ದೆವ್ವ ಹಿಡಿದಿದೆ ಅಂತ ಮಹಿಳೆಯನ್ನ ಬೇವಿನ ಕಟ್ಟಿಗೆಯಿಂದ ಹೊ*ಡೆದು ಕೊ*ದ ಪಾಪಿಗಳು!

ದೆವ್ವ ಹಿಡಿದಿದೆ ಅಂತ ಮಹಿಳೆಯನ್ನ ಬೇವಿನ ಕಟ್ಟಿಗೆಯಿಂದ ಹೊ*ಡೆದು ಕೊ*ದ ಪಾಪಿಗಳು!

ನಾವು ತಂತ್ರಜ್ಞಾನದಲ್ಲಿ ಎಷ್ಟೇ ಬೆಳೆದಿದ್ರೂ, ನಮ್ಮ ಮೌಢ್ಯ ಇನ್ನೂ ಹೂಗಿಲ್ಲ. ಇದ್ದಕ್ಕೆ ಒಂದು ಸಾಕ್ಷಿ ಕಲಬರುಗಿ. ಹೌದು   ಜನಗಳ ಮೂಢ ನಂಬಿಕೆಗೆ ಕಲಬುರಗಿಯಲ್ಲಿ ಅಮಾಯಕ ಮಹಿಳೆ ಬಲಿಯಾಗಿದ್ದಾಳೆ. ದೆವ್ವ ಹಿಡಿದಿದೆ ಅಂತ ಬೇವಿನ ಕಟ್ಟಿಗೆಯಿಂದ ಹೊಡೆದು ಮಹಿಳೆಯನ್ನು ಕೊಲೆ ಮಾಡಲಾಗಿದೆ. 38 ವರ್ಷದ ಮುಕ್ತಾಬಾಯಿ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ನಿವಾಸಿಯಾಗಿದ್ದ ಮುಕ್ತಾಬಾಯಿ, ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎನ್ನುವ ವ್ಯಕ್ತಿಯ ಜೊತೆ ಮದುವೆಯಾಗಿದ್ದರು. ದೆವ್ವ ಹಿಡಿದಿದೆ ಎನ್ನುವ ಮೂಢನಂಬಿಕೆಯ ಮೇಲೆ ಕಳೆದ ನಾಲ್ಕು ದಿನದ ಹಿಂದೆ ಮುರುಮ್ ಗ್ರಾಮದಲ್ಲಿ ಈಕೆಗೆ ಬೇವಿನ ಕಟ್ಟಿಗೆಯಿಂದ ಬಾಮೈದ ಹೊಡೆದಿದ್ದ. ಗಿಡ್ಡೆಪ್ಪನ ಸಹೋದರ ಹಾಗೂ ಸಂಬಂಧಿಕರು ಆಕೆಯ ಮೇಲೆ ಹಲ್ಲೆ ಮಾಡಿದ್ದರು. ತಲೆ ಸುತ್ತು ಬಂದು ಮನೆಯ ಬಳಿ ಬಿದ್ದಾಗ ದೆವ್ವ ಹಿಡಿದಿದೆ ಅಂತ ಹಲ್ಲೆ ಮಾಡಲಾಗಿತ್ತು.

ಇದನ್ನೂ ಓದಿ: ಗಿಲ್ಲಿ ವೈಸ್ ಅಲ್ಲ ಈಗ CAPTAIN!!.. ಅಶ್ವಿನಿ ಮುಂದೆ ಗೆದ್ದ ಜಗತ್‌ ಕಿಲಾಡಿ! – ಗಿಲ್ಲಿ ದರ್ಬಾರ್‌ಗೆ ಮನೆ ಮಂದಿ ಸುಸ್ತು  

ಬೇವಿನ ಕಟ್ಟಿಗೆಯಿಂದ ರಾತ್ರಿ ಮತ್ತು ಬೆಳಿಗ್ಗೆ ಹಲ್ಲೆ ಆಕೆಯ ಮೇಲೆ ಸಂಬಂಧಿಗಳು ಹಲ್ಲೆ ಮಾಡಿದ್ದರು. ಬಳಿಕ ದೇವಲ ಗಾಣಗಾಪುರದ ದತ್ತನ ಸನ್ನಧಿಗೆ ತಂದು ದೆವ್ವ ಬಿಡಿಸಲು ಗಿಡ್ಡಪ್ಪನ ಸಂಬಂಧಿಕರು ಮುಂದಾಗಿದ್ದರು. ದೆವ್ವ ಬಿಡಿಸಲು ಹಲ್ಲೆ ಮಾಡಿದ ಬಳಿಕ ಮುಕ್ತಾಬಾಯಿ ಸುಸ್ತಾಗಿ ಬಿದ್ದಿದ್ದಳು.ಆ ಬಳಿಕ ಆಕೆಯ ತಾಯಿಗೆ ಕರೆ ಮಾಡಿ ಗಂಡನ ಮನೆಯವರು ವಿಷಯ ತಿಳಿಸಿದ್ದರು. ಮುಕ್ತಾಬಾಯಿ ಅವರ ತಾಯಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಶುಕ್ರವಾರ ತಡರಾತ್ರಿ ಸಾವು ಕಂಡಿದ್ದಾರೆ. ಮಹಾರಾಷ್ಟ್ರದ ಮುರುಮ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Kishor KV