ICUನಲ್ಲಿ ತಾಯಿ.. ENGಗೆ ಗಂಭೀರ್ – ತಂಡಕ್ಕಾಗಿ ಗೌತಮ್ ಅತಿದೊಡ್ಡ ತ್ಯಾಗ
ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರಾ ಕೋಚ್?

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದಾಗ್ಲೇ ಸಾಕಷ್ಟು ಪರ ವಿರೋಧಗಳಿದ್ವು. ಅದ್ರಲ್ಲೂ ಅವ್ರ ಕಂಡೀಷನ್ಸ್ ಮತ್ತು ರೂಲ್ಸ್ ಚರ್ಚೆಗೂ ಕಾರಣವಾಗಿತ್ತು. ಸೀನಿಯರ್ಸ್ಗೆ ಕೊಕ್ ಕೊಟ್ಟು ಯಂಗ್ಸ್ಟರ್ಸ್ಗೆ ಅವಕಾಶ ಕೊಟ್ಟಿದ್ದೇ ಕನ್ಫ್ಯೂಷನ್ಸ್ ಕ್ರಿಯೇಟ್ ಮಾಡಿತ್ತು. ಭಾರತ ತಂಡದ ಕೋಚ್ ಆದ್ಮೇಲೆ ಸಾಕಷ್ಟು ಏಳು ಬೀಳುಗಳನ್ನ ಕಂಡಿರೋ ಗಂಭಿರ್ ಪಾಲಿಗೆ ಇಂಗ್ಲೆಂಡ್ ಸರಣಿ ಮಸ್ಟ್ ವಿನ್ ಸರಣಿ ಆಗಿದೆ. ಶತಾಯ ಗತಾಯ ಭಾರತ ತಂಡವನ್ನ ಗೆಲ್ಲಿಸಿಕೊಂಡು ಬರಲೇಬೇಕಾದ ಒತ್ತಡದಲ್ಲಿದ್ದಾರೆ. ಇದೇ ಕಾರಣಕ್ಕೆ ಈಗ ತಮ್ಮ ತಾಯಿ ಐಸಿಯುನಲ್ಲಿದ್ರೂ ಬಿಟ್ಟು ಇಂಗ್ಲೆಂಡ್ ಗೆ ಹಾರಿದ್ದಾರೆ.
ಇದನ್ನೂ ಓದಿ : ENG ಪಿಚ್ INDಗೆ ಕಬ್ಬಿಣದ ಕಡಲೆ – KL, ಜೈಸ್ವಾಲ್, ಕರುಣ್ ಕಾಪಾಡ್ತಾರಾ?
ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಇಂಗ್ಲೆಂಡ್ ಪ್ರವಾಸದಲ್ಲಿದ್ದ ವೇಳೆ ತಮ್ಮ ತಾಯಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಭಾರತಕ್ಕೆ ವಾಪಸ್ಸಾಗಿದ್ರು. ಗಂಭೀರ್ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ತಂಡವನ್ನು ಮುಖ್ಯ ಕೋಚ್ ಆಗಿ ಮುನ್ನಡೆಸಬಹುದು ಎನ್ನಲಾಗಿತ್ತು. ಆದ್ರೀಗ ಸೋಮವಾರ ರಾತ್ರಿಯೇ ಗಂಭೀರ್ ಇಂಗ್ಲೆಂಡ್ ತೆರಳಿದ್ದಾರೆ. ಜೂನ್ 16 ರ ರಾತ್ರಿ ಭಾರತದಿಂದ ದುಬೈಗೆ ಹೋಗಿದ್ದು ನಂತರ ದುಬೈನಿಂದ ವಿಮಾನದ ಮೂಲಕ ಬರ್ಮಿಂಗ್ಹ್ಯಾಮ್ ತಲುಪಿದ್ದಾರೆ. ಭಾರತ ತಂಡದ ಇಂಟ್ರಾ-ಸ್ಕ್ವಾಡ್ ಪಂದ್ಯ ನಿಗದಿತ ಸಮಯಕ್ಕಿಂತ ಒಂದು ದಿನ ಮೊದಲು ಮುಗಿದಿದ್ದು, ಭಾರತ ತಂಡ ಜೂನ್ 16 ರಂದು ವಿಶ್ರಾಂತಿ ಪಡೆದಿದೆ. ಜೂನ್ 17 ರಂದು ಹೆಡಿಂಗ್ಲಿಗೆ ತೆರಳಲಿದ್ದು, ಅಲ್ಲಿ ಗೌತಮ್ ಗಂಭೀರ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇನ್ನು ಗೌತಮ್ ಗಂಭೀರ್ ಅವರ ತಾಯಿ ಸೀಮಾ ಗಂಭೀರ್ ಜೂನ್ 11 ರಂದು ಹೃದಯಾಘಾತಕ್ಕೊಳಗಾಗಿದ್ದರು. ಹೀಗಾಗಿ ಅವರನ್ನು ಕೂಡಲೇ ದೆಹಲಿಯ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಸುದ್ದಿ ಕೇಳಿದ ನಂತರ, ಗಂಭೀರ್ ತರಾತುರಿಯಲ್ಲಿ ಭಾರತಕ್ಕೆ ಮರಳಿದ್ದರು. ವರದಿಗಳ ಪ್ರಕಾರ, ಗಂಭೀರ್ ಅವರ ತಾಯಿ ಇನ್ನೂ ಐಸಿಯುನಲ್ಲಿದ್ದಾರೆ. ಆದರೆ ಇದರ ಹೊರತಾಗಿಯೂ, ಗಂಭೀರ್ ಇಂಗ್ಲೆಂಡ್ಗೆ ಮರಳಲು ನಿರ್ಧರಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20 ರಿಂದ ಪ್ರಾರಂಭವಾಗಲಿದೆ. ಟೀಂ ಇಂಡಿಯಾದ ಹೊಸ ಟೆಸ್ಟ್ ನಾಯಕ ಶುಭ್ಮನ್ ಗಿಲ್ ನೇತೃತ್ವದಲ್ಲಿ ಈ ಪ್ರಯಾಣವು ಹೆಡಿಂಗ್ಲಿಯಿಂದ ಪ್ರಾರಂಭವಾಗಲಿದೆ.
ಪ್ರಸ್ತುತ ಗಂಭೀರ್ ಅವರ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರೋದಾಗಿ ವೈದ್ಯರು ದೃಢ ಪಡಿಸಿದ್ದಾರೆ. ಚೇತರಿಸಿಕೊಳ್ಳುತ್ತಿದ್ದು, ಅಬ್ಸರ್ವೇಶನ್ಗಾಗಿ ಅವರನ್ನು ಐಸಿಯುನಲ್ಲಿ ಇರಿಸಲು ವೈದ್ಯರು ನಿರ್ಧರಿಸಿದ್ದಾರೆ. ಜೂನ್ 11 ರಂದು ಗಂಭೀರ್ ಅವರ ತಾಯಿಗೆ ಹೃದಯಾಘಾತವಾಯಿತು. ಸುದ್ದಿ ಕೇಳಿದ ಗಂಭೀರ್ ಮರುದಿನ ಭಾರತಕ್ಕೆ ಮರಳಿದ್ರು. ಇದೀಗ ಡಾಕ್ಟರ್ಸ್ ಸೀಮಾ ಅವ್ರ ಕಂಡೀಷನ್ ಔಟ್ ಆಫ್ ಡೇಂಜರ್ ಅಂತಾ ಭರವಸೆ ನೀಡಿದ ಮೇಲೆ ತಂಡವನ್ನ ಕೂಡಿಕೊಳ್ಳೋಕೆ ನಿರ್ಧಾರ ಮಾಡಿದ್ರು.