ಈ ಕಂಪನಿಗೆ ಟ್ರೆಕ್ಕಿಂಗ್‌ಗೆ ಬರುವವರೇ ಟಾರ್ಗೆಟ್!‌ – ವಿಮೆ ಹಣಕ್ಕೆ ಮೌಂಟ್ ಎವರೆಸ್ಟ್‌ ಚಾರಣಿಗರಿಗೆ ಶೆರ್ಪಾಗಳಿಂದ ವಿಷ

ಈ ಕಂಪನಿಗೆ ಟ್ರೆಕ್ಕಿಂಗ್‌ಗೆ ಬರುವವರೇ ಟಾರ್ಗೆಟ್!‌ – ವಿಮೆ ಹಣಕ್ಕೆ ಮೌಂಟ್ ಎವರೆಸ್ಟ್‌ ಚಾರಣಿಗರಿಗೆ ಶೆರ್ಪಾಗಳಿಂದ ವಿಷ

ಜೀವನದಲ್ಲಿ ಒಮ್ಮೆಯಾದ್ರೂ ಮೌಂಟ್ ಎವರೆಸ್ಟ್‌ಗೆ ಟ್ರೆಕ್ಕಿಂಗ್‌ ಹೀಗಬೇಕು ಅನ್ನೋದು ಅನೇಕರ ಆಸೆ. ಹೀಗಾಗಿ ಕೆಲವರು ಟ್ರಾವೆಲ್‌ ಏಜೆಸ್ಸಿಗಳ ಮೂಲಕ ಟ್ರೆಕ್ಕಿಂಗ್‌ಗೆ ಹೋಗುತ್ತಾರೆ. ಅವರ ಜೊತೆ ಹೋದ್ರೆ ಸೇಫ್‌ ಆಗಿರ್ತೇವೆ. ಹಾಗೇ ಕಡಿಮೆ ಖರ್ಚಿನಲ್ಲಿ ಹೋಗಬಹುದು ಅಂದುಕೊಳ್ತಾರೆ. ಆದ್ರೀಗ ಈ ಸುದ್ದಿ ಕೇಳಿದ್ರೆ ನೀವು ಶಾಕ್‌ ಆಗ್ತೀರಾ! ಇದೀಗ ಮೌಂಟ್ ಎವರೆಸ್ಟ್‌ಗೆ ಟ್ರೆಕ್ಕಿಂಗ್‌ಗೆಂದು ಹೋದವರ ಜೀವವನ್ನು ಅಪಾಯಕ್ಕೆ ಒಡ್ಡಿ, ವಿಮಾ ಕಂಪನಿಗಳಿಂದ ಕೋಟಿ ಕೋಟಿ ಕಕ್ಕಿಸುತ್ತಿದ್ದ ನೇಪಾಳದ ದೊಡ್ಡ ವಂಚಕರ ಜಾಲವೊಂದು ಇದೀಗ ಬಯಲಾಗಿದೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿಯಲ್ಲಿ ಬೊಲೆರೊ ಭಯ! – ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ವಾಹನ ಓಡಾಟ

ಶೆರ್ಪಾ ಎಂಬ ಕಂಪನಿಗೆ ಮೌಂಟ್ ಎವರೆಸ್ಟ್‌ಗೆ ಟ್ರೆಕ್ಕಿಂಗ್‌ ಹೋಗುವವರೇ ಟಾರ್ಗೆಟ್‌. ಹಣಕ್ಕಾಗಿ ಚಾರಣಿಗರ ಜೀವದ ಜೊತೆ ಆಟವಾಡುತ್ತಿದ್ದ ಈ ಕಂಪನಿಯ ಕರಾಳ ಮುಖವಾಡ ಬಯಲಾಗಿದೆ. ಚಾರಣಿಗರ ಊಟದಲ್ಲಿ ವಿಷವಿಕ್ಕಿ, ಅವರನ್ನು ಅಸ್ವಸ್ಥರಾಗುವಂತೆ ಮಾಡಿ, ವಿಮೆ ಹಣವನ್ನು ಟ್ರೆಕ್ಕಿಂಗ್ ಆಯೋಜಿಸುತ್ತಿದ್ದ ಶೆರ್ಪಾ ಕಂಪನಿ ದೋಚುತ್ತಿತ್ತು. ಈ ಸಂಬಂಧ ಟ್ರೆಕ್ಕಿಂಗ್ ಕಂಪನಿ, ಹೆಲಿಕಾಪ್ಟರ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ 32 ಜನರ ವಿರುದ್ಧ ನೇಪಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಏನಿದು ಪ್ರಕರಣ?

ಚಾರಣಿಗರಿಗೆ ನೆರವು ನೀಡಬೇಕೆಂದು ಉದ್ದೇಶದಿಂದ ಶೆರ್ಪಾಗಳು(ಮಾರ್ಗದರ್ಶಕ) ಅವರೊಂದಿಗೆ ಹೋಗುತ್ತಿದ್ದರು. ಈ ವೇಳೆ ಅವರ ಊಟದಲ್ಲಿ ಕಿಂಗ್ ಸೋಡಾ ಬೆರೆಸುತ್ತಿದ್ದರು. ಇದನ್ನು ತಿನ್ನುತ್ತಿದ್ದಂತೆ ಜನರ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಶೆರ್ಪಾಗಳು, ಎತ್ತರದಿಂದಾಗಿ ಉಂಟಾದ ಅಸ್ವಸ್ಥತೆ ಎಂಬಂತೆ ಬಿಂಬಿಸಿ, ಹೆಲಿಕಾಪ್ಟರ್‌ಗಳ ಮೂಲಕ ಸ್ಥಳಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಮೊದಲೇ ಗಾಬರಿಗೊಂಡಿರುವ ಚಾರಣಿಗರು ಇದಕ್ಕೊಪ್ಪದೆ ಬೇರೆ ದಾರಿ ಇರುತ್ತಿರಲಿಲ್ಲ. ಪರ್ವತದ ತಪ್ಪಲಿನಿಂದ ಹೀಗೆ ರಕ್ಷಿಸಲ್ಪಟ್ಟವರನ್ನು ನಿಗದಿತ ಆಸ್ಪತ್ರೆಗಳಿಗೆ ದಾಖಲಿಸಿ ಅನಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಳಿಕ ಟ್ರೆಕ್ಕಿಂಗ್ ಆಯೋಜಕ ಸಂಸ್ಥೆ ನಕಲಿ ಕಡತ ತಯಾರಿಸುತ್ತಿತ್ತು. ಇದನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ವಿಮಾ ಕಂಪನಿಗಳಿಂದ ವಿಮೆಯ ಬೃಹತ್ ಮೊತ್ತವನ್ನು ದೋಚುತ್ತಿದ್ದರು. ಈ ಹಣವು ಶೆರ್ಪಾ, ಟ್ರಕ್ ಆಯೋಜಕರು, ಹೆಲಿಕಾಪ್ಟರ್ ನಿರ್ವಹಿಸುವವರು ಮತ್ತು ಆಸ್ಪತ್ರೆಯ ನಡುವೆ ಹಂಚಿಕೆಯಾಗುತ್ತಿತ್ತು.

ವಂಚನೆ ಬಯಲಾಗಿದ್ದು ಹೇಗೆ?

3 ಪರ್ವತ ರಕ್ಷಣಾ ಸಂಸ್ಥೆಗಳ 6 ಕಾರ್ಯನಿರ್ವಾಹಕರನ್ನು ಜನವರಿಯಲ್ಲಿ ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ಈ ವಂಚನೆಯ ಜಾಲವು ಬಯಲಾಗಿದೆ. ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ, ಈ ಮಾರ್ಗದಲ್ಲಿ ಸುಮಾರು 186 ಕೋಟಿ ರೂ. ದೋಚಲಾಗಿದೆ. ಒಂದು ರಕ್ಷಣಾ ಕಂಪನಿಯು ಮಾಡಿದ 1,248 ರಕ್ಷಣೆಗಳಲ್ಲಿ 171 ಪ್ರಕರಣಗಳು ನಕಲಿಯಾಗಿದ್ದು, ಇದರಿಂದಲೇ 93 ಕೋಟಿ ರೂ. ಗಳಿಸಿದೆ ಎಂದು ತಿಳಿದುಬಂದಿದೆ. ಈ ಪ್ರಕರಣವು ಕೋರ್ಟ್ ಮೆಟ್ಟಿಲೇರಿದ್ದು, ಪ್ರತಿಯೊಬ್ಬ ವಂಚಕನ ಮೇಲೆ 105 ಕೋಟಿ ರೂ. ದಂಡ ವಿಧಿಸುವಂತೆ ಸರ್ಕಾರಿ ವಕೀಲರು ಆಗ್ರಹಿಸಿದ್ದಾರೆ.

ಅನೇಕ ನೇಪಾಳಿಗರ ಪಾಲಿಗೆ ಚಾರಣವೇ ಜೀವನಾಧಾರವಾದರೂ ಇಂತಹ ಘಟನೆಗಳಿಂದ ಚಾರಣಿಗರ ವಿಶ್ವಾಸ ಕುಸಿಯುತ್ತಿದೆ. ಜೊತೆಗೆ ಕೆಲ ಅಂತಾರಾಷ್ಟ್ರೀಯ ವಿಮಾ ಕಂಪನಿಗಳು ವಿಮೆ ಕೊಡುವುದನ್ನೇ ನಿಲ್ಲಿಸಿವೆ. 2018ರಲ್ಲಿ ನೇಪಾಳ ಸರ್ಕಾರವು ಚಾರಣಿಗರ ಹೊಣೆಯನ್ನು ಟ್ರೆಕ್ಕಿಂಗ್ ಆಯೋಜಕರಿಗೇ ವಹಿಸಿತ್ತು.

Shwetha M