ಗಂಭೀರ್ & ಅಗರ್ಕರ್ ಬಾಲ ಕಟ್ – VVS ಲಕ್ಷ್ಮಣ್ ಬಿಸಿಸಿಐ ಡೈರೆಕ್ಟರ್
ವಿಶ್ವಕಪ್ ನಲ್ಲಿ RO-KO ಆಡೋದು ಫಿಕ್ಸ್!

ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕಾಂಬಿನೇಷನ್ನಲ್ಲಿ ಭಾರತ ಸಾಕಷ್ಟು ಸೋಲುಗಳನ್ನ ಕಂಡಿದೆ. ಹಾಗೇ ನೆಗೆಟಿವ್ ನ್ಯೂಸ್ ಕೂಡ ಜಾಸ್ತಿಯಾಗಿದೆ. ಆದ್ರೆ ಇದಕ್ಕೆಲ್ಲಾ ಬ್ರೇಕ್ ಹಾಕೋಕೆ ಬಿಸಿಸಿಐ ಮಾಸ್ಟರ್ಪ್ಲ್ಯಾನ್ ಮಾಡಿದೆ. ಹೊಸ ಹುದ್ದೆಯನ್ನೇ ಸೃಷ್ಟಿಸ್ತಾ ಇದೆ. ಌಂಡ್ ಇವ್ರಿಬ್ಬರಿಗೂ ಮೇಲಿನ ಅಧಿಕಾರ ಅವ್ರಲ್ಲಿರುತ್ತೆ.
ಇದನ್ನೂ ಓದಿ : INDO-PAK ಪಂದ್ಯಕ್ಕೆ ಬ್ರೇಕ್ – FINAL ಟಿಕೆಟ್ ಪಡೆದ್ರಷ್ಟೇ ಚಾನ್ಸ್
ಟೀಂ ಇಂಡಿಯಾದ ಮಾಜಿ ಸ್ಟಾರ್ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಅವ್ರನ್ನ ಬಿಸಿಸಿಐನ ನೂತನ ‘ಡೈರೆಕ್ಟರ್ ಆಫ್ ಕ್ರಿಕೆಟ್’ ಹುದ್ದೆಗೆ ನೇಮಿಸಲು ಭರ್ಜರಿ ಪ್ಲ್ಯಾನ್ ಸಿದ್ಧವಾಗಿದೆ. ಸದ್ಯ ಲಕ್ಷ್ಮಣ್ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೇ ರಾಷ್ಟ್ರೀಯ ತಂಡದ ಮುಖ್ಯ ಕೋಚ್ಗಳಿಗೆ ವಿಶ್ರಾಂತಿ ನೀಡಿದಾಗಲೆಲ್ಲಾ ಅವರು ಭಾರತ ತಂಡದ ಹಂಗಾಮಿ ಕೋಚ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬಿಸಿಸಿಐ ನಡೆಸಲಿರುವ ಸಭೆಯಲ್ಲಿ ನಿರ್ಧಾರ ಘೋಷಣೆಯಾಗಲಿದೆ. ವಿವಿಎಸ್ ಲಕ್ಷ್ಮಣ್ ಹೆಗಲಿಗೆ ಹೊಸ ಜವಾಬ್ದಾರಿ ಬೀಳಲಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಕಾರ್ಯಾಚರಣೆ ಮಾದರಿಯನ್ನು ಆಧರಿಸಿ ಬಿಸಿಸಿಐ ಈ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.
ಬಿಸಿಸಿಐ ಇತಿಹಾಸದಲ್ಲೇ ಹೊಸ ಹುದ್ದೆ ಸೃಷ್ಟಿ!
ಅಷ್ಟಕ್ಕೂ ಕ್ರಿಕೆಟ್ ನಿರ್ದೇಶಕ ಹುದ್ದೆ ಬಿಸಿಸಿಐ ಇತಿಹಾಸದಲ್ಲೇ ಇದು ಹೊಸದಾಗಿ ಸೃಷ್ಟಿಸಲಾಗುತ್ತಿರುವ ಹುದ್ದೆ. ನೇಮಕಾತಿ ಅಂತಿಮಗೊಂಡರೆ ಲಕ್ಷ್ಮಣ್ ಅವರೇ ಭಾರತದ ಮೊದಲ ‘ಡೈರೆಕ್ಟರ್ ಆಫ್ ಕ್ರಿಕೆಟ್’ ಎನಿಸಿಕೊಳ್ಳಲಿದ್ದಾರೆ. ಈ ಹುದ್ದೆಯು ರಾಷ್ಟ್ರೀಯ ತಂಡ, ಮುಖ್ಯ ಆಯ್ಕೆದಾರರು, ತರಬೇತುದಾರರು ಹಾಗೇ ಯುವ ಪ್ರತಿಭೆಗಳ ಅಭಿವೃದ್ಧಿ ವ್ಯವಸ್ಥೆಯ ನಡುವೆ ಸಮನ್ವಯ ಸಾಧಿಸುವ ಜವಾಬ್ದಾರಿಯೂ ಇರಲಿದೆ. ಭಾರತೀಯ ಕ್ರಿಕೆಟ್ನಲ್ಲಿ ಎಲ್ಲಾ ಡವಲಪ್ಮೆಂಟ್ಸ್ಗಳಲ್ಲೂ ಲಕ್ಷ್ಮಣ್ ಅವ್ರ ಪಾತ್ರವೂ ದೊಡ್ಡದಾಗಲಿದೆ. ಆಟಗಾರರ ಆಯ್ಕೆ, ಪ್ರವಾಸ, ತರಬೇತಿ ವಿಚಾರದಲ್ಲಿ ಅವ್ರೇ ಪ್ರಮುಖ ನಿರ್ಧಾರಗಳ್ನ ಕೈಗೊಳ್ಬೇಕಾಗುತ್ತೆ.
ಗಂಭೀರ್ & ಅಗರ್ಕರ್ ನಿರ್ಧಾರಗಳಿಗೆ ಬ್ರೇಕ್ ಬೀಳುತ್ತಾ?
ಬಿಸಿಸಿಐ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹದೊಂದು ಉನ್ನತ ಹುದ್ದೆಯನ್ನು ಸೃಷ್ಟಿಸಲಾಗುತ್ತಿದ್ದು ಇದ್ರ ಹಿಂದಿನ ಅಜೆಂಡಾ ಕೂಡ ಕ್ಲಿಯರ್ ಆಗಿದೆ. ಮೆನ್ಸ್, ವುಮೆನ್ಸ್, ಕಿರಿಯರ ವಿಭಾಗ ಹೀಗೆ ಎಲ್ಲದ್ರಲ್ಲೂ ಲಕ್ಷ್ಮಣ್ ಅವ್ರೇ ಬಾಸ್ ಆಗಿರ್ತಾರೆ. ಹಾಗೇ ಟೀಂ ಇಂಡಿಯಾ ಯಾವುದೇ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದಾಗ, ಆಟಗಾರರು, ಮುಖ್ಯ ಕೋಚ್, ಹಾಗೂ ಆಯ್ಕೆ ಸಮಿತಿಯನ್ನು ಪ್ರಶ್ನಿಸಿ, ವೈಫಲ್ಯಕ್ಕೆ ಕಾರಣಗಳನ್ನು ಪತ್ತೆಹಚ್ಚುವ ಸಂಪೂರ್ಣ ಅಧಿಕಾರ ಲಕ್ಷ್ಮಣ್ ಅವರ ಕೈಯಲ್ಲ ಇರಲಿದೆ. ಕೇವಲ ಅಂತರರಾಷ್ಟ್ರೀಯ ಪಂದ್ಯಗಳ ಪ್ಲೇಯಿಂಗ್ 11 ನಿರ್ಧಾರದ ಅಧಿಕಾರವೂ ಇವ್ರ ಬಳಿಯೇ ಇರುತ್ತೆ. ಅಷ್ಟೇ ಅಲ್ಲ ಯುವ ಪ್ರತಿಭೆಗಳನ್ನು ಸೆಲೆಕ್ಟ್ ಮಾಡುವುದು ಆಯ್ಕೆ ಸಮಿತಿ ಜೊತೆ ಫೈನಲ್ ಮಾಡೋದು ಕೂಡ ಲಕ್ಷ್ಮಣ್ ಅವ್ರೇ. ಇನ್ನು ರಾಷ್ಟ್ರೀಯ ತಂಡದ ಸಹಾಯಕ ಸಿಬ್ಬಂದಿ ಅಂದ್ರೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್ಗಳು, ಎನ್ಸಿಎ/ಸಿಒಇ ತರಬೇತುದಾರರು ಮತ್ತು ಸಪೋರ್ಟ್ ಸ್ಟಾಫ್ಗಳನ್ನು ನೇಮಿಸುವ ಸಂಪೂರ್ಣ ಜವಾಬ್ದಾರಿ ಇವರದ್ದಾಗಿರುತ್ತದೆ. ಌಂಡ್ ಇದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ವಿಷ್ಯ ಅಂದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರ ಭವಿಷ್ಯ ಹಾಗೂ ಮುಂದಿನ 2027ರ ಏಕದಿನ ವಿಶ್ವಕಪ್ಗೆ ಬಲಿಷ್ಠ ಬೆಂಚ್ ಸ್ಟ್ರೆಂತ್ ಸಿದ್ಧಪಡಿಸುವ ಫೈನಲ್ ಡಿಸಿಷನ್ಸ್ ವಿಚಾರದಲ್ಲೂ ಲಕ್ಷ್ಮಣ್ ಅವ್ರ ನಿರ್ಧಾರಗಳೇ ಅಂತಿಮವಾಗಿರುತ್ತೆ. ಈ ಹೊಸ ಬದಲಾವಣೆಯಿಂದಾಗಿ, ಬಿಸಿಸಿಐನ ಹೆಡ್ ಕೋಚ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರ ಸ್ಥಾನಗಳಿಗಿಂತಲೂ ಲಕ್ಷ್ಮಣ್ ಅವರ ಹುದ್ದೆ ಉನ್ನತವಾಗಲಿದೆ. ಹೀಗಾಗಿ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಇಬ್ರೂ ಕೂಡ ಲಕ್ಷ್ಮಣ್ ಹೇಳಿದಂತೆಯೇ ಕೇಳ್ಬೇಕಾಗುತ್ತೆ. ಸೋ ಅಲ್ಲಿಗೆ ಇವ್ರಿಬ್ಬರ ಬಾಲ ಕಟ್ ಮಾಡಿದಂತಾಗುತ್ತೆ.
ಭಾರತದ ಪರ ಸಾಕಷ್ಟು ಮ್ಯಾಚ್ ವಿನ್ನಿಂಗ್ಸ್ ಇನ್ನಿಂಗ್ಸ್ಗಳನ್ನ ಆಡಿರುವ ಲಕ್ಷ್ಮಣ್, 2001ರಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಇನಿಂಗ್ಸ್ ಆಡಿದ್ರು. ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 281 ರನ್ಗಳ ಇನಿಂಗ್ಸ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಇನಿಂಗ್ಸ್ಗಳಲ್ಲಿ ಒಂದಾಗಿದೆ. ಪದ್ಮಶ್ರೀ, ಅರ್ಜುನ ಪ್ರಶಸ್ತಿ, ಮತ್ತು ವಿಸ್ಡನ್ ವರ್ಷದ ಕ್ರಿಕೆಟಿಗ ಹೀಗೆ ಹಲವು ಪ್ರಶಸ್ತಿಗಳ ಸರದಾರನೂ ಆಗಿದ್ದಾರೆ. ಹೀಗೆ ಕ್ರಿಕೆಟ್ ಕೆರಿಯರ್ ಬೆಸ್ಟ್ ಆಗಿರೋದಷ್ಟೇ ಅಲ್ಲದೆ ಆಟಗಾರರೊಂದಿಗೆ ಅತ್ಯುತ್ತಮ ಬಾಂಡಿಂಗ್ ಇದೆ. ಯುವ ಪ್ರತಿಭೆಗಳನ್ನು ಬೆಳೆಸಿದ ಅನುಭವವಿರುವುದರಿಂದ ಈ ಹೊಸ ಜವಾಬ್ದಾರಿಯು ಭಾರತೀಯ ಕ್ರಿಕೆಟ್ನ ಪರಿವರ್ತನೆಯ ಹಂತಕ್ಕೆ ದೊಡ್ಡ ಶಕ್ತಿ ನೀಡಲಿದೆ. ಒಟ್ನಲ್ಲಿ ಡೈರೆಕ್ಟರ್ ಹುದ್ದೆಗೆ ನೇಮಕಗೊಳ್ಳುವ ವ್ಯಕ್ತಿ ಭಾರತೀಯ ಕ್ರಿಕೆಟ್ನ ‘ಬಾಸ್’ ತರಹ ಕಾರ್ಯನಿರ್ವಹಿಸಲಿದ್ದಾರೆ.

ನೋಡಿರಿ

