ಬಿಗ್‌ಬಿ ಬೈಕ್‌ ಸವಾರಿ – ಪೊಲೀಸರ ಎಂಟ್ರಿಯಾಗುತ್ತಿದ್ದಂತೆ ಅಮಿತಾಭ್‌ ಉಲ್ಟಾ ಹೊಡೆದಿದ್ಯಾಕೆ?

ಬಿಗ್‌ಬಿ ಬೈಕ್‌ ಸವಾರಿ – ಪೊಲೀಸರ ಎಂಟ್ರಿಯಾಗುತ್ತಿದ್ದಂತೆ ಅಮಿತಾಭ್‌ ಉಲ್ಟಾ ಹೊಡೆದಿದ್ಯಾಕೆ?

ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕಳೆದೆರಡು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ.  ಬಿಗ್‌ ಬಿ ಟ್ರಾಫಿಕ್‌ ಮಧ್ಯೆ ಸಿಲುಕಿದ್ದರಿಂದ ಅಭಿಮಾನಿಯೊಬ್ಬ ಬೈಕ್‌ ನಲ್ಲಿ ತೆರಳಿ ಶೂಟಿಂಗ್‌ ಸ್ಪಾಟ್‌ ಗೆ ತೆರಳಿರುವ ವಿಚಾರವನ್ನು ಫೋಟೋದೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಸಂಬಂಧ ಮುಂಬೈ ಪೊಲೀಸರು ದಂಡ ಕಟ್ಟುವಂತೆ ಹೇಳಿದ್ದರು. ಇದರ ಬೆನ್ನಲ್ಲೇ ಬಿಗ್‌ ಬಿ ಉಲ್ಟಾ ಹೊಡೆದಿದ್ದಾರೆ.

ಇದನ್ನೂ ಓದಿ:  ಟ್ರಾಫಿಕ್‌ ಮಧ್ಯೆ ಸಿಲುಕಿದ ಅಮಿತಾಭ್‌ ಬಚ್ಚನ್‌ –‌  ಶೂಟಿಂಗ್‌ ಸ್ಪಾಟ್‌ ಗೆ ತೆರಳಲು ಮಾಡಿದ್ದೇನು ಗೊತ್ತಾ?

ಟ್ರಾಫಿಕ್ ಸಮಸ್ಯೆಯ ಕಾರಣದಿಂದಾಗಿ ಅಭಿಮಾನಿಯೊಬ್ಬನ  ಬೈಕ್ ನಲ್ಲಿ ಅಮಿತಾಭ್‌ ಬಚ್ಚನ್‌ ತೆರಳಿದ್ದರು. ಬೈಕ್ ಸವಾರಿ ವೇಳೆ ಇಬ್ಬರೂ ಹೆಲ್ಮೆಟ್ ಹಾಕಿಕೊಳ್ಳದೇ ಇರುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.  ಪ್ರಭಾವಿಶಾಲಿಗಳೇ ಹೀಗೆ ಕಾನೂನು ಉಲ್ಲಂಘಿಸಿದರೆ ಹೇಗೆ? ಅವರ ಮೇಲೆ ಅಗತ್ಯ ಕ್ರಮ ತಗೆದುಕೊಳ್ಳಬೇಕು ಎಂದು ಹಲವರು ಮುಂಬೈ ಟ್ರಾಫಿಕ್ ಪೊಲೀಸರಿಗೆ ಆಗ್ರಹಿಸಿದ್ದರು.

ಈ ಆಗ್ರಹ ಜೋರಾಗುತ್ತಿದ್ದಂತೆಯೇ ಅಮಿತಾಭ್‌ ಬಚ್ಚನ್‌ ಈ ವಿಚಾರಕ್ಕೆ ಸಂಬಂಧಿಸಿದಂತೆ ಉಲ್ಟಾ ಹೊಡೆದಿದ್ದಾರೆ. ತಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಬೈಕ್ ಸವಾರಿ ಕೂಡ ಆಗಿಲ್ಲ. ಅದು ಶೂಟಿಂಗ್ ಸ್ಥಳದಲ್ಲಿ ನಡೆದ ಘಟನೆ. ನಲವತ್ತು ಮೀಟರ್ ಕೂಡ ಸವಾರಿ ಮಾಡಿಲ್ಲ ಎಂದು ತೇಪೆ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೇ, ಬೈಕ್ ಸವಾರಿ ಮಾಡಬೇಕಾದ ಸಂದರ್ಭ ಬಂದಾಗ ಹೆಲ್ಮೆಟ್ ಧರಿಸಿರುವ ಕುರಿತು ಹೇಳಿದ್ದಾರೆ.

ಮೊನ್ನೆ ಬೈಕ್ ಸವಾರನ ಫೋಟೋ ಹಂಚಿಕೊಂಡಿದ್ದ ಬಚ್ಚನ್, ‘ಡ್ರಾಪ್ ನೀಡಿದ್ದಕ್ಕೆ ಗೆಳೆಯನಿಗೆ ಧನ್ಯವಾದಗಳು. ನನ್ನನ್ನು ಸರಿಯಾದ ಸಮಯಕ್ಕೆ ಸೇರಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದೀಯಾ. ಕ್ಯಾಪ್, ಶರ್ಟ್ಸ್ ಮತ್ತು ಹಳದಿ ಬಣ್ಣದ ಟೀ ಶರ್ಟ್ ತೊಟ್ಟಿದ್ದ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು. ಈ ಫೋಟೋದಲ್ಲಿ ಬೈಕ್ ಓಡಿಸುವವರು ಮತ್ತು ಅಮಿತಾಭ್ ಇಬ್ಬರೂ ಹೆಲ್ಮೆಟ್ ಧರಿಸಿಲ್ಲ. ಹಾಗಾಗಿ ವ್ಯಕ್ತಿಯೊಬ್ಬರು ಆ ಫೋಟೋವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ದಂಡ ಹಾಕುವಂತೆ ಒತ್ತಾಯಿಸಲಾಗಿತ್ತು.

suddiyaana