ದಳ – ಕಮಲ ಒಗ್ಗೂಡಿಸಿ ರಾಜ್ಯದಲ್ಲಿ ರಣತಂತ್ರ ಹೆಣೆದ ಚುನಾವಣಾ ಚಾಣಕ್ಯ – ಎಲೆಕ್ಷನ್‌ ಗೆಲ್ಲಲು ಅಮಿತ್ ಶಾ ಮಾಸ್ಟರ್ ಪ್ಲ್ಯಾನ್

ದಳ – ಕಮಲ ಒಗ್ಗೂಡಿಸಿ ರಾಜ್ಯದಲ್ಲಿ ರಣತಂತ್ರ ಹೆಣೆದ ಚುನಾವಣಾ ಚಾಣಕ್ಯ – ಎಲೆಕ್ಷನ್‌ ಗೆಲ್ಲಲು ಅಮಿತ್ ಶಾ ಮಾಸ್ಟರ್ ಪ್ಲ್ಯಾನ್

ಲೋಕಸಭಾ ಚುನಾವಣೆಗೆ ಕೌಂಡ್‌ಡೌನ್ ಶುರುವಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಸಾಕಷ್ಟು ತಂತ್ರಗಾರಿಕೆಯನ್ನು ಮಾಡುತ್ತಿದೆ. ಲೋಕಸಭೆ ಚುನಾವಣೆಗೆ ಸಿದ್ಧತೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜತೆ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಿದ್ದಾರೆ.

ಇದನ್ನೂ ಓದಿ: ಕಪ್ ಗೆಲ್ಲೋ ಮೊದಲು ಪ್ಲೇ ಆಫ್‌ಗೆ ರೀಚ್ ಆಗಿ – ಆರ್‌ಸಿಬಿ ಫ್ಯಾನ್ಸ್ ಕೋರಿಕೆ ಈಡೇರುತ್ತಾ?

ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸೇರಿದಂತೆ ಇತರ ನಾಯಕರ ಜತೆ ಅಮಿತ್‌ ಶಾ ಮಂಗಳವಾರ ಸಮಾಲೋಚನೆ ನಡೆಸಿದ್ದಾರೆ. ಈ ಸಭೆಯಲ್ಲಿ ಹಲವು ಸೂಚನೆಗಳನ್ನು ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದಕ್ಕಾಗಿ ಹಲವು ತಂತ್ರಗಳನ್ನು ಅಮಿತ್‌ ಶಾ ಸೂಚಿಸಿದ್ದಾರೆ.

ಹಿಂದುಳಿದ ಸಮುದಾಯಗಳನ್ನು ಸೆಳೆಯಲು ಕಾರ್ಯಪ್ರವೃತ್ತರಾಗಬೇಕು.. ತಳಮಟ್ಟದ ಕಾರ್ಯಕರ್ತರಿಂದ ಮುಖಂಡರವರೆಗೂ ಯಾವುದೇ ಭಿನ್ನಾಭಿಪ್ರಾಯ, ಅಸಮಧಾನ ಇರಬಾರದು. ಒಂದುವೇಳೆ ಅಸಮಧಾನ ಇದ್ರೆ ಬಗೆಹರಿಸಿಕೊಳ್ಳುವಂಥ ಕೆಲಸವನ್ನು ಎರಡು ಪಕ್ಷದ ಹಿರಿಯರು ಮಾಡಬೇಕು. ತಳ ಸಮುದಾಯಗಳ ಕ್ಷೇತ್ರಗಳಲ್ಲಿ ಮತ್ತಷ್ಟು ಸಂಘಟನೆ ಚುರುಕುಗೊಳಿಸಿ. ಮೀಸಲಾತಿ ಇರುವ ಕ್ಷೇತ್ರಗಳಲ್ಲಿ ಹೆಚ್ಚು ಸಮಾವೇಶಗಳನ್ನು, ರೋಡ್ ಶೋಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಿ. ಪ್ರಬಲ ಸಮುದಾಯಗಳ ಜೊತೆಗೆ ಎಲ್ಲಾ ಹಿಂದುಳಿದ ಸಮುದಾಯಗಳ ಮತಗಳನ್ನು ಕ್ರೂಡೀಕರಿಸಬೇಕು. ಈ ನಿಟ್ಟಿನಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಹೃತ್ಪೂರ್ವಕವಾಗಿ ಕೆಲಸ ಮಾಡಬೇಕು ಎಂದು ಶಾ ಸೂಚನೆ ಕೊಟ್ಟಿದ್ದಾರೆ.

Shwetha M