ಬಿಗಿ ಭದ್ರತೆಯ ನಡುವೆ ಅಮರನಾಥ ಯಾತ್ರೆ ಪ್ರಾರಂಭ – ಬಿಗಿ ಭದ್ರತಾ ವ್ಯವಸ್ಥೆ

ಬಿಗಿ ಭದ್ರತೆಯ ನಡುವೆ ಹಿಂದೂ ಧರ್ಮದ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದಾದ ಅಮರನಾಥ ಯಾತ್ರೆ ಪ್ರಾರಂಭವಾಗಿದೆ. ಬಾಬಾ ಬರ್ಫಾನಿಯ ದರ್ಶನಕ್ಕಾಗಿ ಭಕ್ತರು ಹೋಗುತ್ತಿದ್ದಾರೆ. ಆಗಸ್ಟ್ 9ರವರೆಗೆ ಯಾತ್ರೆಗೆ ಅವಕಾಶವಿದೆ., ಈ ಪವಿತ್ರ ಹಿಂದೂ ತೀರ್ಥಯಾತ್ರೆಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಶಿವನ ಪವಿತ್ರ ಗುಹೆಗೆ ಸಾವಿರಾರು ಭಕ್ತರು ಬರುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ವರ್ಷ ಯಾತ್ರೆ ಕೈಗೊಳ್ಳಲಿದ್ದಾರೆ. ಮೊದಲ ಹಂತದಲ್ಲಿ 5,880 ಯಾತ್ರಾರ್ಥಿಗಳು ಜಮ್ಮುವಿನಿಂದ ಹೊರಟಿದ್ದು, ಈ ಯಾತ್ರೆಯು 38 ದಿನಗಳ ಕಾಲ ನಡೆಯಲಿದೆ.
ಈ ವರ್ಷ 3.5 ಲಕ್ಷ ಭಕ್ತರು ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ. ಯಾತ್ರೆಯು ಪಹಲ್ಗಾಮ್ ಮತ್ತು ಬಾಲ್ಟಾಲ್ ಎಂಬ ಎರಡು ಮಾರ್ಗಗಳ ಮೂಲಕ ಹಾದುಹೋಗುತ್ತದೆ. ಪಹಲ್ಗಾಮ್ ಮಾರ್ಗವು 48 ಕಿ.ಮೀ ಇದ್ದು, ಬಾಲ್ಟಾಲ್ ಮಾರ್ಗವು 14 ಕಿ.ಮೀ ಇದೆ. ಇದರಲ್ಲಿ ಪಹಲ್ಗಾಮ್ ಮಾರ್ಗ ಸುಂದರವಾಗಿದ್ದು, ಬಾಲ್ಟಾಲ್ ಮಾರ್ಗ ಕಡಿದಾಗಿದೆ. ಈ ಎರಡೂ ಮಾರ್ಗಗಳಲ್ಲಿ ಯಾತ್ರಾರ್ಥಿಗಳಿಗೆ ಅನುಕೂಲಕರ ವ್ಯವಸ್ಥೆಗಳನ್ನು ಮಾಡಲಾಗಿದೆ. ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. RFID ಟ್ರ್ಯಾಕಿಂಗ್, ವೈದ್ಯಕೀಯ ನೆರವು, ಉತ್ತಮ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.

ನೋಡಿರಿ

