ಬಿಗ್‌ಬಾಸ್ ಮನೆಯಲ್ಲಿ ಹೊಡೆದಾಟ – ಕೆನ್ನೆಗೆ ಹೊಡೆದು ಎಲಿಮಿನೇಟ್ ಆದ ಸ್ಪರ್ಧಿ

ಬಿಗ್‌ಬಾಸ್ ಮನೆಯಲ್ಲಿ ಹೊಡೆದಾಟ – ಕೆನ್ನೆಗೆ ಹೊಡೆದು ಎಲಿಮಿನೇಟ್ ಆದ ಸ್ಪರ್ಧಿ

‘ಬಿಗ್ ಬಾಸ್’ ಮನೆಯಲ್ಲಿ ಹಲ್ಲೆ ಮಾಡುವಂತಿಲ್ಲ. ನಿಯಮಕ್ಕೆ ವಿರುದ್ಧ ನಡೆದುಕೊಂಡವರಿಗೆ ಬಿಗ್‌ಬಾಸ್ ಮನೆಯಲ್ಲಿ ಸ್ಥಾನವೂ ಇಲ್ಲ. ಹಾಗೆ ಮಾಡಿದರೆ ತಕ್ಷಣಕ್ಕೆ ಅವರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಇದೀಗ ‘ಬಿಗ್ ಬಾಸ್ ಹಿಂದಿ ಸೀಸನ್ 17’ನಲ್ಲಿ ಈ ರೀತಿಯ ಘಟನೆ ನಡೆದಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ:ಹೆತ್ತವರ ಬಳಿ ಹೋದರೆ ಹೇಸಿಗೆ ಆಗ್ತೀಯಾ ಎಂದು ಗುರೂಜಿ ಹೇಳಿದ ಮಾತು ಕಾಡಿತಾ ? – ಡ್ರೋನ್ ಆಸ್ಪತ್ರೆಗೆ ಸೇರಲು ಅಸಲಿ ಕಾರಣ ಇದೇನಾ?

ಹಿಂದಿ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಹೊಡೆದಾಟಕ್ಕೂ ಮುಂದಾಗಿದ್ದು ನಿಜಕ್ಕೂ ವಿಪರ್ಯಾಸ. ಇದೀಗ ಬಿಗ್‌ಬಾಸ್ ಮನೆಯಲ್ಲಿ ಅಭಿಷೇಕ್ ಅವರು ಸಿಟ್ಟಿನಿಂದ ಸಮರ್ಥ್‌ಗೆ ಹೊಡೆದಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಮ್ಯಾನ್ ಹ್ಯಾಂಡ್ಲಿಂಗ್ ಮಾಡುವಂತೆ ಇಲ್ಲ. ಹಾಗೆ ಮಾಡಿದರೆ ತಕ್ಷಣಕ್ಕೆ ಅವರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಅಭಿಷೇಕ್ ಕುಮಾರ್ ಹಾಗೂ ಸಮರ್ಥ್ ಜ್ಯುರೆಲ್ ಮಧ್ಯೆ ಫೈಟ್ ನಡೆದಿದೆ. ಅಭಿಷೇಕ್ ಅವರು ಸಮರ್ಥ್‌ಗೆ ಹೊಡೆದಿದ್ದಾರೆ. ಇದರಿಂದ ಅಭಿಷೇಕ್  ಮನೆಯಿಂದ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಅಭಿಷೇಕ್ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ನಿರ್ಧಾರವನ್ನು ಮನೆಯ ಕ್ಯಾಪ್ಟನ್ ಅಂಕಿತಾ ತೆಗೆದುಕೊಳ್ಳುವಂತೆ ಬಿಗ್ ಬಾಸ್ ಆದೇಶ ನೀಡಿದರು ಎನ್ನಲಾಗಿದೆ. ಅಂಕಿತಾ ಅವರು ಅಭಿಷೇಕ್ ನ ಎಲಿಮಿನೇಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಈ ಮೂಲಕ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.

Sulekha