‘ಹಿಂದೂವಾಗಿ, ಹಿಂದುಗಳನ್ನೇ ಅವಮಾನಿಸುವುದು ವಿಕೃತ ಮನಸ್ಥಿತಿ’ – ಸಿದ್ದರಾಮಯ್ಯ ವಿರುದ್ದ ಬಿಜೆಪಿ ಕಿಡಿ

‘ಹಿಂದೂವಾಗಿ, ಹಿಂದುಗಳನ್ನೇ ಅವಮಾನಿಸುವುದು ವಿಕೃತ ಮನಸ್ಥಿತಿ’ – ಸಿದ್ದರಾಮಯ್ಯ ವಿರುದ್ದ ಬಿಜೆಪಿ ಕಿಡಿ

ಬೆಂಗಳೂರು: ಹಿಂದೂ ರಾಷ್ಟ್ರದಲ್ಲಿ ಹಿಂದೂವಾಗಿ ಹಿಂದೂಗಳನ್ನೇ ಅವಮಾನಿಸುವುದು ಎಂಥ ವಿಕೃತ ಮನಸ್ಥಿತಿ? ಎಂದು  ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಹಿಂದೂ ಧರ್ಮದಲ್ಲಿ ಗೋವಿಗೆ ತಾಯಿಯ ಸ್ಥಾನವಿದೆ. ಮುಖ್ಯಮಂತ್ರಿಯಾಗಿದ್ದಾಗ ಗೋಮಾಂಸ ತಿನ್ನುತ್ತೇನೆ ಎಂದು ಹೇಳಿಕೆ ನೀಡಿದವರು. ಹಿಂದೂ ರಾಷ್ಟ್ರದಲ್ಲಿ ಹಿಂದೂವಾಗಿ ಹಿಂದೂಗಳನ್ನೇ ಅವಮಾನಿಸುವುದು ಎಂಥ ವಿಕೃತ ಮನಸ್ಥಿತಿ? ಹಿಂದೂ ಕಾರ್ಯಕರ್ತರ ವಿರುದ್ಧ ಹೋರಾಡಿ ಎಂದವರು ಸಿದ್ದರಾಮಯ್ಯ. ಇವರ ಬೆಂಬಲದಿಂದ ದೇಶದ್ರೋಹಿ ಪಿಎಫ್ಐ ಸದಸ್ಯರು, ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿದರು. ಪಿಎಫ್ಐ ಕಾರ್ಯಕರ್ತರ ಬಗ್ಗೆ ಮೃದು ಧೋರಣೆ ತಳೆದು ಪ್ರಕರಣಗಳನ್ನು ಕೈ ಬಿಟ್ಟಿದ್ದಕ್ಕೇ ಅಲ್ಲವೇ ಇನ್ನೂ ಕುಕ್ಕರ್ ಬ್ಲಾಸ್ಟ್ ಆಗಿದ್ದು? ಎಂದು ಕಿಡಿಕಾರಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ – 44 ಮಂದಿ ಪೊಲೀಸರ ವಶಕ್ಕೆ

ಜಯಂತಿಯ ಕಲ್ಪನೆಯೇ ಇಲ್ಲದ ಸಮುದಾಯದಲ್ಲಿ ಜಯಂತಿ ಆಚರಿಸಿದವರು ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಯಂತಿ ಆಚರಿಸಿ, ಹಿಂದೂಗಳ ಭಾವನೆ ಕೆರಳಿಸಿದರೆ ಎಷ್ಟು ದಿನ ಜನರು ಕಾಂಗ್ರೆಸ್ಸನ್ನು ಸಹಿಸುತ್ತಾರೆ? ಎಂದು ಆಕ್ರೋಶ ಹೊರಹಾಕಿದೆ.

ಹುಬ್ಬಳ್ಳಿ-ಧಾರವಾಡ ದೇವಸ್ಥಾನಗಳ ತೆರವಾದಾಗ ಸುಮ್ಮನಿದ್ದ ಸಿದ್ದರಾಮಯ್ಯ ದರ್ಗಾ ತೆರವಿನ ಬಗ್ಗೆ ಸಿಡಿದಿದ್ದೇಕೆ? ಜನರಿಗೆ ಇದೆಲ್ಲ ಸ್ಪಷ್ಟವಾಗಿ ಗೋಚರವಾಗಿದ್ದಕ್ಕೇ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವೀರಶೈವ ಮತ್ತು ಲಿಂಗಾಯತರ ಪ್ರತ್ಯೇಕ ಧರ್ಮ ಸ್ಥಾಪಿಸಲು ಸಿದ್ದರಾಮಯ್ಯ ಮುಂದಾಗಿದ್ದರು. ಹೀಗೆ ಹಿಂದೂಗಳ ನಡುವೆ ಕಂದಕ ಸೃಷ್ಟಿಸಿ, ಒಡೆದು ಆಳುವ ನೀತಿ ಪ್ರಯೋಗಿಸಿದ್ದಕ್ಕೇ ಅಲ್ಲವೇ ಇವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು? ಎಂದು ಪ್ರಶ್ನಿಸಿದೆ.

ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣ ಸಾಧಿಸುವ, ದತ್ತಿ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಹೊರಟವರು ಸಿದ್ದರಾಮಯ್ಯ. ಹಿಂದೂಗಳನ್ನು ದಮನಿಸಲು ಹವಣಿಸಿದ್ದಕ್ಕೇ ಅಲ್ಲವೇ ನಿಮಗಿನ್ನೂ ಭದ್ರ ನೆಲೆ ಸಿಗದಿರುವುದು? ಎಂದು ವಾಗ್ದಾಳಿ ನಡೆಸಿದೆ.

suddiyaana