ಪತಿಯ ಕುಡಿತದ ಚಟಕ್ಕೆ ಬೇಸತ್ತು ಸಾಯಲು ಬಂದ ಹೆಂಡ್ತಿ – ಸಮಾಧಾನಿಸಲು ಬಂದ ಗಂಡನೂ ವಿಧಿಯಾಟಕ್ಕೆ ಬಲಿ!

ಪತಿಯ ಕುಡಿತದ ಚಟಕ್ಕೆ ಬೇಸತ್ತು ಸಾಯಲು ಬಂದ ಹೆಂಡ್ತಿ – ಸಮಾಧಾನಿಸಲು ಬಂದ ಗಂಡನೂ ವಿಧಿಯಾಟಕ್ಕೆ ಬಲಿ!

ಆತ ಕುಡಿತದ ಚಟ ಹೊಂದಿದ್ದ. ಪ್ರತಿದಿನ ಕಂಠಪೂರ್ತಿ ಕುಡಿದು ಹೆಂಡತಿಯೊಂದಿಗೆ ಜಗಳವಡುತ್ತಿದ್ದ. ಪತಿಯ ಮದ್ಯದ ಚಟದಿಂದಾಗಿ ಬೇಸತ್ತ ಪತ್ನಿ ತನ್ನ ಜೀವವನ್ನು ಕಳೆದುಕೊಳ್ಳಲು ರೈಲ್ವೆ ಹಳಿಯ ಬಳಿ ಹೋಗಿದ್ದಾಳೆ. ಈ ವೇಳೆ ಪತಿ ಆಕೆಯನ್ನು ಸಮಾಧಾನಪಡಿಸಲು ಹೋಗಿದ್ದಾನೆ. ರೈಲು ಹಳಿಯಲ್ಲೇ ಆತ ಹೆಂಡತಿಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಕಲವೇ ಹೊತ್ತಲ್ಲಿ ದೊಡ್ಡ ದುರಂತವೇ ನಡೆದು ಹೋಗಿದೆ. ವಿಧಿಯ ಆಟಕ್ಕೆ ದಂಪತಿ ಬಲಿಯಾಗಿದ್ದಾರೆ.

ಏನಿದು ಘಟನೆ?

ಈ ಘಟನೆ ವಾರಾಣಸಿಯ  ಸಾರನಾಥ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಕೋಶಿ ರೈಲ್ವೆ ಕ್ರಾಸಿಂಗ್‌ನಲ್ಲಿ ನಡೆದಿದೆ. ಗೋವಿಂದ್ ಸೋಂಕರ್ (30) ಅವರು ಮದ್ಯದ ಚಟ ಹೊಂದಿದ್ದರು. ಪತ್ನಿ ಖುಷ್ಬು ಸೋಂಕರ್ ಗೆ ಪತಿ ಕುಡಿತದ ಚಟ ಹೊಂದಿರುವುದು ಇಷ್ಟ ಇರಲಿಲ್ಲ. ಈ ವಿಚಾರವಾಗಿ ಇವರಿಬ್ಬರ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು. ಗಂಡನ ಕುಡಿತದ ಚಟಕ್ಕೆ ಬೇಸತ್ತ ಹಾಗೂ ಜಗಳದ ಬಳಿಕ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಅಂತಾ ರೈಲ್ವೆ ಹಳಿ ಬಳಿ ಹೋಗಿದ್ದಾಳೆ. ಈ ವೇಳೆ ಆಕೆಯನ್ನು ಸಮಾಧಾನಪಡಿಸಲು ಗಂಡ ಅಲ್ಲಿಗೆ ಹೋಗಿದ್ದಾಳೆ. ಆಕೆಯನ್ನು ಮನವೊಲಿಸುವ ಪ್ರಯತ್ನವಾಗಿ ಆತ ಹೆಂಡತಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೆ ಆತನ ಪ್ರಯತ್ನ ವಿಫಲವಾಗಿದೆ.

ಇದನ್ನೂ ಓದಿ: ʼಆಪರೇಷನ್ ಅಜಯ್’2ನೇ ಹಂತದಲ್ಲಿ ಇಸ್ರೇಲ್​​ನಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ 235 ಭಾರತೀಯರು

ದಂಪತಿ ರೈಲಿನಡಿಗೆ ಸಿಲುಕಿ ಸಾವು!

ಗೋವಿಂದ್ ತನ್ನ ಪತ್ನಿಯ ಮನವೊಲಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದಾನೆ. ಆದರೆ ಖುಷ್ಬು ಆತನ ಮಾತನ್ನು ಕೇಳು ತಯಾರಿರಲಿಲ್ಲ. ಆತ ಎಷ್ಟೇ ಸಮಾಧಾನ ಪಡಿಸಲು ಪ್ರಯತ್ನಿಸಿದ್ರೂ ಆಕೆ ತನ್ನ ನಿರ್ಧಾರ ಬದಲಿಸಿಲ್ಲ. ಅದೇ ವೇಳೆ ರೈಲು ಬಂದಿದ್ದು, ಇಬ್ಬರ ಪ್ರಾಣವನ್ನೂ ತೆಗೆದುಕೊಂಡು ಹೋಗಿದೆ.

ಮೃತಪಟ್ಟ ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಮಗನಿಗೆ 6 ವರ್ಷ, ಇಬ್ಬರು ಹೆಣ್ಣುಮಕ್ಕಳಿಗೆ ಕ್ರಮವಾಗಿ ಮೂರು ಮತ್ತು ನಾಲ್ಕು ವರ್ಷ ಆಗಿದೆ. ಗೋವಿಂದ್ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ದಂಪತಿ ಸಾವಿನಿಂದಾಗಿ ಮಕ್ಕಳು ಅನಾಥರಾಗಿದ್ದಾರೆ. ದಂಪತಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Shwetha M