ಜೀವನದಲ್ಲಿ ಸಮೃದ್ಧಿ ಮತ್ತು ಯಶಸ್ಸು ದೊರೆಯಬೇಕಾ- ಗಣೇಶನ ಈ ಮಂತ್ರಗಳನ್ನು ಜಪಿಸಿ

ಸಂಕಷ್ಟ ಚತುರ್ಥಿ ವ್ರತವು ವಿಘ್ನಗಳನ್ನು ನಿವಾರಿಸುವ ವಿಘ್ನೇಶ್ವರನಿಗೆ ಸಮರ್ಪಿತವಾದ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ತಿಂಗಳಲ್ಲೂ ಪೂರ್ಣಿಮೆಯ ನಂತರ ಬರುವ ನಾಲ್ಕನೇ ತಿಥಿಯಂದು ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಭಕ್ತರು ಗಣೇಶನ ಆರಾಧನೆಗೆ ವಿಶೇಷವಾಗಿ ಮೀಸಲಿಡುತ್ತಾರೆ. ಈ ಪವಿತ್ರ ದಿನದಂದು ಉಪವಾಸವಿದ್ದು ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಎದುರಾಗುವ ಸಂಕಷ್ಟಗಳು, ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.
ಗಣೇಶನು ವಿಘ್ನಗಳನ್ನು ನಿವಾರಿಸುವ ದೇವರೆಂದು ಪೂಜಿಸಲ್ಪಡುತ್ತಾನೆ. ಆದ್ದರಿಂದ ಸಂಕಷ್ಟ ಚತುರ್ಥಿಯಂದು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಅವನ ಅನುಗ್ರಹವನ್ನು ಪಡೆಯಲು ಭಕ್ತರು ವಿವಿಧ ಮಂತ್ರಗಳನ್ನು ಪಠಿಸುವ ಪದ್ಧತಿ ಇದೆ. ಈ ದಿನ ಗಣೇಶನ ಮಂತ್ರಗಳನ್ನು ಜಪಿಸುವುದರಿಂದ ಮನಸ್ಸಿಗೆ ಶಾಂತಿ, ಜೀವನದಲ್ಲಿ ಸಮೃದ್ಧಿ ಮತ್ತು ಯಶಸ್ಸು ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಸಂಕಷ್ಟ ಚತುರ್ಥಿಯಂದು ಪಠಿಸಬೇಕಾದ ಗಣೇಶ ಮಂತ್ರಗಳು
1. ಗಣೇಶ ಸ್ತುತಿ ಮಂತ್ರ
“ಗಜಾನನಂ ಭೂತಗಣಾದಿಸೇವಿತಂ ಕಪಿತ್ಥಜಂಬೂಫಲಚಾರೂ ಭಕ್ಷಣಂ |
ಉಮಾಸುತಂ ಶೋಕವಿನಾಶಕಾರಕಂ ನಮಾಮಿ ವಿಘ್ನೇಶ್ವರಪಾದಪಂಕಜಂ ||”
2. ಶ್ರೀ ಗಣೇಶ ಗಾಯತ್ರಿ ಮಂತ್ರ
“ಓಂ ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ಬುದ್ಧಿದ್ ಪ್ರಚೋದಯಾತ್”
3. ವಕ್ರತುಂಡ ಮಂತ್ರ
“ವಕ್ರತುಂಡ ಮಹಾಕಾಯ, ಸೂರ್ಯ ಕೋಟಿ ಸಮಪ್ರಭಃ |
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||”

ನೋಡಿರಿ

