ಟಾಸ್ಕ್ನಲ್ಲಿ ಕಾವ್ಯ ಎಡವಟ್ಟು.. ಮನೆಯವರು ಸಪೋರ್ಟ್ ಮಾಡಿದ್ರೂ ಸೋತಿದ್ದು ಹೇಗೆ?

ಬಿಗ್ ಬಾಸ್ ಕನ್ನಡ ಸೀಸನ್ 12 ರ ಮೊದಲ ಫಿನಾಲೆಗೆ ಕೌಂಟ್ಡೌನ್ ಶುರುವಾಗಿದೆ. ಇದೇ ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯಲಿದೆ. ಈ ವಾರ ಒಟ್ಟು 13 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಈ ವಾರ ಮಾಸ್ ಎಲಿಮಿನೇಷನ್ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸಲೇಬೇಕಿದೆ. ಆದ್ರೀಗ ಬಿಗ್ ಬಾಸ್ ಕೊಟ್ಟ ಆಟದಲ್ಲಿ ಕಾವ್ಯ ಎಡವಿದ್ದಾರೆ.
ಇದನ್ನೂ ಓದಿ: ಡಿಕೆಶಿಗೆ ಹಾಸನಾಂಬೆ ಮಹಾಪ್ರಸಾದ – ಪೂಜೆ ವೇಳೆ ಎರಡೆರಡು ಬಾರಿ ಬಲಗಡೆ ಹೂವು ವರ ನೀಡಿದ ದೇವಿ
ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಮೊದಲ ಫಿನಾಲೆಯ ಈ ವಾರ ತಾವು ಫೈನಲಿಸ್ಟ್ ಆಗಿ ಈ ಮನೆಯಲ್ಲಿ ತಮ್ಮ ಪ್ರಯಾಣ ಮುಂದುವರೆಸಲು ಇದು ಕಟ್ಟ ಕಡೆಯ ಅವಕಾಶ ಎಂದು ಹೇಳಿ ಒಂದು ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ನಲ್ಲಿ ಕಾವ್ಯಾ ಹಾಗೂ ರಾಶಿಕಾ ಭಾಗವಹಿಸಿದ್ದಾರೆ. ಓರ್ವ ಸ್ಪರ್ಧಿ ಹಲಗೆ ಮೇಲೆ ನಡೆಯುತ್ತ ಎದುರಾಳಿ ಆಟಗಾರ ಇಟ್ಟಿರುವ ಡಿಸ್ಕ್ ಅನ್ನು ತಿರುಗಿಸಿ ತಮ್ಮ ಬಣ್ಣದ ಅಧಿಕ ಡಿಸ್ಕ್ಗಳು ಮೇಲ್ಬದಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ಟಾಸ್ಕ್ನಲ್ಲಿ ಅನೇಕರು ಕಾವ್ಯಗೆ ಸಪೋರ್ಟ್ ಮಾಡಿದ್ದಾರೆ. ಜಾನ್ವಿ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಮಲ್ಲಮ್ಮ, ಧನುಷ್ ಸೇರಿದಂತೆ ಅನೇಕರು ಕಾವ್ಯ ಅವರು ಈ ಗೆಲ್ಲಲಿ ಅಂತ ಅವರಿಗೆ ಸಪೋರ್ಟ್ ಮಾಡ್ತೇನೆ ಎಂದಿದ್ದಾರೆ. ಆದರೆ, ಟಾಸ್ಕ್ ಅನ್ನು ಸರಿಯಾಗಿ ಅರ್ಥ ಮಾಡುವಲ್ಲಿ ಕಾವ್ಯ ಎಡವಿದ್ದಾರೆ.
ಟಾಸ್ಕ್ನ ಉಸ್ತುವಾರಿ ವಹಿಸಿಕೊಂಡಿದ್ದ ಧ್ರುವಂತ್ ಅವರು, ಡಿಸ್ಕ್ಗಳನ್ನು ಕಾವ್ಯ ಅವರು ಕೈಯಲ್ಲಿ ಕಲೆಕ್ಟ್ ಮಾಡ್ತಾ ಹೋಗ್ತಿದ್ದಾರೆ. ಅವರು ತಮಗೆ ಇಷ್ಟ ಬಂದ ಹಾಗೆ ಆಟವಾಡಿದ್ದಾರೆ.. ನಿಮ್ಮನ್ನ ಈ ಟಾಸ್ಕ್ನಲ್ಲಿ ಮೂವ್ ಮಾಡೋಕೆ ಬಿಡಲ್ಲ ಎಂದು ಹೇಳಿದ್ದಾರೆ. ಈ ಪ್ರಸಂಗದಿಂದ ರಾಶಿಕಾಗೆ ಪ್ಲಸ್ ಆಗುವ ಸಾಧ್ಯತೆ ಇದೆ. ಅಲ್ಲದೆ ಪ್ರೋಮೋದಲ್ಲಿ ಕಾವ್ಯ ಬೇಸರದಲ್ಲಿ ಹೋಗುತ್ತಿರುವುದು ಕಂಡರೆ ರಾಶಿಕಾ ಮೊಗದಲ್ಲಿ ಗೆಲುವಿನ ನಗೆ ಕಾಣಿಸುತ್ತಿದೆ. ಇದೀಗ ಕಾವ್ಯ ಟಾಸ್ಕ್ನಿಂದ ಹೊರಗುಳಿದ್ರಾ? ಮುಂದೇನಾಗಲಿದೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ.

ನೋಡಿರಿ

