ಅಯ್ಯಯೋ.. ಬೈಕ್‌ ನಿಲ್ಲಿಸಿದ್ದಕ್ಕೆ ಹರಿಯಿತು ರಕ್ತ! – 1 ಬೈಕ್‌.. 6 ಮಂದಿ ತಲೆಗೆ ಪೆಟ್ಟು!

ಅಯ್ಯಯೋ.. ಬೈಕ್‌ ನಿಲ್ಲಿಸಿದ್ದಕ್ಕೆ ಹರಿಯಿತು ರಕ್ತ! – 1 ಬೈಕ್‌.. 6 ಮಂದಿ ತಲೆಗೆ ಪೆಟ್ಟು!

ಪಾರ್ಕಿಂಗ್‌ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಈ ಜಗಳ ಪೊಲೀಸ್‌ ಠಾಣೆವರೆಗೂ ಹೋಗಿದ್ದೂ ಇದೆ. ಇದೀಗ ಇಲ್ಲೊಂದು ಕಡೆ, ಬೈಕ್ ನಿಲ್ಲಿಸಿದ್ದಕ್ಕೆ ಆರು ಜನರ ತಲೆಗೆ ಗಂಭೀರ ಪೆಟ್ಟಾಗಿದೆ.

ಇದನ್ನೂ ಓದಿ: ದಾಸನ ಹುಟ್ಟುಹಬ್ಬದಂದೇ ಪವಿತ್ರಾಗೆ ಶಾಕ್!‌ – ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ

ರಸ್ತೆ ಬದಿಯಲ್ಲಿ ಬೈಕ್‌ ನಿಲ್ಲಿಸುವ ವಿಚಾರಕ್ಕೆ ಜಗಳ ನಡೆದಿದ್ದು, ಇದೇ ವಿಚಾರ ಇಟ್ಟುಕೊಂಡು ಒಂದೇ ಕುಟುಂಬದ ಆರು ಮಂದಿಯ ಹಲ್ಲೆ ಮಾಡಿರುವ ಘಟನೆ ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಅಮ್ಮನಘಟ್ಟ ಗ್ರಾಮದಲ್ಲಿ ನಡೆದಿದೆ.

ಅಮ್ಮನಘಟ್ಟ ಗ್ರಾಮದ ಮಾರುತಿನಗರ ಬಡಾವಣೆಯ ನಿವಾಸಿಗಳಾದ ಹನುಮಂತಯ್ಯ, ದಿಲೀಪ್, ಜಯಮ್ಮ, ವೆಂಕಟೇಶ್, ಜಯಮ್ಮ ಮತ್ತು ಪದ್ಮ ಈ ಆರು ಮಂದಿ ತೀವ್ರ ರಕ್ತ ಸ್ರಾವದಿಂದ ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ದಿಲೀಪ್ ಅವರ ಕೈ ಮೂಳೆ ಮುರಿತವಾಗಿದೆ. ಉಳಿದ ಐದು ಮಂದಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ?

ಸಂಜೆ ವೇಳೆ ದಿಲೀಪ್ ತನ್ನ ಬೈಕ್ ನಲ್ಲಿ ಗುಬ್ಬಿಯಿಂದ ಬಂದು ಮನೆ ಮುಂದೆ ನಿಲ್ಲಿಸಿದ್ದ ವಿಚಾರಕ್ಕೆ ಏಕಾಏಕಿ ಅಶ್ಲೀಲ ಪದಗಳಿಂದ ಬೈಗುಳ ಆರಂಭಿಸಿ ಸ್ಥಳದಲ್ಲಿದ್ದ ದೊಣ್ಣೆ, ಗಳಗಳು, ಗುದ್ದಲಿ ಹಿಡಿದು ಅಟ್ಟ್ಯಾಕ್ ಮಾಡಿದ್ದರು. ಬೈಕ್ ತೆಗೆಯುವಷ್ಟರಲ್ಲಿ ಜಗಳ ತೆಗೆದು ಮಾರಣಾಂತಿಕವಾಗಿ ಹೊಡೆದಿದ್ದಾರೆ. ಹಳೇ ವೈಷಮ್ಯ ಹಿನ್ನಲೆ ಪೂರ್ವನಿಯೋಜಿತವಾಗಿ ಸಜ್ಜಾಗಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಗಾಯಾಳು ದಿಲೀಪ್ ನೇರ ಆರೋಪ ಮಾಡಿದರು.

ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಗುಬ್ಬಿ ಪೊಲೀಸರು ಭೇಟಿ ನೀಡಿ ಮುಂದಿನ ತನಿಖೆ ನಡೆಸಿದ್ದಾರೆ. ಹಲ್ಲೆ ಮಾಡಿದ ಯುವರಾಜ್, ಸಂಜಯ್, ಮಂಜಮ್ಮ, ರವೀಶ್, ಹೇಮಂತ್, ಶಾಂತರಾಜು, ಲಕ್ಷ್ಮಮ್ಮ, ಮೂಡಲಗಿರಿ ಇವರ ಮೇಲೆ ಪ್ರಕರಣ ದಾಖಲಿಸಲು ಮುಂದಿನ ಕ್ರಮ ಕೈಗೊಂಡರು.

Shwetha M

Leave a Reply

Your email address will not be published. Required fields are marked *