ರಜೆಯಲ್ಲಿ ಮಜಾ ಮಾಡಬೇಕಾ?- ಚಿಕ್ಕಮಗಳೂರಿನಲ್ಲಿ ಈ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿ

ಬೆಂಗಳೂರಿನಿಂದ ಚಿಕ್ಕಮಗಳೂರು ಸುಮಾರು 250 ರಿಂದ 265 ಕಿ.ಮೀ ದೂರದಲ್ಲಿದೆ. ರಜೆಯಲ್ಲಿ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಟ್ರಿಪ್ ಯೋಜಿಸಲು ಬಯಸಿದರೆ ತಪ್ಪದೇ ಚಿಕ್ಕಮಗಳೂರಿಗೆ ಹೋಗಿ. ಇಲ್ಲಿ ಪ್ರವಾಸಿಗರನ್ನು ಸೆಳೆಯುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮಾಣಿಕ್ಯಧಾರ ಜಲಪಾತ, ಕಲ್ಹಟ್ಟಿ ಜಲಪಾತ, ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್ಗಿರಿ, ಕೆಮ್ಮಣ್ಣುಗುಂಡಿ, ಭದ್ರಾ ವನ್ಯಜೀವಿ ಧಾಮ, ಕಾಫಿ ವಸ್ತು ಸಂಗ್ರಹಾಲಯ, ಕದಂಬಿ ಜಲಪಾತ, ಝಡ್ ಪಾಯಿಂಟ್ ಸೇರಿದಂತೆ ಇನ್ನು ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ಇವುಗಳಲ್ಲಿ ಪ್ರಮುಖ 3 ಪ್ರವಾಸಿ ತಾಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ


ಈ ಪ್ರಶಾಂತವಾದ ಜಲಪಾತದ ನೀರು ಗಿಡಮೂಲಿಕೆಗಳಿಂದ ತುಂಬಿರುತ್ತದೆ ಎಂದು ನಂಬಲಾಗಿದೆ. ಈ ಆರೋಗ್ಯಕರ ನೀರಿನಲ್ಲಿ ಸ್ನಾನ ಮಾಡುವುದರಿಂದ ಅನೇಕ ಚರ್ಮದ ತೊಂದರೆಗಳು ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಸುತ್ತಲೂ ವಿವಿಧ ಸಾಹಸಮಯ ಚಟುವಟಿಕೆಗಳನ್ನು ಸಹ ಆನಂದಿಬಹುದು. ಜಲಪಾತದ ಸ್ಥಳವು ಅತ್ಯುತ್ತಮ ಕುಟುಂಬ ಪಿಕ್ನಿಕ್ಗೆ ಹೇಳಿ ಮಾಡಿಸಿದಂತಿದೆ.
ಸಮಯ: ಬೆಳಿಗ್ಗೆ 6:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ
ಕಾಫಿ ವಸ್ತುಸಂಗ್ರಹಾಲಯ

ಚಿಕ್ಕಮಗಳೂರಿನಲ್ಲಿ ನೀವು ಮಿಸ್ ಮಾಡಿಕೊಳ್ಳಬಾರದ ಮತ್ತೊಂದು ಸುಂದರ ತಾಣವೆಂದರೆ ಅದು ಕಾಫಿ ವಸ್ತುಸಂಗ್ರಹಾಲಯವಾಗಿದೆ. ಈ ಸ್ಥಳವು ತಾಜಾ ಕಾಫಿ ಸುವಾಸನೆ, ತಯಾರಿಕೆಗಳಿಗೆ ಹೆಸರುವಾಸಿಯಾಗಿದೆ. ಬೀಜಗಳನ್ನು ಕೀಳುವ ಮೊದಲ ಹಂತದಿಂದ ಹಿಡಿದು ಪುಡಿ ಮಾಡುವ ಹಂತದವರೆವಿಗೂ ನೀವು ಎಲ್ಲಾ ಪ್ರಕ್ರಿಯೆಯನ್ನು ನೋಡಬಹುದು ಹಾಗೂ ಕಲಿಯಬಹುದು.
ಕಾಫಿ ವಸ್ತುಸಂಗ್ರಹಾಲಯ ಪ್ರವೇಶ ಶುಲ್ಕ: 20 ಪ್ರವೇಶ ಶುಲ್ಕವಾಗಿದೆ.

ನೋಡಿರಿ

