ಹೊಲದಲ್ಲಿ ಉಳುಮೆ ಮಾಡುವಾಗ ಸಿಕ್ತು ಮೃತದೇಹ – ವ್ಯಕ್ತಿಯ ಬೆತ್ತಲೆ ದೇಹ ನೋಡಿ ದಂಗಾದ ಊರ ಜನ..!

ಹೊಲದಲ್ಲಿ ಉಳುಮೆ ಮಾಡುವಾಗ ಸಿಕ್ತು ಮೃತದೇಹ – ವ್ಯಕ್ತಿಯ ಬೆತ್ತಲೆ ದೇಹ ನೋಡಿ ದಂಗಾದ ಊರ ಜನ..!

ಎಂದಿನಂತೆ ಹೊಲದಲ್ಲಿ ಉಳುಮೆ ಮಾಡಲು ಅವರು ಟ್ರಾಕ್ಟರ್ ಹತ್ತಿದ್ದರು. ಉಳುಮೆಯನ್ನು ಶುರು ಮಾಡಿದ್ದರು. ಆದರೆ, ಇದ್ದಕ್ಕಿದ್ದಂತೆ ಟ್ರಾಕ್ಟರ್ ಮುಂದೆ ಹೋಗಿಲ್ಲ. ದೊಡ್ಡದೊಂದು ವಸ್ತು ಸಿಕ್ಕಿರಬಹುದು ಎಂದು ಉಳುಮೆ ಮಾಡುತ್ತಿದ್ದವರು ಕೆಳಗೆ ಇಳಿದು ನೋಡಿದಾಗ ಅಚ್ಚರಿ ಜೊತೆಗೆ ಗಾಬರಿಯೇ ಜಾಸ್ತಿಯಾಗಿತ್ತು.

ಇದನ್ನೂ ಓದಿ: ನಿದ್ದೆ ಮಂಪರಿನಲ್ಲಿದ್ದ ಭ್ರಷ್ಟ ಅಧಿಕಾರಿಗಳಿಗೆ ಶಾಕ್! – ಬೆಳ್ಳಂಬೆಳಗ್ಗೆ 90ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ದಾಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಮಂಟನಕುರ್ಚಿ ಗ್ರಾಮದ ನಿವಾಸಿ ಅನುಸೂಯಮ್ಮ ಎಂಬುವರ ಹೊಲದಲ್ಲಿ ಟ್ರಾಕ್ಟರ್ ಮೂಲಕ ಹರೀಶ್ ಎಂಬವರು ಉಳುಮೆ ಮಾಡುತ್ತಿದ್ದರು. ಭಾನುವಾರ ಉಳುಮೆ ಮಾಡುತ್ತಿರುವಾಗ ಟ್ರಾಕ್ಟರ್ ಗೆ ಏನೋ ಸಿಕ್ಕಿದ್ದು ಹರೀಶ್ ಗಮನಕ್ಕೆ ಬಂತು. ಏನದು ಅಂತಾ ಇಳಿದು ನೋಡಿದಾಗ ಹರೀಶ್‌ ನಿಂತಲ್ಲೇ ನಡುಗಿ ಹೋಗಿದ್ದರು. ಯಾಕೆಂದರೆ ತೋಟದ ಮಧ್ಯೆ ಸಿಕ್ಕಿದ್ದು ವ್ಯಕ್ತಿಯೊಬ್ಬರ ಮೃತದೇಹ. ಮೃತ ದೇಹದ ಎದೆ ಭಾಗ ಹಾಗೂ ತೋಡೆ ಭಾಗದಲ್ಲಿ ಚಾಕುವಿನಿಂದ ಇರಿಯಲಾಗಿತ್ತು. ಡೆಡ್‌ ಬಾಡಿ ರಕ್ತಸಿಕ್ತ ಸ್ಥಿತಿಯಲ್ಲಿತ್ತು. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಲಾಯ್ತು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಬಳಿಕ ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರನ್ನ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು 50 ವರ್ಷ ವಯಸ್ಸಿನ ಪುರುಷನ ಮೃತದೇಹ ಎಂದು ತಿಳಿದು ಬಂದಿದೆ.

ಮೃತ ದೇಹದ ಮೇಲೆ ಬಟ್ಟೆಗಳು ಇಲ್ಲದಿರುವುದು ಸಾಕ್ಷ್ಯ ನಾಶ ಪಡಿಸಲು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ, ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪಾರ್ಟಿ ವೇಳೆ ಗಲಾಟೆ ಹಾಗೂ ಯಾವುದೇ ಅನೈತಿಕ ಸಂಬಂಧದ ಕೊಲೆ ಆಗಿರಬಹುದಾ ಎಂದು ಗ್ರಾಮಸ್ಥರಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುತ್ತಮುತ್ತಲ ಠಾಣೆಗಳಲ್ಲಿ ಮಿಸ್ಸಿಂಗ್ ಆದವರ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದು ಮೃತ ದೇಹದ ಗುರುತು ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ.

Sulekha