ನಟ ತಬಲಾ ನಾಣಿಯವರಿಗೆ ಹೆಂಡ್ತಿ ಬೇಕಂತೆ..! – ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬಂದು ಕೇಳುತ್ತಾರಂತೆ..!

ನಟ ತಬಲಾ ನಾಣಿಯವರಿಗೆ ಹೆಂಡ್ತಿ ಬೇಕಂತೆ..! – ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬಂದು ಕೇಳುತ್ತಾರಂತೆ..!

ಸ್ಯಾಂಡಲ್‌ವುಡ್‌ನ ಹಾಸ್ಯ ನಟ ತಬಲಾ ನಾಣಿಯವರಿಗೆ ಹೆಂಡ್ತಿ ಬೇಕಂತೆ. ನಟ ನಾಣಿ ಹೆಂಡ್ತಿಯನ್ನು ಹುಡುಕುತ್ತಿದ್ದಾರೆ. ಹೀಗೊಂದು ಹಾಸ್ಯಭರಿತ ಚಿತ್ರಕ್ಕೆ ಕೆ.ಶಂಕರ್ ಌಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ತಬಲಾ ನಾಣಿಯವರ ಪಾತ್ರ ಫುಲ್ ಡಿಫರೆಂಟ್ ಹಾಗೂ ಸವಾಲಿನ ಪಾತ್ರವಾಗಿದೆ.

ಇದನ್ನೂ ಓದಿ: ಹಿರೋಶಿಮಾ, ನಾಗಸಾಕಿ ನಗರಗಳನ್ನ ಸುಟ್ಟ ಅಣುಬಾಂಬ್ ಜನಕನ ಚರಿತ್ರೆ – ‘ಓಪನ್ ಹೈಮರ್’ ಸಿನಿಮಾದಲ್ಲಿ ಭಗವದ್ಗೀತೆ ವಿವಾದ

ಲೈರಾ ಎಂಟರ್‌ಟೈನ್ಮೆಂಟ್ ಅಂಡ್ ಮೀಡಿಯಾ ಮೂಲಕ ಭರತ್ ಗೌಡ ಮತ್ತು ಸಿ.ರಮೇಶ್ ಜೊತೆಯಾಗಿ ನಿರ್ಮಿಸುತ್ತಿರುವ, ಕೆ.ಶಂಕರ್ ನಿರ್ದೇಶನವಿರುವ ಆ ಚಿತ್ರದ ಹೆಸರು ‘ನನಗೂ ಹೆಂಡ್ತಿ ಬೇಕು’.  ದೃಷ್ಟಿ ವಿಕಲಚೇತನನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ  ಪ್ರಸಂಗಗಗಳನ್ನು  ಹಾಸ್ಯಮಯವಾಗಿ ಈ ಸಿನಿಮಾದಲ್ಲಿ ಹೇಳಲಾಗಿದೆ. ಕೆ. ಶಂಕರ್ ಅವರೇ ಕಥೆ, ಚಿತ್ರಕಥೆ ಬರೆದು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಮದುವೆಯಾಗಲು ಹೊರಟು  ಒಂದು ಹೆಣ್ಣುಕೂಡ  ಸಿಗದೇ ಪರಿತಪಿಸುವ ಕುರುಡನ ಪಾತ್ರದಲ್ಲಿ ಹಾಸ್ಯನಟ ತಬಲ ನಾಣಿ ಅವರು ಕಾಣಿಸಿಕೊಂಡಿದ್ದಾರೆ. ಬ್ಯಾಂಕ್ ಜನಾರ್ಧನ್ ಮತ್ತು ಬಾಲು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು ಇವರ ಪಾತ್ರದಲ್ಲೂ ಹಾಸ್ಯವಿದೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಒಬ್ಬ ಮೂಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಎರಡು  ಫೈಟ್ ಮತ್ತು ಎರಡು ಹಾಡುಗಳಿದ್ದು,  ಕೆ.ಎಮ್. ಇಂದ್ರ ಅವರ ಸಂಗೀತ ಸಂಯೋಜನೆಯಿದೆ. ಇಡೀ ಚಿತ್ರದ ಚಿತ್ರೀಕರಣ  ಚಿತ್ರದುರ್ಗದಲ್ಲಿ ನಡೆಯುತ್ತಿದೆ.

suddiyaana