ಅಯೋಧ್ಯೆಯಲ್ಲಿ ರಾಮ‌ಮಂದಿರ‌ ನಿರ್ಮಾಣ ಬೆನ್ನಲ್ಲೇ ನೂತನ ರಾಮ ಸೇತುಗೆ ಪ್ಲ್ಯಾನ್ – ಭಾರತ – ಶ್ರೀಲಂಕಾ ನಡುವೆ ಶೀಘ್ರ 23 ಕಿ.ಮೀ. ಉದ್ದದ ಸಮುದ್ರ ಸೇತುವೆ!

ಅಯೋಧ್ಯೆಯಲ್ಲಿ ರಾಮ‌ಮಂದಿರ‌ ನಿರ್ಮಾಣ ಬೆನ್ನಲ್ಲೇ ನೂತನ ರಾಮ ಸೇತುಗೆ ಪ್ಲ್ಯಾನ್ – ಭಾರತ – ಶ್ರೀಲಂಕಾ ನಡುವೆ ಶೀಘ್ರ 23 ಕಿ.ಮೀ. ಉದ್ದದ ಸಮುದ್ರ ಸೇತುವೆ!

ಅಯೋಧ್ಯೆಯಲ್ಲಿ ರಾಮ‌ಮಂದಿರ‌ ನಿರ್ಮಾಣ ಮಾಡಿದ ನಂತರ ಈಗ ಮೋದಿ ಸರ್ಕಾರ ರಾಮ ಸೇತು ನಿರ್ಮಾಣ ಮಾಡಲು ಮುಂದಾಗಿದೆ. ಇಷ್ಟು ದಿನ ವಾಯು  ಮಾರ್ಗ ಮತ್ತು ಜಲ‌ಮಾರ್ಗದ ಮೂಲಕ ಮಾತ್ರ ಸಂಪರ್ಕಕ್ಕೆ ಸಾಧ್ಯವಾಗಿದ್ದ ಶ್ರೀಲಂಕಾಕ್ಕೆ ಭೂ ಮಾರ್ಗದ ಮೂಲಕ ಸಂಪರ್ಕಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್!  – ಮದುವೆ ಆಗ್ಬೇಕಂದ್ರೆ ಸಸ್ಯಾಹಾರಿ ಆಗಿರಬೇಕು..!

ಏನಿದು‌ ರಾಮ ಸೇತು ನಿರ್ಮಾಣ?

ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಪ್ರಮುಖ ಉತ್ತೇಜನ ನೀಡುವಲ್ಲಿ, ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಸೇತುವೆಯ ನಿರ್ಮಾಣದ ಕೆಲಸವನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಲಿದೆ. ತಮಿಳುನಾಡಿನ ಧನುಷ್ಕೋಡಿ ಮತ್ತು ಶ್ರೀಲಂಕಾದ ತಲೈಮನ್ನಾರ್ ಅನ್ನು ಸಂಪರ್ಕಿಸುವ ಸಮುದ್ರಕ್ಕೆ ಅಡ್ಡಲಾಗಿ 23 ಕಿಮೀ ಉದ್ದದ ಸೇತುವೆಯನ್ನು ನಿರ್ಮಿಸಲು ಸರ್ಕಾರವು ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

23 ಕಿಮೀ ಉದ್ದದ ನೂತನ ರಾಮ ಸೇತು ಭಾರತದ ಧನುಷ್ಕೋಡಿಯಿಂದ ಶ್ರೀಲಂಕಾದ ತಲೈಮನ್ನಾರ್ ಅನ್ನು ಪಾಕ್‌ ಜಲಸಂಧಿ ಮೂಲಕ ಸಂಪರ್ಕಿಸುವ ರಸ್ತೆ‌ ಹಾಗೂ ರೈಲು ಸಂಪರ್ಕವಾಗಲಿದೆ. ಸೇತುಸಮುದ್ರಂ ಯೋಜನೆ ಪರ್ಯಾಯವಾಗಿರುವ ಈ ನೂತನ ಸಮುದ್ರ ಸೇತುವೆ ಸಾರಿಗೆ ವೆಚ್ಚವನ್ನು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಮತ್ತು ಲಂಕಾ ದ್ವೀಪಕ್ಕೆ ಮುಖ್ಯ ಭೂ ಸಂಪರ್ಕವನ್ನು ಒದಗಿಸಲಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಸಮುದ್ರ ಸೇತುವೆಯನ್ನು ನಿರ್ಮಿಸಲಿದೆ ಎಂದೂ ತಿಳಿದುಬಂದಿದೆ.

ಆರು ತಿಂಗಳ ಹಿಂದೆ ಆರ್ಥಿಕ ಮತ್ತು ತಾಂತ್ರಿಕ ಸಹಕಾರ ಒಪ್ಪಂದವನ್ನು ಮಾಡಲು ತೀರ್ಮಾನಿಸಲಾಗಿದ್ದು, 40,000 ಕೋಟಿ ರುಪಾಯಿ ವೆಚ್ಚದಲ್ಲಿ ರಾಮಸೇತು ಯೋಜನೆ ಕಾರ್ಯಗತವಾಗಲಿದೆ.  ಇದರಲ್ಲಿ ರೈಲು ಮಾರ್ಗಗಳು ಮತ್ತು ಎಕ್ಸ್ ಪ್ರೆಸ್ ವೇ ಒಳಗೊಂಡಿದ್ದು, ರಾಮಸೇತು ಕೇಂದ್ರ ಸ್ಥಾನದಲ್ಲಿ ಇರಲಿದೆ ಎಂದು ಹೇಳಲಾಗಿದೆ. ಶೀಘ್ರದಲ್ಲೇ ಈ ಯೋಜನೆಯ ಕಾರ್ಯಸಾಧ್ಯತೆಯ ಅಧ್ಯಯನವನ್ನು ಪ್ರಾರಂಭಿಸಲಾಗುವುದು ಎಂದೂ ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆಗೂ ಮೊದಲು ತಮಿಳುನಾಡಿನ ಧನುಷ್ಕೋಡಿ ಬಳಿ ರಾಮಸೇತುವಿನ ಆರಂಭದ ಸ್ಥಳವೆಂದು ಪರಿಗಣಿಸಲಾದ ಅರಿಚಲ್ ಮುನೈಗೆ ಭೇಟಿ ನೀಡಿದ್ದರು.

ಸಂಗಂ‌ ಕಾಲದಲ್ಲಿ ಹಾಗೂ ಅಸಂಖ್ಯಾತ ತಮಿಳು ಪಠ್ಯಗಳಲ್ಲಿ ಮತ್ತು ತಮಿಳು ರಾಜರ ಅನೇಕ ಶಾಸನಗಳು‌ ಹಾಗೂ ತಾಮ್ರ ಫಲಕಗಳಲ್ಲಿ ‘ರಾಮ ಸೇತು’ ವನ್ನು ಉಲ್ಲೇಖ ಮಾಡಲಾಗಿದೆ. ರಾಮನಾಥಪುರಂ ಸೇತುಪತಿಗಳು ಈ ಸ್ಥಳದ ಬಗ್ಗೆ ಬಹಳ ಗೌರವ ಹೊಂದಿದ್ದು, ಅವರ ಎಲ್ಲಾ ಅನುದಾನಗಳನ್ನು ಈ ಪವಿತ್ರ ಸ್ಥಳದಲ್ಲಿ ‘ನೋಂದಣಿ’ ಮಾಡಲಾಗಿದೆ. ಅಯೋಧ್ಯೆ ದೇಗುಲ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ತಮ್ಮ ಆಧ್ಯಾತ್ಮಿಕ ಪ್ರವಾಸವನ್ನು ಇಲ್ಲಿ ಅಂತ್ಯಗೊಳಿಸಿದ್ದರು.

Shwetha M