ ಮಾಡ್ಬಾರ್ದಿತ್ತು. ಇನ್ನಂತೂ ಈ ಸೀರಿಯಲ್‌ ನೋಡಕ್ಕಾಗಲ್ಲ ಅಂತಾ ವೀಕ್ಷಕರು ಹೇಳ್ತಿದ್ದಾರೆ.. ಅಷ್ಟಕ್ಕೂ ಅಮೃತಧಾರೆ ಸೀರಿಯಲ್‌ನಲ್ಲಿ ತಂದಿರೋ ಬದಲಾವಣೆ ಏನು? ಸೀರಿಯಲ್‌ ಪ್ರೇಮಿಗಳು ಸಿಟ್ಟಾಗಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IPLನ ರೀಟೇನ್ & RTMಗೆ ಟ್ವಿಸ್ಟ್ – ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಬೇಡ್ವಾ?

ಎಲ್ಲಾ ಸೀರಿಯಲ್‌ಗಳಲ್ಲಿ ಅಳು ಮುಂಜಿ ಪಾತ್ರ, ವಿಲನ್‌ಗಳ ಕುತಂತ್ರಕ್ಕೆ ಸೀರಿಯಲ್‌ ಹೀರೋಯಿನ್‌ ಬಲಿಯಾಗೋದು.. ಇದನ್ನೇ ತೋರಿಸಲಾಗ್ತಿತ್ತು.. ಆದ್ರೆ ಅಮೃತಧಾರೆ ಸೀರಿಯಲ್‌ ಅನ್ನ ಕೊಂಚ ವಿಭಿನ್ನವಾಗಿ ತೋರಿಸಲಾಗ್ತಿತ್ತು.. ಇದಕ್ಕೆ ಕಾರಣ, ಎಲ್ಲಾ ಸೀರಿಯಲ್​ಗಳಂತೆ ಇಲ್ಲಿ ಲೇಡಿ ವಿಲನ್​ ಇದ್ದರೂ ಸಹ ಇಲ್ಲಿ ವಿಲನ್​ ಸೋಲುತ್ತಿದ್ದಾಳೆ.. ಭೂಮಿಕಾಳನ್ನ ಮಟ್ಟ ಹಾಕಲು  ಅತ್ತೆ ಶಕುಂತಳಾ ದೇವಿ ಏನೇ ಪ್ಲಾನ್‌ ಮಾಡಿದ್ರು ಎಲ್ಲಾ ಉಲ್ಟಾ ಆಗಿತ್ತು.. ಭೂಮಿ ಮುಂದೆ ಸೋತು ಸುಣ್ಣವಾಗ್ತಿದ್ಲು.. ಇದೇ ಕಾರಣಕ್ಕೆ ಅಮೃತಧಾರೆ ಸೀರಿಯಲ್‌ ವೀಕ್ಷಕರಿಗೆ ಇಷ್ಟ ಆಗ್ತಾ ಇತ್ತು.. ಆದ್ರೆ ಸದಾ ರೆಬಲ್‌ ಆಗಿ ಮಿಂಚುತ್ತಿದ್ದ ಭೂಮಿಕಾ ಈಗ ಅಪ್ಪಿ ಹಾಗೂ ಪಾರ್ಥ ಪ್ರೀತಿ ವಿಚಾರದಲ್ಲಿ ಕೈ ಚೆಲ್ಲಿ ಕುಳಿತಿದ್ದಾಳೆ.. ಶಕುಂತಳ ಕುತಂತ್ರಕ್ಕೆ ಭೂಮಿಕಾ ಕಣ್ಣೀರು ಹಾಕುವಂತೆ ಆಗಿದೆ.

ಹೌದು, ಈಗ  ಸೀರಿಯಲ್​ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಭೂಮಿಕಾ ತಂಗಿ ಅಪ್ಪಿ ಮತ್ತು ಗೌತಮ್​ ತಮ್ಮ ಪಾರ್ಥ ಪ್ರೀತಿ ಮಾಡುತ್ತಿರುವ ವಿಷಯ ತಿಳಿದ ಅತ್ತೆ ಶಕುಂತಲಾದೇವಿ,  ಅಪ್ಪಿ ಪಾರ್ಥ ಮದುವೆ ಮಾಡಿಸಿದ್ರೆ ತಾನು ವಿಷ ಕುಡಿಯೋದಾಗಿ ನಾಟಕವಾಡಿದ್ದಾಳೆ. ಅವರ ಮದುವೆ ಮಾಡದಂತೆ ಭೂಮಿಕಾ ಬಳಿ ಭಾಷೆ ತೆಗೆದುಕೊಂಡಿದ್ದಾಳೆ. ಪಾರ್ಥನಿಗೆ ಬೇರೆ  ಹುಡುಗಿ ನೋಡಿ ಮದುವೆ ಮಾಡಲು ಮುಂದಾಗಿದ್ದಾಳೆ ಶಕುಂತಲಾ. ಇನ್ನೊಂದ್ಕಡೆ ಭೂಮಿಕಾ ತಂದೆ ಸದಾಶಿವ ಕೂಡ ಈ ಮದುವೆ ಆಗಬಾರದು ಎಂದು ಪಟ್ಟು ಹಿಡಿದಿದ್ದಾರೆ. ಅತ್ತ ಕಡೆ ಪಾರ್ಥ ಮತ್ತು ಅಪ್ಪಿ ಬೇರೆ ಬೇರೆಯಾಗಿ ಭೂಮಿಕಾ ಬಳಿ ಬಂದು ತಮ್ಮ ಪ್ರೀತಿಯನ್ನು ಹೇಳಿಕೊಂಡು ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದಾರೆ. ಭೂಮಿಕಾ ಬಳಿ ಅದೆಷ್ಟು ಬಾರಿ ಅಪ್ಪಿ ಹಾಗೂ ಪಾರ್ಥ ಗೋಗರಿದರು ಆಕೆ  ಮನಸ್ಸು ಬದಲಾಯಿಸುವುದಿಲ್ಲ. ಮನಸ್ಸಿಗೆ ಬಹಳ ನೋವಾಗುತ್ತಿದ್ದರೂ, ಏನು ಮಾಡಲಾಗದ ಸ್ಥಿತಿಯಲ್ಲಿ ಇರುತ್ತಾಳೆ ಭೂಮಿಕಾ. ಒಂದು ಕಡೆ ಅಪ್ಪಿ, ಇನ್ನೊಂದು ಕಡೆ ಪಾರ್ಥ. ಒಂದು ಕಡೆ ತಂದೆ ಮಾತು. ಇನ್ನೊಂದು ಕಡೆ ಅತ್ತೆಗೆ ಕೊಟ್ಟ ಮಾತು. ಇವೆಲ್ಲವನ್ನೂ ಉಳಿಸಿಕೊಳ್ಳಬೇಕು ಎನ್ನುವುದು ಭೂಮಿಕಾಗೆ ಮನಸ್ಸಿನಲ್ಲಿ ಇರುತ್ತೆ. ಆದರೆ ಶಕುಂತಲಾ ದೇವಿಯ ಪ್ಲಾನ್ ಬೇರೆ ಇದೆ. ಭೂಮಿಕಾಳಾನ್ನ ಎಲ್ಲರ ಎದುರು ಕೆಟ್ಟವರನ್ನಾಗಿ ಮಾಡಬೇಕು ಎನ್ನುವುದು ಶಕುಂತಲಾ ದೇವಿ ಪ್ಲಾನ್.  ಶಕುಂತಳಾ ಪ್ಲಾನ್‌ ನಿಂದಾಗಿ ಭೂಮಿಕಾ ಎಲ್ಲರ ಬಳಿಯೂ ನಿಷ್ಠೂರ ಆಗಿದ್ದಾಳೆ. ಅಲ್ಲಿಗೆ ಅತ್ತೆ ಶಕುಂತಲಾ ದೇವಿ ಪ್ಲ್ಯಾನ್ಸ್​ ಸಕ್ಸಸ್​  ಆಗಿದೆ.

ಭೂಮಿಕಾ ಪ್ರೀತಿಗೆ ಸಪೋರ್ಟ್‌ ಮಾಡಲ್ಲ ಅಂತಾ ಹೇಳಿದ್ಮೇಲೆ  ಪಾರ್ಥ   ಶಕುಂತಲಾ ದೇವಿ ಬಳಿ ಬಂದು ತನ್ನ ಪ್ರೀತಿಯ ವಿಷಯ ಹೇಳಿಕೊಂಡಿದ್ದಾನೆ. ಇದನ್ನೇ ಕಾಯುತ್ತಿದ್ದ ಅವಳು, ಮದುವೆಗೆ ಒಪ್ಪಿ ಅಪ್ಪಿಯ ಮನೆಗೆ ಹೋಗಿ ಮಾತನಾಡುವುದಾಗಿ ಹೇಳಿದ್ದಾಳೆ. ಅಲ್ಲಿಗೆ ಪಾರ್ಥ ಮತ್ತು ಅಪ್ಪಿಯ ಪಾಲಿಗೆ ಆಕೆ ದೇವತೆ ಎನಿಸಿಕೊಂಡಿದ್ದಾಳೆ. ಇತ್ತ ಭೂಮಿಕಾ ಇಬ್ಬರ ವಿರೋಧ ಕಟ್ಟಿಕೊಂಡಿದ್ದಾಳೆ. ಇದೀಗ ಅಕ್ಕ ಮತ್ತು ತಂಗಿಯಂದಿರನ್ನು ವಾರೆಗಿತ್ತಿ ಮಾಡಿ ತಂಗಿಯಿಂದಲೇ ಅಕ್ಕನ ವಿರುದ್ಧ ಸಂಚು ಹೂಡಿಸುವ ಪ್ಲ್ಯಾನ್​ ಶಕುಂತಲಾದ್ದು. ಈಗಾಗಲೇ ಮದುವೆಗೆ ನಿರಾಕರಿಸಿದ್ದ ಅಕ್ಕನ ಮೇಲೆ ಅಪ್ಪಿಗೆ ಸಿಟ್ಟಿದೆ. ಶಕುಂತಲಾ ದೇವಿಯನ್ನ ದೇವರಂತೆ ಕಾಣುತ್ತಾಳೆ. ಅಕ್ಕ-ತಂಗಿಯರ ನಡುವೆ ತಂದಿಟ್ಟು ಮಜಾ ನೋಡುವ ಪ್ಲ್ಯಾನ್​ ಹಾಕಿದ್ದಾಳೆ ಶಕುಂತಳಾ.. ಇದೀಗ ವೀಕ್ಷಕರು ಸೀರಿಯಲ್‌ ವಿರುದ್ಧ ಸಿಟ್ಟಾಗಿದ್ದಾರೆ.. ಮೊದ ಮೊದಲು ಸೀರಿಯಲ್‌ ನೋಡಲು ಖಷಿ ಆಗ್ತಾ ಇತ್ತು.. ಆದ್ರೆ ಈಗ ಕತೆ ಎತ್ತಲೋ ಸಾಗುತ್ತಿದೆ.. ಹೀಗಾದರೆ ಮಾಮೂಲಿ ಸೀರಿಯಲ್​ ರೀತಿಯಲ್ಲಿಯೇ ಈ ಧಾರಾವಾಹಿಯ ಕಥೆಯೂ ಹೋಗಿ ಸೀರಿಯಲ್ ಹಳ್ಳ ಹಿಡಿಯುತ್ತೆ.. ಈ ಗೋಳಿನ ಕತೆ ನಮಗಂತೂ ಬೇಡವಾಗಿ ಬಿಟ್ಟಿದೆ. ಭೂಮಿ ಯಾವಾಗಲು ರೆಬಲು ಆಗಿದ್ರೆ ಮಾತ್ರ ನೋಡಲು ಚೆಂದ.. ಅದು ಬಿಟ್ಟು ಅಳುಮುಂಜಿಯಾಗಿ ತೋರ್ಸಿದ್ರೆ ನೋಡೋಕೆ ಆಗಲ್ಲ.. ಈ ಕತೆಯೂ ಎಲ್ಲಾ ಸೀರಿಯಲ್‌ನಂತೆ ಆಗಿತ್ತಾ ಅಂತಾ ಸೀರಿಯಲ್​ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *