ಮುಖಕ್ಕೆ ಸರ್ಜರಿ ಮಾಡಿಸಿಕೊಂಡಿದ್ಯಾಕೆ ಖಲಿಸ್ತಾನಿ ಕಿರಾತಕ? – ಅಮೃತ್​​ಪಾಲ್​ ಸಿಂಗ್ ಬಂಧನಕ್ಕೆ ಖಾಕಿ ಹೈ ಅಲರ್ಟ್

ಮುಖಕ್ಕೆ ಸರ್ಜರಿ ಮಾಡಿಸಿಕೊಂಡಿದ್ಯಾಕೆ ಖಲಿಸ್ತಾನಿ ಕಿರಾತಕ? – ಅಮೃತ್​​ಪಾಲ್​ ಸಿಂಗ್ ಬಂಧನಕ್ಕೆ ಖಾಕಿ ಹೈ ಅಲರ್ಟ್

ಪೊಲೀಸರ ಕಣ್ಣೆದುರಿಗೇ ಎಸ್ಕೇಪ್​ ಆಗಿ ಕಳೆದ ಕೆಲ ವಾರಗಳಿಂದ ತಲೆಮರೆಸಿಕೊಂಡಿರುವ ಖಲಿಸ್ತಾನಿ ನಾಯಕ ಅಮೃತ್​​ಪಾಲ್​ ಸಿಂಗ್ ಇನ್ನೂ ಕೂಡ ಖಾಕಿ ಕೈಗೆ ಸಿಕ್ಕಿಲ್ಲ. ಇದೀಗ ಅಮೃತ್​​ಪಾಲ್​ ಸಿಂಗ್ ಪಂಜಾಬ್​ನ ಸಿಖ್ಖರ ಜೊತೆಗೆ ಸಭೆ ನಡೆಸಲು ಪ್ಲ್ಯಾನ್ ಮಾಡಿದ್ದಾನೆ ಎನ್ನಲಾಗಿದೆ. ಏಪ್ರಿಲ್ 14ರಂದು ಸಿಖ್ಖರ್ ಬೈಸಖಿ ಹಬ್ಬದಂದೇ ಮೀಟಿಂಗ್ ಮಾಡೋಕೆ ಅಮೃತ್​ಪಾಲ್​ ಮುಂದಾಗಿದ್ದಾನಂತೆ. ಹೀಗಾಗಿ ಪಂಜಾಬ್ ಪೊಲೀಸರು ಅಲರ್ಟ್ ಅಗಿದ್ದು, ಏಪ್ರಿಲ್ 14ರವರೆಗೆ ಸಿಬ್ಬಂದಿಗೆ ಯಾವುದೇ ರಜೆ ನೀಡದಿರಲು ಪೊಲೀಸ್ ಇ​ಲಾಖೆ ತೀರ್ಮಾನಿಸಿದೆ.

ಇದನ್ನೂ ಓದಿ: ಅತ್ತ ‘ತೆನೆ’ ಇಳಿಸಿದ್ದಾಯ್ತು.. ಇತ್ತ ‘ಕೈ’ ಹಿಡಿದಾಯ್ತು..ಆದರೂ ಟಿಕೆಟ್ ಮಿಸ್ – ವೈಎಸ್‌ವಿ ದತ್ತ ಅತಂತ್ರ, ಅಭಿಮಾನಿಗಳಿಗೆ ಭಾವುಕ ಪತ್ರ

ಯಾವ ಪೊಲೀಸ್ ಸಿಬ್ಬಂದಿ ಕೂಡ ಏಪ್ರಿಲ್ 14ರವರೆಗೆ ರಜೆ ಕೇಳುವಂತಿಲ್ಲ ಅಂತ ಪೊಲೀಸ್ ಇ​ಲಾಖೆ ಖಡಕ್ ಸೂಚನೆ ಕೊಟ್ಟಿದೆ. ಅಮೃತ್​ಪಾಲ್ ಶರಣಾಗುತ್ತಾನೆ ಅಂತಾ ಹೇಳಲಾಗಿತ್ತಾದ್ರೂ, ಇದುವರೆಗೂ ಆತ ಶರಣಾಗಿಲ್ಲ. ಪೊಲೀಸರಿಗೆ ಕೂಡ ಆತನನ್ನ ಬಂಧಿಸೋಕೆ ಸಾಧ್ಯವಾಗಿಲ್ಲ. ಈ ನಡುವೆ, ಅಮೃತ್​​ಪಾಲ್ ಪಾಕಿಸ್ತಾನಕ್ಕೆ ಪಲಾಯನ ಮಾಡೋಕೆ ತಂತ್ರ ಹೆಣೆದಿದ್ದಾನೆ ಅನ್ನೋ ಮಾಹಿತಿ ಸಿಕ್ಕಿದ್ದು, ಪಂಜಾಬ್​​​ ಮತ್ತು ಪಾಕಿಸ್ತಾನ ಗಡಿಯಲ್ಲಿ ವಿಶೇಷ ಭದ್ರತಾ ತಂಡಗಳನ್ನ ಕೂಡ ನಿಯೋಜಿಸಲಾಗಿದೆ.

ಈ ಮಧ್ಯೆ ಅಮೃತ್​​ಪಾಲ್ ಸಿಂಗ್ ಕುರಿತು ಮತ್ತೊಂದು ಮಹತ್ವದ ಮಾಹಿತಿ ಬಹಿರಂಗವಾಗಿದೆ. ವಿದೇಶದಿಂದ ಭಾರತಕ್ಕೆ ಬರೋ ಮುನ್ನ ಖಲಿಸ್ತಾನಿ ಮೂಲಭೂತವಾದಿ ಜರ್ನೈಲ್​ ಸಿಂಗ್ ಭಿಂದ್ರನ್​ವಾಲೆ ರೀತಿ ಕಾಣಿಸಿಕೊಳ್ಳೋಕೆ ಅಮೃತ್​​ಪಾಲ್​ ಸಿಂಗ್ ​ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದನಂತೆ. ಇದು ಪ್ಲಾಸ್ಟಿಕ್​​ ಸರ್ಜರಿ ಮಾದರಿಯ ಮುಖದ ರೂಪ ಬದಲಿಸುವಂಥಾ ಸರ್ಜರಿಯಾಗಿದ್ದು, ಪಂಜಾಬ್ ಜನರು ನನ್ನಲ್ಲಿ ಭಿಂದ್ರನ್​ವಾಲೆಯಲ್ಲಿ ಕಾಣಲಿ ಅನ್ನೋ ದೃಷ್ಟಿಯಿಂದ. ಯುವಕರನ್ನ ಸೆಳೆಯುವ ಉದ್ದೇಶದಿಂದಲೇ ಅಮೃತ್​ಪಾತ್ ವಿಶೇಷ ಸರ್ಜರಿಗೆ ಒಳಗಾಗಿದ್ದನಂತೆ. ಈ ವಿಚಾರವನ್ನ ಬಂಧಿತರಾಗಿರುವ ಆತನ ಸಹಚರರೇ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಕೆಂಪುಕೋಟೆ ಮೇಲೆ ಹಂಗಾಮ ಮಾಡಿ ದೀಪ್ ಸಿಧು ಸಾವಿನ ಬಳಿಕ ದುಬೈನಲ್ಲಿ ಟ್ರಕ್ ಡ್ರೈವರ್ ಆಗಿದ್ದ ಅಮೃತ್​ಪಾಲ್ ಭಾರತಕ್ಕೆ ಮರಳಿದ್ದ. ದೀಪ್​ಸಿಧುವಿನ ವಾರಿಸ್ ಪಂಜಾಬ್​ ದೆ ಸಂಘಟನೆಯ ನೇತೃತ್ವ ವಹಿಸಿಕೊಂಡು, ಭಿಂದ್ರನ್​ವಾಲೆ ರೀತಿ ವೇಷಭೂಷಣ ಮಾಡಿಕೊಂಡು ಪ್ರಚೋದನಾಕಾರಿ ಭಾಷಣಗಳನ್ನು ಮಾಡ್ತಿದ್ದ.

suddiyaana