ಕೋಟೆನಾಡಿನಲ್ಲಿ ‘ಕಿಚ್ಚ’ನ ಕಾರುಬಾರು – ಬಿಜೆಪಿ ಪರ ನಟ ಸುದೀಪ್ ರೋಡ್ ಶೋ

ಕೋಟೆನಾಡಿನಲ್ಲಿ ‘ಕಿಚ್ಚ’ನ ಕಾರುಬಾರು – ಬಿಜೆಪಿ ಪರ ನಟ ಸುದೀಪ್ ರೋಡ್ ಶೋ

ಮಾಮ ಬಸವರಾಜ ಬೊಮ್ಮಾಯಿಗೆ ಕೊಟ್ಟ ಮಾತಿನಂತೆ ನಟ ಕಿಚ್ಚ ಸುದೀಪ್ ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ. ಇಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ, ಪ್ರಚಾರ ಆರಂಭಿಸಿದ ಕಿಚ್ಚ, ಮಿರ ಮಿರ ಮಿಂಚುವ ಬ್ಲ್ಯಾಕ್ ಕಲರ್ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು.  ನೀಲಿ ಜೀನ್ಸ್ , ಬಿಳಿ ಟೀ ಶರ್ಟ್ ಮೇಲೊಂದು ಅಂಗಿ ಧರಿಸಿ ಬಂದಿದ್ದ ಕಿಚ್ಚ ಸುದೀಪ್, ಹೆಲಿಕಾಪ್ಟರ್ ಲ್ಯಾಂಡ್ ಆದ ಮೇಲೆ ಫಿಲ್ಮೀ ಸ್ಟೈಲ್‌ನಲ್ಲಿಯೇ ಎಂಟ್ರಿಕೊಟ್ರು. ನಂತರ ಮೊಳಕಾಲ್ಮೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಅವರ ಪರವಾಗಿ ಪ್ರಚಾರ ಕೈಗೊಂಡರು.

ಇದನ್ನೂ ಓದಿ: ಶೆಟ್ಟರ್ ಸೋಲಿಸುವುದಾಗಿ ಬಿಎಸ್‌ವೈ ಸವಾಲು -ಅಂದು ಕೆಜೆಪಿ ಕಟ್ಟಿದವರು ಇಂದು ನನ್ನ ವಿರುದ್ಧ ತಿರುಗಿಬಿದ್ದಿದ್ಯಾಕೆ ಎಂದ ಶೆಟ್ಟರ್..!

ಸುದೀಪ್ ಅವರಿಗೆ ಅಭಿಮಾನಿಗಳಿಂದ ದೊಡ್ಡಮಟ್ಟದ ಸ್ವಾಗತ ಸಿಕ್ಕಿತು. ಸುದೀಪ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ರೋಡ್ ಶೋನಲ್ಲಿ ಭಾಗಿಯಾದರು. ಈ ವೇಳೆ ಕಿಚ್ಚ.. ಕಿಚ್ಚ… ಘೋಷಣೆಗಳು ಮುಗಿಲು ಮುಟ್ಟಿದವು. ಅಭಿಮಾನಿಗಳಿಗೆ ಟೀಶರ್ಟ್ ಮೇಲೆ ಸುದೀಪ್ ಸಹಿ ಹಾಕಿಕೊಟ್ಟರು. ಪ್ರಚಾರಕ್ಕೆ ಹೋಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸುದೀಪ್, ‘ಚುನಾವಣೆ ಪ್ರಚಾರ ಕಾರ್ಯ ಮುಗಿಯುವವರೆಗೂ ಬಿಜೆಪಿ ಜೊತೆಯಲ್ಲಿ ಇರುತ್ತೇನೆ, ಮಾತು ಕೊಟ್ಟಿದ್ದೇನೆ ಎಂದು ಹೇಳಿದರು. ಹೋದ ಕಡೆಯಲ್ಲೆಲ್ಲಾ ಜನ ತುಂಬಾ ಪ್ರೀತಿ ತೋರಿಸುತ್ತಿದ್ದಾರೆ, ಪ್ರಚಾರಕ್ಕೆ ಹೋಗುವುದರಲ್ಲಿ ನನ್ನ ಸ್ವಾರ್ಥ ಕೂಡ ಇದೆ, ಈ ನೆಪದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಬಹುದು’ ಎಂದಿದ್ದಾರೆ.

suddiyaana