ಮಕ್ಕಳಾಗಿಲ್ಲ ಎಂದು ದೇವಸ್ಥಾನಕ್ಕೆ ಹೋದ ಮಹಿಳೆಗೆ ಪೂಜಾರಿ ಮೇಲೆ ಲವ್ – ಅರ್ಚಕನ ಜೊತೆ ಓಡಿಹೋದವಳು ಅರೆಸ್ಟ್..!

ಮಕ್ಕಳಾಗಿಲ್ಲ ಎಂದು ದೇವಸ್ಥಾನಕ್ಕೆ ಹೋದ ಮಹಿಳೆಗೆ ಪೂಜಾರಿ ಮೇಲೆ ಲವ್ – ಅರ್ಚಕನ ಜೊತೆ ಓಡಿಹೋದವಳು ಅರೆಸ್ಟ್..!

ಆಕೆ ಮಕ್ಕಳಾಗಿಲ್ಲ ಎಂದು ಪದೇ ಪದೇ ದೇವಸ್ಥಾನಕ್ಕೆ ಬಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಳು. ಆಕೆಗೆ ಬರೀ 24 ವರ್ಷ ಅಷ್ಟೇ.. ಆದರೂ ಮಕ್ಕಳಾಗಿಲ್ಲ ಅನ್ನೋ ಚಿಂತೆ ಅವಳನ್ನು ಕಾಡುತ್ತಿತ್ತು. ಹೀಗಾಗಿ ದೇವಾಲಯಕ್ಕೆ ಹೋಗ್ತಾ ಇರುವುದನ್ನು ಯಾರೂ ಪ್ರಶ್ನೆ ಮಾಡಿರಲಿಲ್ಲ. ಆದರೆ, ಒಂದು ದಿನ ದೇವಸ್ಥಾನಕ್ಕೆ ಹೋದವಳು ವಾಪಸ್ ಮನೆಗೆ ಬರಲೇ ಇಲ್ಲ. ಗಾಬರಿಯಾದ ಮನೆಯವರು ದೇವಸ್ಥಾನದ ಬಳಿ ಬಂದರೆ ಅಲ್ಲಿ ಆಕೆಯೂ ಇರಲಿಲ್ಲ. ಪೂಜಾರಿಯೂ ಇರಲಿಲ್ಲ. ದೇವಸ್ಥಾನದ ಕೆರೆ ಹತ್ತಿರ ನೋಡಿದರೆ ಇಬ್ಬರ ಚಪ್ಪಲಿಗಳು ಬಿದ್ದುಕೊಂಡಿದ್ದವು.

ಇದನ್ನೂ ಓದಿ: ರೀಲ್ಸ್ ಮಾಡುತ್ತಿದ್ದ ಪತ್ನಿ ಮೇಲೆ ಗಂಡನಿಗೆ ಅನುಮಾನ – ಪತ್ನಿಯನ್ನು ಕೊಂದು ಕಾವೇರಿ ನದಿಗೆ ಎಸೆದ ಅಳಿಯನಿಗೆ ಮಾವನ ಸಾಥ್..!

ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿ ಗ್ರಾಮದ ನಿವಾಸಿಗಳಾದ, ದೇವಸ್ಥಾನದ ಪೂಜಾರಿ 54 ವರ್ಷದ ಮುನಿರಾಜು ಜೊತೆ 24 ವರ್ಷದ ವಿವಾಹಿತ ಮಹಿಳೆ ಗಂಗಮ್ಮ ಕಾಣೆಯಾಗಿದ್ದಳು. ಇವರಿಗಾಗಿ ಹುಡುಕಾಟ ನಡೆಸಿದಾಗ ಬನ್ನಿಕುಪ್ಪೆ ಗ್ರಾಮದ ಬಳಿ ಅಮಾನಿಗೋಪಾಲಕೃಷ್ಣ ಕೆರೆ ದಡದಲ್ಲಿ ಬಟ್ಟೆ, ಚಪ್ಪಲಿ, ಮೊಬೈಲ್ ಪತ್ತೆಯಾಗಿತ್ತು. ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೇ ಅಂದಾಜಿಸಲಾಗಿತ್ತು. ಇವರಿಗಾಗಿ ಕೆರೆಯಲ್ಲೂ ಹುಡುಕಾಟ ನಡೆಸಲಾಗಿತ್ತು. ಇದೀಗ ಒಂದು ತಿಂಗಳ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಲಲಿತಾ-ಮುನಿರಾಜು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಲ್ಲರೂ ಅಂದುಕೊಂಡಿರುವಾಗ ಕಿಲಾಡಿ ಜೋಡಿಗಳು ಸಿಕ್ಕಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಲಲಿತಾ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಇದೀಗ ಆತ್ಮಹತ್ಯೆ ಕಥೆ ನಾಟಕ ಮಾಡಿದ್ದ ಕಿಲಾಡಿ ಜೋಡಿ ಅರೆಸ್ಟ್ ಆಗಿದೆ.

suddiyaana