ವಧು-ವರ ಇಬ್ಬರಿಗೂ ಕುಜ ದೋಷವಿದ್ದರೆ ವಿವಾಹ ಮಾಡಬಹುದಾ? – ಶಾಸ್ತ್ರ ಏನ್ ಹೇಳುತ್ತೆ?

ತಮ್ಮ ವಯಸ್ಕ ಮಕ್ಕಳಿಗೆ ಮದುವೆ ಆಗದಿದ್ದರೆ ಪೋಷಕರು ತುಂಬಾ ಚಿಂತಿತರಾಗುತ್ತಾರೆ. ಕೆಲವು ಜಾತಕಗಳಲ್ಲಿ ಮಂಗಳಗ್ರಹದ ಪರಿಣಾಮದಿಂದ ಕುಜ ದೋಷ ಉಂಟಾಗುತ್ತದೆ. ಕುಜ ದೋಷ (ಮಂಗಳ ದೋಷ) ಎಂದರೆ ಜನ್ಮ ಕುಂಡಲಿಯಲ್ಲಿ ಕುಜ (ಮಂಗಳ) ಗ್ರಹವು ಲಗ್ನ, 4, 7, 8, ಅಥವಾ 12ನೇ ಮನೆಯಲ್ಲಿರುವುದು. ಈ ದೋಷದಿಂದಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು, ವಿಚ್ಛೇದನ, ಹಣಕಾಸಿನ ತೊಂದರೆಗಳು ಮತ್ತು ಇತರ ಸಂಘರ್ಷಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ವಧು ಮತ್ತು ವರ ಇಬ್ಬರಿಗೂ ಕುಜ ದೋಷವಿದ್ದರೆ, ದೋಷವು ಶೂನ್ಯವಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ, ಒಬ್ಬರಿಗೆ ಮಾತ್ರ ದೋಷವಿದ್ದರೆ, ಹೊಂದಾಣಿಕೆಯಾಗುವ ಕುಂಡಲಿಗಳನ್ನು ಪರಿಶೀಲಿಸಬೇಕು. ಕುಜ ದೋಷದ ಕಾರಣದಿಂದ ಮದುವೆ ವಿಳಂಬವಾಗುತ್ತವೆ ಎಂದು ಹೇಳಲಾಗುತ್ತದೆ
ಜಾತಕದಲ್ಲಿ ಏಳನೇ ಮನೆಯನ್ನು ಆಧರಿಸಿ ಮದುವೆಯನ್ನು ಪರಿಗಣಿಸಲಾಗುತ್ತದೆ. ಏಳನೇ ಮನೆಯನ್ನು ಆಳುವ ಗ್ರಹ ದುರ್ಬಲವಾಗಿದ್ದರೆ ಅಥವಾ ಕೆಟ್ಟ ಸ್ಥಿತಿಯಲ್ಲಿದ್ದರೆ, ಅಥವಾ ಗುರು, ಶುಕ್ರ ವಿರುದ್ಧವಾಗಿದ್ದರೆ, ಮದುವೆ ವಿಳಂಬವಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ನೀವು ದಕ್ಕೆ ಸೂಕ್ತವಾದ ರತ್ನವನ್ನು ಧರಿಸಿದರೆ, ಮದುವೆ ಬೇಗನೆ ನಡೆಯುತ್ತದೆ ಎಂಬ ನಂಬಿಕೆಯಿದೆ.
ಕುಜದೋಷ ನಿವಾರಣೆಗೆ ಸುಬ್ರಹ್ಮಣ್ಯನ ಪೂಜೆ, ಕುಂಭ ವಿವಾಹ, ಅಶ್ವಿನಿ ಬಲಿ ಪೂಜೆ ಮತ್ತು ಸರ್ಪ ಸಂಸ್ಕಾರಗಳನ್ನು ಮಾಡಬಹುದು. ಕುಜ ದೋಷವನ್ನು ನಿವಾರಿಸಲು ಮೊದಲು ಅರಳಿ ಮರ, ಬಾಳೆ ಮರ, ಮಡಕೆ ಅಥವಾ ವಿಷ್ಣುವಿನ ಪ್ರತಿಮೆಯೊಂದಿಗೆ ಸಾಂಕೇತಿಕ ವಿವಾಹ ಮಾಡಲಾಗುತ್ತದೆ. ಕುಜದೋಷ ನಿವಾರಣೆಗೆ ಪರಿಣಾಮಕಾರಿ ಪರಿಹಾರವೆಂದರೆ ಮಂಗಳವಾರದ ಉಪವಾಸ. ದೋಷವಿರುವವರು ಈ ದಿನ ಉಪವಾಸ ಮಾಡಿ ಬರಿ ತೊಗರಿ ಬೇಳೆಯಿಂದ ಮಾಡಿದ ಆಹಾರವನ್ನು ಮಾತ್ರ ಸೇವಿಸಬೇಕು. ಇನ್ನೂ ಕೇರಳದ ತಿರುವೈರಾನಿಕುಲಂ ದೇವಸ್ಥಾನದಲ್ಲಿ ರೇಷ್ಮೆ ಬಟ್ಟೆ ಮತ್ತು ತಾಳಿಯನ್ನು ಅರ್ಪಿಸುವುದರಿಂದ ಕುಜ ದೋಷ ಪರಿಹಾರವಾಗುತ್ತದೆ ಎಂಬ ಪ್ರತೀತಿಯಿದೆ.

ನೋಡಿರಿ

