ಬೆಟ್ಟಿಂಗ್ ಪ್ರಚಾರ ಮಾಡಿದವರಿಗೆ ED ಗುನ್ನಾ – ಪ್ರಕಾಶ್ ರಾಜ್, ವಿಜಯ್ ದೇವರಕೊಂಡಗೆ ಸಮನ್ಸ್ ಜಾರಿ

ಬೆಟ್ಟಿಂಗ್ ಪ್ರಚಾರ ಮಾಡಿದವರಿಗೆ ED ಗುನ್ನಾ – ಪ್ರಕಾಶ್ ರಾಜ್, ವಿಜಯ್ ದೇವರಕೊಂಡಗೆ ಸಮನ್ಸ್ ಜಾರಿ

ಹಣದ ಆಸೆಗೆ ಬೆಟ್ಟಿಂಗ್ ಆ್ಯಪ್‌ಗೆ ಪ್ರಚಾರ ಕೊಟ್ಟವರಿಗೆ ಇಡಿ ಬಿಸಿ ಮುಟ್ಟಿಸುತ್ತಿದೆ. ಬೆಟ್ಟಿಂಗ್ ಆ್ಯಪ್ ಹಗರಣ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು  ED ನಟರಾದ ವಿಜಯ್ ದೇವರಕೊಂಡ,  ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಸೇರಿದಂತೆ ಇತರರಿಗೆ ಸಮನ್ಸ್ ಜಾರಿ ಮಾಡಿದೆ. ಸಮನ್ಸ್‌ ನಲ್ಲಿ ಒಬ್ಬರಿಗೂ ಒಂದೊಂದು ಡೇಟ್ ಕೊಟ್ಟು ವಿಚಾರಣಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಜುಲೈ 23 ರಂದು ದಗ್ಗುಬಾಟಿ, ಜುಲೈ 30 ರಂದು ಪ್ರಕಾಶ್ ರಾಜ್, ಆಗಸ್ಟ್ 6 ರಂದು ವಿಜಯ್ ದೇವರಕೊಂಡ ಮತ್ತು ಆಗಸ್ಟ್ 13 ರಂದು ಲಕ್ಷ್ಮಿ ಮಂಚು ಅವರು ಕೇಂದ್ರೀಯ ಸಂಸ್ಥೆಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.

ಇದನ್ನೂ ಓದಿ: ನಂದಿನಿ ಬೂತ್‌ ಮಾಲೀಕನಿಗೆ ಶಾಕ್‌ ಕೊಟ್ಟ ವಾಣಿಜ್ಯ ತೆರಿಗೆ ಇಲಾಖೆ – 1 ಕೋಟಿ 3 ಲಕ್ಷ ಟ್ಯಾಕ್ಸ್ ಕಟ್ಟುವಂತೆ ನೋಟಿಸ್!

ಈ ಹಗರಣದ ಭಾಗವಾಗಿ ಹಂತವಾಗಿ ಸಮನ್ಸ್ ಜಾರಿ ಮಾಡುವುದನ್ನು ಇಡಿ ಮುಂದುವರಿಸುತ್ತದೆ. ಪ್ರಣೀತಾ ಸುಭಾಷ್, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ಸಿರಿ ಹನುಮಂತ್, ಶ್ರೀಮುಖಿ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಇಮ್ರಾನ್ ಖಾನ್ ಸೇರಿದಂತೆ ಹಲವರಿಗೆ ಈಗಾಗಲೇ ನೋಟೀಸ್‌ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇವರನ್ನೂ ಐಡಿ ವಿಚಾರಣೆ ನಡೆಸಲಿದೆ.

ಇದು ಏನ್ ಪ್ರಕರಣ ಅಂತ ನೋಡೋದಾದ್ರೆ.ಅಕ್ರಮ ಬೆಟ್ಟಿಂಗ್ ಆಪ್‌ ಪ್ರಚಾರ ಮಾಡಿದ್ದಕ್ಕಾಗಿ ಜಾರಿ ನಿರ್ದೇಶನಾಲಯವು ಹಲವಾರು ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ರಾಜ್ಯ ಪೊಲೀಸರು ದಾಖಲಿಸಿರುವ ಕನಿಷ್ಠ ಐದು ಎಫ್‌ಐಆರ್‌ಗಳ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಣ ಗಳಿಸುವ ಆಸೆ ತೋರಿಸಿ ಯುವ ಜನತೆಯನ್ನು ಬೆಟ್ಟಿಂಗ್ ಆ್ಯಪ್​ಗಳು ದಾರಿ ತಪ್ಪಿಸುತ್ತಿವೆ. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಮಿಲಿಯನ್​ಗಟ್ಟಲೆ ಫಾಲೋವರ್ಸ್ ಹೊಂದಿರುವ ವ್ಯಕ್ತಿಗಳು ಪ್ರಚಾರ ನೀಡುತ್ತಿದ್ದಾರೆ. ಇಂತಹ ಅಕ್ರಮ ಬೆಟ್ಟಿಂಗ್ ಆ್ಯಪ್​​ಗಳಿಂದ ಅನೇಕ ಯುವಕರು ಹಣ ಕಳೆದುಕೊಂಡಿದ್ದಾರೆ ಎಂದು ಇಡಿ ವಾದಿಸಿದೆ. ಈ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ..

ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ ಗೂಗಲ್‌ ಮೆಟಾಗೂ ನೋಟಿಸ್‌ ನೀಡಲಾಗಿದೆ. ಬೆಟ್ಟಿಂಗ್‌ ಆ್ಯಪ್‌ಗಳಿಗೆ ವೇದಿಕೆ ಮತ್ತು ಪ್ರಚಾರ ಕಲ್ಪಿಸಿದ ಗೂಗಲ್‌ ಮತ್ತು ಮೆಟಾ ಸಂಸ್ಥೆಗಳಿಗೆ ಜು.28ಕ್ಕೆ ಹಾಜರಾಗುವಂತೆ ಮತ್ತೊಮ್ಮೆ ಸಮನ್ಸ್‌ ಜಾರಿಗೊಳಿಸಲಾಗಿದೆ. ಹಲವು ಆನ್‌ಲೈನ್‌ ವೇದಿಕೆಗಳು ಅಕ್ರಮ ಬೆಟ್ಟಿಂಗ್‌ ಹಾಗೂ ಜೂಜಾಟದ ಆ್ಯಪ್‌ಗಳಿಗೆ ಜಾಹೀರಾತು, ಡೌನ್‌ಲೋಡ್‌ ಲಿಂಕ್‌ ಸೇರಿ ಹಲವು ಮಾರ್ಗಗಳಲ್ಲಿ ನೆರವು ಒದಗಿಸಿವೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಈ ಹಿನ್ನಲೆ ವಿಚಾರಣೆೆಗೆ ಹಾಜರಾಗುವಂತೆ ಹೇಳಲಾಗಿದೆ.

 

Kishor KV