ಮದುವೆ ಆಗ್ತಾ ಇಲ್ವಾ?- ಬುಧವಾರ ಅರಿಶಿನದಿಂದ ಗಣಪತಿಯನ್ನ ಹೀಗೆ ಪೂಜೆ ಮಾಡಿ

ಅರಿಶಿನದಿಂದ ಗಣಪತಿ ಪೂಜೆಯನ್ನು ಮಾಡುವುದರಿಂದ ಸಾಕಷ್ಟು ಸಮಸ್ಯೆಗಳಿಂದ ಪರಿಹಾರ ದೊರೆಯುವುದು. ಬುಧವಾರದ ದಿನದಂದು ಅರಿಶಿನದಿಂದ ಯಾವೆಲ್ಲಾ ಕೆಲಸಗಳನ್ನು ಮಾಡುವುದರಿಂದ ಪ್ರಯೋಜನವಿದೆ.? ಬುಧವಾರ ಅರಿಶಿನದಿಂದ ನಾವು ಏನು ಮಾಡಬೇಕು.?
ಗಣೇಶನ ಹಲವು ರೂಪಗಳಲ್ಲಿ ಒಂದಾದ ಹರಿದ್ರ ಗಣೇಶನ ರೂಪವನ್ನು ಪೂಜಿಸುವುದು ತಂತ್ರ ಶಾಸ್ತ್ರದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅರಿಶಿನದ ಮುದ್ದೆಯನ್ನು ಮಾಡಿ ಅದನ್ನು ಗೇಣೇಶನನ್ನು ಪೂಜಿಸುವುದರಿಂದ ನಮ್ಮ ಜೀವನದಲ್ಲಿ ಬರುವ ದೊಡ್ಡ ಅಡೆತಡೆಗಳು ಮತ್ತು ಶತ್ರು ಬೆದರಿಕೆಗಳನ್ನು ಸಹ ಸ್ವಯಂಚಾಲಿತವಾಗಿ ಶಾಂತಗೊಳಿಸುತ್ತದೆ ಎನ್ನುವ ನಂಬಿಕೆಯಿದೆ.
ಬುಧವಾರದ ದಿನದಂದು ಗಣೇಶನಿಗೆ ಅರಿಶಿನದಿಂದ 5 ಉಂಡೆಗಳನ್ನು ಮಾಡಿ ಅದನ್ನು ಗಣೇಶನಿಗೆ ಅರ್ಪಿಸಬೇಕು. ಅರಿಶಿನವನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಬುಧವಾರದಂದು ಇವುಗಳನ್ನು ಮಾಡುವುದರಿಂದ ನಮ್ಮ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಪರಿಹಾರವಾಗುವುದು.
ಇದನ್ನೂ ಓದಿ: ಶ್ರಾವಣ ಮಾಸದ ಸೋಮವಾರ ಶಿವನನ್ನ ಹೀಗೆ ಪೂಜಿಸಿ – ಶಿವನ ಆಶೀರ್ವಾದಕ್ಕೆ ಈ ಮಂತ್ರ ಪಠಿಸಿ
ಬುಧವಾರದ ದಿನದಂದು ನಾವು ಗಣೇಶನನ್ನು ಪೂಜಿಸುವುದರ ಜೊತೆಗೆ ಗಣೇಶನಿಗೆ ಅರಿಶಿನವನ್ನು ಅರ್ಪಿಸಬೇಕು. ಪೂಜೆಯ ನಂತರ ಸ್ವಲ್ಪ ಸಮಯದವರೆಗೆ ಆ ಅರಿಶಿನವನ್ನು ಗಣೇಶನ ಬಳಿ ಇಟ್ಟು ನಂತರ ಅದನ್ನು ನೀವು ಹಣ ಇಡುವಂತಹ ಸ್ಥಳದಲ್ಲಿ ಅಥವಾ ತಿಜೋರಿಯಲ್ಲಿ ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ಸಮೃದ್ಧಿ ಹೆಚ್ಚಾಗುವುದು. ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿಯಾಗುವುದು. ಕಳೆದುಕೊಂಡ ಹಣವನ್ನು ನೀವು ಮರಳಿ ಪಡೆದುಕೊಳ್ಳುತ್ತೀರಿ.
ಅರಿಶಿನಕ್ಕೆ ನಕಾರಾತ್ಮಕತೆಯನ್ನು ಹಾಗೂ ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡುವಂತಹ ಶಕ್ತಿಯಿದೆ. ಹಾಗಾಗಿ, ಬುಧವಾರದ ದಿನದಂದು ಗಣೇಶನ ಪಾದಗಳಿಗೆ ಅರಿಶಿನವನ್ನು ಅರ್ಪಿಸಿದ ನಂತರ ಅದನ್ನು ನಿಮ್ಮ ಹಣೆಯ ಮೇಲೆ ತಿಲಕವಾಗಿ ಹಚ್ಚಿಕೊಳ್ಳಿ. ಈ ರೀತಿ ಅರಿಶಿನವನ್ನು ಹಚ್ಚಿಕೊಳ್ಳುವುದರಿಂದ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಕೆಟ್ಟ ಆಲೋಚನೆಗಳು ಶುದ್ಧವಾಗುವುದು. ಹಾಗೂ ಇದು ಮನೆಯಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುವುದು.

ನೋಡಿರಿ

