ಅಹಮದಾಬಾದ್ ವಿಮಾನ ದುರಂತ – ಏನೆಲ್ಲಾ ಮಾಹಿತಿ ಹೊರ ಬರುತ್ತೆ?

ಅಹಮದಾಬಾದ್ ವಿಮಾನ ದುರಂತ – ಏನೆಲ್ಲಾ ಮಾಹಿತಿ ಹೊರ ಬರುತ್ತೆ?

ಅಹಮದಾಬಾದ್  ವಿಮಾನ ನಿಲ್ದಾಣದ ಬಳಿ ಜೂನ್ 12ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ  241 ಮಂದಿ ಸಾವನ್ನಪ್ಪಿದ ಘಟನೆಯ ತನಿಖೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ  ನೇತೃತ್ವದ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಈ ಸಮಿತಿಯು ಪ್ರಮಾಣಿತ ಕಾರ್ಯವಿಧಾನಗಳು ಮತ್ತು ಇಂತಹ ಘಟನೆಗಳನ್ನು ತಡೆಗಟ್ಟಲು ಹಾಗೂ ನಿರ್ವಹಿಸಲು ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಪರಿಶೀಲಿಸಿ, ಭವಿಷ್ಯದಲ್ಲಿ ಇಂತಹ ಸಂದರ್ಭಗಳಿಗೆ ಸಮಗ್ರ ಮಾರ್ಗಸೂಚಿಗಳನ್ನು ಸೂಚಿಸಲಿದೆ.

ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ, ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿ 242 ಮಂದಿಯಿದ್ದರು, ಇವರಲ್ಲಿ 169 ಭಾರತೀಯರು, 53 ಬ್ರಿಟಿಷ್, 7 ಪೋರ್ಚುಗೀಸ್, ಮತ್ತು ಒಬ್ಬ ಕೆನಡಾದ ನಾಗರಿಕರಿದ್ದರು. ಭಾರತೀಯ ಮೂಲದ ಬ್ರಿಟಿಷ್ ನಾಗರಿಕ ವಿಶ್ವಾಸ್‌ಕುಮಾರ್ ರಮೇಶ್ ಒಬ್ಬರು ಮಾತ್ರ ಬದುಕುಳಿದಿದ್ದಾರೆ.

ಸಮಿತಿಯು ಮೂರು ತಿಂಗಳೊಳಗೆ ತನ್ನ ವರದಿಯನ್ನು ಪ್ರಕಟಿಸಲಿದೆ. “ವಿಮಾನ ಡೇಟಾ, ಕಾಕ್‌ಪಿಟ್ ಧ್ವನಿ ರೆಕಾರ್ಡರ್‌ಗಳು, ವಿಮಾನ ನಿರ್ವಹಣೆ ದಾಖಲೆಗಳು, ATC ಲಾಗ್, ಮತ್ತು ಸಾಕ್ಷಿಗಳ ಹೇಳಿಕೆಗಳಿಗೆ ಸಮಿತಿಗೆ ಪ್ರವೇಶವಿರುತ್ತದೆ” ಎಂದು ಸಚಿವಾಲಯ ಆದೇಶದಲ್ಲಿ ತಿಳಿಸಿದೆ. ಗೃಹ ಕಾರ್ಯದರ್ಶಿಯ ನೇತೃತ್ವದ ಈ ಸಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿ ಶ್ರೇಣಿಯ ಪ್ರತಿನಿಧಿಗಳಿರುತ್ತಾರೆ.

 

ಸಮಿತಿಯ ಸದಸ್ಯರಲ್ಲಿ ಗೃಹ ಸಚಿವಾಲಯದ ಕಾರ್ಯದರ್ಶಿ, ನಾಗರಿಕ ವಿಮಾನಯಾನ ಕಾರ್ಯದರ್ಶಿ, ಗುಜರಾತ್ ಗೃಹ ಇಲಾಖೆಯ ಪ್ರತಿನಿಧಿ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರತಿನಿಧಿ, ಅಹಮದಾಬಾದ್ ಪೊಲೀಸ್ ಆಯುಕ್ತ, ಭಾರತೀಯ ವಾಯುಸೇನೆಯ ತಪಾಸಣೆ ಮತ್ತು ಸುರಕ್ಷತೆಯ ಮಹಾನಿರ್ದೇಶಕ, ನಾಗರಿಕ ವಿಮಾನಯಾನ ಭದ್ರತೆಯ ಮಹಾನಿರ್ದೇಶಕ, ವಿಮಾನಯಾನ ನಿಯಂತ್ರಕ ಸಂಸ್ಥೆಯ ಮಹಾನಿರ್ದೇಶಕ, ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕ ಮತ್ತು ಫೊರೆನ್ಸಿಕ್ ವಿಜ್ಞಾನ ಸೇವೆಗಳ ನಿರ್ದೇಶಕರಿದ್ದಾರೆ.

Kishor KV

Leave a Reply

Your email address will not be published. Required fields are marked *