ಕರಾವಳಿಯಲ್ಲಿ ಕೊರಗಜ್ಜನ ಕೋಲ – ಮಂಗಳೂರಲ್ಲಿ ಅಮಿತ್ ಶಾ ರೋಡ್ ಶೋ ರದ್ದು

ಕರಾವಳಿಯಲ್ಲಿ ಕೊರಗಜ್ಜನ ಕೋಲ – ಮಂಗಳೂರಲ್ಲಿ ಅಮಿತ್ ಶಾ ರೋಡ್ ಶೋ ರದ್ದು

ಕರಾವಳಿಯಲ್ಲಿ ಕೊರಗಜ್ಜನ ಆರಾಧನೆ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ಈಗ ಕೊರಗಜ್ಜನ ದೈವದ ಕೋಲದ ಕಾರಣದಿಂದಾಗಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ಕೂಡಾ ರದ್ದಾಗಿದೆ. ನಾಳೆ ಸಂಜೆ ಮಂಗಳೂರಲ್ಲಿ ಅಮಿತ್ ಶಾ ರೋಡ್ ಶೋ ನಡೆಸುವ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಆದರೆ, ರೋಡ್ ಶೋ ನಡೆಯುವ ಮಾರ್ಗಮಧ್ಯೆ ಪದವಿನಂಗಡಿ ಬಳಿ ಕೊರಗಜ್ಜನ ಕೋಲ ನಡೆಯುತ್ತಿದೆ. ಈ ಕಾರಣಕ್ಕೆ ಅಮಿತ್ ಶಾ ರೋಡ್ ಶೋ ರದ್ದು ಮಾಡಲಾಗಿದೆ.

ಇದನ್ನೂ ಓದಿ:  ಪೂಜೆ ನೆಪದಲ್ಲಿ ಸೀರೆ ಹಂಚಿದ ಬಿಜೆಪಿ ಮುಖಂಡ – ನಾ ಮುಂದು ತಾ ಮುಂದು ಅಂತಾ ಮುಗಿಬಿದ್ದ ಮಹಿಳೆಯರು!  

ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಅಮಿತ್ ಶಾ ಶನಿವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ಮಂಗಳೂರಿನಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸಲು ಬಿಜೆಪಿ ಎಲ್ಲಾ ತಯಾರಿ ನಡೆಸಿದೆ. ಪುತ್ತೂರಿನ ಕ್ಯಾಂಪ್ಕೋ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಬಳಿಕ ಅಮಿತ್ ಶಾ ಮಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸುವುದಿತ್ತು. ಆದರೆ, ಕೊರಗಜ್ಜನ ಕೋಲಕ್ಕೆ ಜನ ಸೇರುತ್ತಾರೆ. ಭದ್ರತಾ ದೃಷ್ಟಿಯಿಂದ ರೋಡ್ ಶೋ ಅನ್ನು ರದ್ದುಗೊಳಿಸಲಾಗಿದೆ.

suddiyaana