ಸತತ ಸೋಲಿನಿಂದ ಕಂಗೆಟ್ಟ ಆಮೀರ್ ಖಾನ್ – ನೇಪಾಳದಲ್ಲಿ ಧ್ಯಾನ ಮಾಡುತ್ತಿರುವ ಬಾಲಿವುಡ್ ನಟ

ಸತತ ಸೋಲಿನಿಂದ ಕಂಗೆಟ್ಟ ಆಮೀರ್ ಖಾನ್ – ನೇಪಾಳದಲ್ಲಿ ಧ್ಯಾನ ಮಾಡುತ್ತಿರುವ ಬಾಲಿವುಡ್ ನಟ

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಆಮೀರ್ ಖಾನ್, ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಹೀನಾಯವಾಗಿ ಸೋತಿತ್ತು. ಆ ಬಳಿಕ ಆಮಿರ್ ಖಾನ್ ಅವರು ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಸದ್ಯಕ್ಕೆ ಅವರು ದೀರ್ಘ ಬ್ರೇಕ್ ಪಡೆದುಕೊಂಡಿದ್ದಾರೆ. ನೇಪಾಳಕ್ಕೆ ತೆರಳಿದ ಆಮೀರ್ ಖಾನ್ ಧ್ಯಾನ ಶಿಬಿರದಲ್ಲಿದ್ದಾರೆ.

ಇದನ್ನೂ ಓದಿ:  ಕ್ರಿಕೆಟಿಗನಿಂದ ಬಾಲಿವುಡ್ ಇನ್ನಿಂಗ್ಸ್ – ಬಣ್ಣದ ಲೋಕಕ್ಕೆ ಶುಭ್‌ಮನ್‌ ಗಿಲ್ ಎಂಟ್ರಿ..!

ಮೇ 7ರ ಮುಂಜಾನೆ ಆಮೀರ್ ಖಾನ್ ನೇಪಾಳಕ್ಕೆ ತೆರಳಿದ್ದಾರೆ. ಅಲ್ಲಿ 10 ದಿನಗಳ ಧ್ಯಾನ ಶಿಬಿರದಲ್ಲಿ ತೊಡಗಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಆಮಿರ್ ಖಾನ್ ರೇಂಜೇ ಬೇರೆ. ಆಮೀರ್ ಖಾನ್ ಸಿನಿಮಾ ಅಂದರೆ ಸಮ್‌ಥಿಂಗ್ ಸ್ಪೆಷಲ್ ಇರುತ್ತೆ ಅನ್ನೋದು ಅಭಿಮಾನಿಗಳ ನಂಬಿಕೆ. ಜೊತೆಗೆ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟನಾಗಿ ಮೆರೆದವರು ಆಮೀರ್‌ಖಾನ್. ಒಂದು ಕಾಲದಲ್ಲಿ ಅವರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬ್ಯುಸಿನೆಸ್ ಮಾಡುತ್ತಿದ್ದವು. ಹಾಗಿದ್ದರೂ ಕೂಡ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಸಿಕ್ಕಿಲ್ಲ. ಆಮಿರ್ ಖಾನ್ ನಟಿಸಿದ್ದ ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರವನ್ನು ಜನರು ಇಷ್ಟಪಡಲಿಲ್ಲ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಕೂಡ ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಆ ಬಳಿಕ ಆಮಿರ್ ಖಾನ್ ಅವರು ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಸದ್ಯಕ್ಕೆ ನೇಪಾಳಕ್ಕೆ ತೆರಳಿರುವ ಆಮಿರ್ ಖಾನ್ ಅವರು ಧ್ಯಾನ ಶಿಬಿರದಲ್ಲಿ ಭಾಗಿಯಾಗಿದ್ದಾರೆ.

suddiyaana