ಪ್ರೀತ್ಸೆ ಎಂದು ಪೀಡಿಸಿದ ಪಾಗಲ್ ಪ್ರೇಮಿ ಯುವತಿಯನ್ನು ಕಿಡ್ನಾಪ್ ಮಾಡಿದ – ರೇಪ್ ಮಾಡಿ ಕೊಂದೇ ಬಿಟ್ಟ ಕಿರಾತಕ

ಪ್ರೀತ್ಸೆ ಎಂದು ಪೀಡಿಸಿದ ಪಾಗಲ್ ಪ್ರೇಮಿ ಯುವತಿಯನ್ನು ಕಿಡ್ನಾಪ್ ಮಾಡಿದ – ರೇಪ್ ಮಾಡಿ ಕೊಂದೇ ಬಿಟ್ಟ ಕಿರಾತಕ

ಆಕೆಗೆ ಇನ್ನೂ 19 ವರ್ಷ. ಆದರೆ, ಆಕೆಗೆ ತನ್ನದೇ ಗ್ರಾಮದ ಯುವಕನಿಂದ ನಿತ್ಯ ಕಿರಿಕಿರಿಯಾಗುತ್ತಿತ್ತು. ಪ್ರೀತ್ಸೆ ಪ್ರೀತ್ಸೆ ಎಂದು ಪ್ರಾಣ ತಿನ್ನುತ್ತಿದ್ದ. ಇಷ್ಟೇ ಆಗಿದ್ದರೆ ಹುಡುಗಿ ಉಳಿಯುತ್ತಿದ್ದಳು. ಆದರೆ, ಆ ಪಾಗಲ್ ಪ್ರೇಮಿ ಪ್ರೀತ್ಸೆ ಪ್ರೀತ್ಸೆ ಎಂದು ಪ್ರಾಣ ತಿಂದಿದ್ದು ಮಾತ್ರ ಅಲ್ಲ. ಆ ಹುಡುಗಿ ಮೇಲೆ ಅತ್ಯಚಾರ ನಡೆಸಿ ಪ್ರಾಣವನ್ನೇ ತೆಗೆದಿದ್ದಾನೆ.

ಇದನ್ನೂ ಓದಿ: ಸಾಲ ಮಾಡಿ ಪತ್ನಿಯನ್ನ ನರ್ಸಿಂಗ್ ಓದಿಸಿದ್ದ ಪತಿ – ಕೋರ್ಸ್ ಮುಗಿಯುತ್ತಿದ್ದಂತೆ ಪ್ರಿಯಕರನ ಜೊತೆ ಎಸ್ಕೇಪ್ ಆದಳು ಕಿರಾತಕಿ

ಚಿತ್ರದುರ್ಗ ತಾಲೂಕಿನ ಹುಲ್ಲೂರು ನಿವಾಸಿ 19 ವರ್ಷದ ಅರ್ಪಿತಾ ದುರಂತ ಅಂತ್ಯ ಕಂಡ ಅಮಾಯಕಿ. ಈಕೆಯನ್ನು ಹುಲ್ಲೂರು ಗ್ರಾಮದ ನಿವಾಸಿಯಾ ಅಜಯ್ ಪ್ರೀತಿಗಾಗಿ ಪೀಡಿಸುತ್ತಿದ್ದ. ಆದರೆ, ಅಜಯ್ ಜೊತೆ ಇದೆಲ್ಲಾ ಬೇಡ. ನಂಗೆ ಪ್ರೀತಿ ಗೀತಿ ಇಷ್ಟವಿಲ್ಲ ಎಂದು ಅರ್ಪಿತಾ ಸಾಕಷ್ಟು ಬಾರಿ ಹೇಳಿದ್ದಳು. ಅಜಯ್ ಪ್ರೀತಿಯನ್ನು ನಿರಾಕರಿಸಿದ್ದಳು. ಆದರೆ, ಅಜಯ್ ಗೆ ಅರ್ಪಿತಾ ಮೇಲೆಯೇ ಕಣ್ಣು. ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಸಿಟ್ಟು. ಹೀಗಾಗಿ ಅಜಯ್ ಅಕ್ಟೋಬರ್ 3ರಂದು ಆಟೋದಲ್ಲಿ ಯುವತಿಯನ್ನು ಅಪಹರಿಸಿದ್ದಾನೆ. ಗ್ರಾಮದ ಹೊರವಲಯಕ್ಕೆ ಕರೆದುಕೊಂಡ ಹೋದ ಪಾಪಿ ಅಜಯ್ ಅತ್ಯಾಚಾರವೆಸಗಿದ್ದಾನೆ. ತಲೆಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ನಂತರ ದುಷ್ಟ ಅಜಯ್ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಾನೆ. ತಲೆಗೆ ಪೆಟ್ಟು ಬಿದ್ದಿದ್ದರಿಂದ ಬ್ರೈನ್ ಡೆಡ್ ಆಗಿ ಅರ್ಪಿತಾ ಮೃತಪಟ್ಟಿದ್ದಾಳೆ. ಚಿಕಿತ್ಸೆ ಫಲಿಸದೆ ಶುಕ್ರವಾರ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಕೊನೆಯುಸಿರೆಳಿದಿದ್ದಾಳೆ. ಯುವತಿ ಪೋಷಕರು ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಅಜಯ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿ ಅಜಯ್ ಸಿಗಬಹುದು. ಪೊಲೀಸರು ಅರೆಸ್ಟ್ ಕೂಡಾ ಮಾಡಬಹುದು. ಆದರೆ, ತಪ್ಪೇ ಇಲ್ಲದೇ, ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬಲಿಯಾದ ಅರ್ಪಿತಾಳ ಹೆತ್ತವರಿಗೆ ಮಗಳು ಸಿಗುತ್ತಾಳಾ.. ಇನ್ನೂ ಬಾಳಿ ಬದುಕಬೇಕಾದ ಮಗಳು ಕಿರಾತಕನಿಗೆ ಬಲಿಯಾಗಿ ಹೋಗಿದ್ದು ಮಾತ್ರ ದುರಂತವೇ ಸರಿ.

Sulekha