RCB ಗೆ 5 ವರ್ಷ ಬ್ಯಾನ್ ಶಿಕ್ಷೆ!? -1 ಕಪ್ಗೆ ಇಷ್ಟೊಂದು ಉರಿನಾ?

17 ವರ್ಷ.. ಸೋಲು.. ನಿರಾಸೆ.. ಈ ವರ್ಷ ಆದ್ರೂ ಕಪ್ ನಮ್ದು ಆಗಲಿ ಆನ್ನೋ ಆರ್ಸಿಬಿ ಅಭಿಮಾನಿಗಳ ಪಾರ್ಥನೆ.. ಕೊನೆಗೂ ಈ ಸುದೀರ್ಘ ಕಾಯುವಿಕೆ, ನೋವು ಈ ಸೀಸನ್ನಲ್ಲಿ ಅಂತ್ಯವಾಯ್ತು. ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ರಾಯಲ್ ಆಗೇ ಗೆದ್ದು ಬೀಗಿತು.. ಕಪ್ ಗೆಲ್ತಿದ್ದಂತೆ ಆಟಗಾರರ ಜೊತೆಗೆ ಅಭಿಮಾನಿಗಳು ಕೂಡ ಸಂಭ್ರಮಿಸಿದ್ರು.. ಆದ್ರೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ.. ಕನಸು ನನಸಾಗಿ 18 ಗಂಟೆಯೂ ಕಳೆದಿರ್ಲಿಲ್ಲ.. ಘೋರ ದುರಂತ ನಡೆದು ಬಿಡ್ತು.. ಅಮಾಯಕ ಜೀವ ಬಲಿ ಪಡೆದ ವ್ಯವಸ್ಥೆಯ ಮೇಲೆ ಆಕ್ರೋಶ ಭುಗಿಲೆದ್ದಿದೆ. ಈ ಸಾವು ನೋವುಗಳ ಹೊಣೆ ಯಾರು ಅನ್ನೋ ಚರ್ಚೆ ಜೊತೆಗೆ ಈಗ ಆರ್ಬಿಯನ್ನೇ ಬ್ಯಾನ್ ಮಾಡಿ ಅನ್ನೋ ಕೂಗು ಕೂಡ ಕೇಳಿ ಬರ್ತಿದೆ.
ಇದನ್ನೂ ಓದಿ: ಕೊಹ್ಲಿ ಕಣ್ಣೀರಿಗೆ ಬೆಲೆಯೇ ಇಲ್ವಾ? – ಮಾತಿಗಷ್ಟೆ ಬೆಂಗಳೂರಿನ ಮೇಲೆ ಪ್ರೀತಿನಾ?
ಜೂನ್ 3 ಮಂಗಳವಾರ ರಾತ್ರಿ ಆರ್ಸಿಬಿ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಿತ್ತು. ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿತ್ತು.. ಆದ್ರೆ ಈಗ ಕಂಪ್ಲೀಟ್ ಚಿತ್ರಣ ಬದಲಾಗಿದೆ.. ಗೆದ್ದು ಖುಷಿಗಿಂತ ಆ 11 ಅಮಾಯಕ ಜೀವಗಳೇ ಕಣ್ಣ ಮುಂದೆ ಬರುತ್ತೆ.. ಆರ್ಸಿಬಿ ಅಭಿಮಾನಿಗಳ ಪ್ರಾರ್ಥನೆಗೆ ದೇವರು ಕೃಪೆ ತೋರಿದ ಅಂತಾ ಧನ್ಯವಾದ ಹೇಳಬೇಕೋ? ಅಥವಾ ಸಂಭ್ರಮವನ್ನ ಅಷ್ಟೇ ವೇಗವಾಗಿ ಕಿತ್ತುಕೊಂಡ ಎಂದು ಶಪಸಿಬೇಕೋ? ಒಂದೂ ಗೊತ್ತಾಗ್ತಿಲ್ಲ. 11 ಜನ ಅಮಾಯಕ ಫ್ಯಾನ್ಸ್ ಸಾವಿಗೆ ಕಾರಣ ಯಾರು? ಹಲವರು ಗಾಯ ಮಾಡಿಕೊಂಡು ನೋವಲ್ಲಿ ನರಳಾಡ್ತಿದ್ದಾರಲ್ಲಾ ಇದಕ್ಕೆ ಹೊಣೆ ಯಾರು? ಅನ್ನೋ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡ್ತಿದೆ.. ಈಗಾಗಲೇ ಈ ಕೇಸ್ಗೆ ಸಂಬಂಧಿಸಿ ಕೆಲವರನ್ನ ಅರೆಸ್ಟ್ ಕೂಡ ಮಾಡಲಾಗಿದೆ.. ಅಧಿಕಾರಿಗಳ ತಲೆದಂಡ ಕೂಡ ಆಗಿದೆ. ಇದೀಗ ಕ್ರಿಕೆಟ್ ಫ್ಯಾನ್ಸ್ ಆರ್ಸಿಬಿ ಟೀಮ್.. ಆಟಗಾರರ ಮೇಲೆ ಕೂಡ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.. ವಿರಾಟ್ ಕೊಹ್ಲಿ ಅರೆಸ್ಟ್ ಎಂದು ಹ್ಯಾಶ್ ಟ್ಯಾಗ್ ಟ್ರೆಂಡ್ ಶುರು ಮಾಡಿದ್ರು.. ಇದೀಗ ಆರ್ಸಿಬಿ ಟೀಮ್ ಬ್ಯಾನ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಶುರುವಾಗಿದೆ.
ಹೌದು… 11 ಜನ ಅಮಾಯಕ ಅಭಿಮಾನಿಗಳು ಪ್ರಾಣ ಕಳ್ಕೊಂಡಿದ್ದು ಈಗ ಆರ್ಸಿಬಿ ಟೀಮ್ ಹಾಗೇ ಮ್ಯಾನೆಜ್ಮೆಂಟ್ಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.. ಬಿಸಿಸಿಐ ಕೂಡ ಸರ್ಕಾರ, ಆಯೋಜಕರು, ಫ್ರಾಂಚೈಸಿ ಹಾಗೂ KSCR ಬೇಜವಾಬ್ದಾರಿ ತನದಿಂದ ಸಾವು ನೋವು ಉಂಟಾಗಿದೆ ಅಂತಾ ಅಸಮಧಾನ ವ್ಯಕ್ತಪಡಿಸಿದೆ. ಇದ್ರ ಬೆನ್ನಲ್ಲೇ ಆರ್ಸಿಬಿ ಟೀಮ್ ನ ಬ್ಯಾನ್ ಮಾಡ್ಬೇಕು ಅಂತ ಬೇರೆ ಟೀಮ್ ಫ್ಯಾನ್ಸ್ ಒತ್ತಾಯಿಸ್ತಿದ್ದಾರೆ. ಅದ್ರಲ್ಲೂ ಆರ್ಸಿಬಿಯ ಕಟ್ಟ ವಿರೋಧಿಗಳಾದ ಸಿಎಸ್ಕೆ ಮತ್ತು ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಇದೇ ಅವಕಾಶವನ್ನ ಬಳಸಿಕೊಂಡು ಆರ್ಸಿಬಿಯನ್ನ ಬ್ಯಾನ್ ಮಾಡ್ಬೇಕು ಅಂತಾ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುಮಾಡಿದ್ದಾರೆ.
ಆರ್ಸಿಬಿ ಕಳೆದ 18 ವರ್ಷಗಳಿಂದ ನಿಷ್ಠಾವಂತ ಫ್ಯಾನ್ಸ್ನ ಸಂಪಾದಿಸಿದೆ. ಟೀಮ್ ಕೂಡ ತಂಡದ 12ನೇ ಸ್ಥಾನವನ್ನ ಫ್ಯಾನ್ಸ್ಗೆ ನೀಡಿದೆ. ಆದ್ರೆ ಆರ್ಸಿಬಿ ಟೀಮ್ ಹಾಗೇ ಫ್ಯಾನ್ಸ್ನ ಕಂಡ್ರೆ ಆಗದೇ ಇರುವ ಶತ್ರುಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಅದರಲ್ಲೂ ಚೆನ್ನೈ & ಮುಂಬೈ ತಂಡದ ಅಭಿಮಾನಿಗಳಿಗೆ ಆರ್ಸಿಬಿ ತಂಡವನ್ನ ಕಂಡರೆ ಆಗೋದೇ ಇಲ್ಲ ಅನ್ನೋ ತರ ಆಡೋದು ಎಲ್ಲರಿಗೂ ಗೊತ್ತಿದೆ.. ಆರ್ಸಿಬಿ ಸೋತಾಗ ಎಲ್ಲರಿಗಿಂತ ಹೆಚ್ಚು ಸಂಭ್ರಮಿಸೋದು ಇದೇ ಎರಡು ಟೀಮ್ ನ ಫ್ಯಾನ್ಸ್. ಇದೀಗ ಆರ್ಸಿಬಿ ಚೊಚ್ಚಲ ಕಪ್ ಗೆದ್ದಿದೆ. ಆದ್ರೆ ಸಂಭ್ರಮಾಚರಣೆ ವೇಳೆ ನಡೆದ ದುರಂತ ಟೀಮ್ ಹಾಗೇ ಮ್ಯಾನೇಜ್ಮೆಂಟ್ಗೆ ಕಪ್ಪು ಚುಕ್ಕೆಯಾಗಿದೆ. ಇಂತಹ ಸಮಯದಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ 11 ಆರ್ಸಿಬಿ ಅಭಿಮಾನಿಗಳು ಜೀವ ಬಿಟ್ಟಿರುವ ವಿಚಾರವನ್ನು ಮುಂದಿಟ್ಟುಕೊಂಡು, 5 ವರ್ಷ ಆರ್ಸಿಬಿ ಬೆಂಗಳೂರು ತಂಡವನ್ನು ಬ್ಯಾನ್ ಮಾಡುವಂತೆ ಬಿಸಿಸಿಐಗೆ ಆಗ್ರಹ ಮಾಡುತ್ತಿದ್ದಾರೆ. ಆದ್ರೆ ಈ ಅಬಿಯಾನಕ್ಕೆ ಆರ್ಸಿಬಿ ಫ್ಯಾನ್ಸ್ ಕೂಡ ಕೌಂಟರ್ ಕೊಡ್ತಿದ್ದಾರೆ.. ಆರ್ಸಿಬಿ ಕಪ್ ಗೆದ್ದಿರುವುದು ಶತ್ರುಗಳಿಗೆ ತಡ್ಕೊಳ್ಲಿಕ್ಕೆ ಆಗುತ್ತಿಲ್ಲ. ಅದರಲ್ಲೂ ಈ ವಿಚಾರ ಸಹಿಸಿಕೊಳ್ಳಲು ಆಗದೆ ಚೆನ್ನೈ & ಮುಂಬೈ ಸೇರಿದಂತೆ ಹಲವು ತಂಡಗಳ ಅಭಿಮಾನಿಗಳು ಮತ್ತು ಬೆಂಬಲಿಗರು ನಿದ್ದೆ ಮಾಡಿಲ್ಲ.. ಈ ಉರಿನಾ ತಡೆದುಕೊಳ್ಳಲು ಇವ್ರಿಗೆ ಆಗ್ತಿಲ್ಲ ಆರ್ಸಿಬಿ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ.
ಆದ್ರೆ ಒಂದಂತೂ ಸತ್ಯ.. ಅಭಿಮಾನಕ್ಕೆ ಮಿತಿಯಿಲ್ಲ ಎಂದು ಹೆಸರು ಪಡೆದಿದ್ದ ಆರ್ಸಿಬಿ ಅಭಿಮಾನಿಗಳಿಗೆ ಅದೇ ಅಭಿಮಾನ ಕುತ್ತು ತಂದಿಟ್ಟಿದೆ. ಆರ್ಸಿಬಿ ಸಂಭ್ರಮಾಚರಣೆಯು 11 ಮಂದಿಯನ್ನು ಬಾರದ ಲೋಕಕ್ಕೆ ಕಳುಹಿಸಿದೆ. ಇದು ಆರ್ಸಿಬಿ ಮೇಲಿನ ಅಭಿಮಾನವೋ? ಸರ್ಕಾರದ ಭದ್ರತಾ ವೈಫಲ್ಯವೋ? ಕ್ರಿಕೆಟ್ ಸಂಸ್ಥೆಯ ತರಾತುರಿಯೋ? ಎಂದು ಇತ್ಯರ್ಥ ಮಾಡುವಷ್ಟರಲ್ಲಿ ವಿಧಿಯಾಟ ಹಲವರ ಮನೆಗಳನ್ನು ಶೋಕದಲ್ಲಿ ಮುಳುಗಿಸಿದೆ. ಈ ದುರಂತರ ಬಳಿಕ ಅಭಿಮಾನ ಇರ್ಬೇಕು.. ಆದ್ರೆ ಅಂಧಾಭಿಮಾನ ಇರ್ಬಾರ್ದು.. ಅಭಿಮಾನವೇ ದುರಂತಕ್ಕೆ ಎಡೆಮಾಡಿಕೊರ್ಬಾದು ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಲೇ ಬೇಕು.. ಆದ್ರೆ ಇಡೀ ತಂಡವನ್ನ ಐಪಿಎಲ್ನಿಂದ ಬ್ಯಾನ್ ಮಾಡ್ಬೇಕು ಅನ್ನೋದು ಎಷ್ಟು ಸರಿ ಅನ್ನೋ ಪ್ರಶ್ನೆ ಕೂಡ ಅನೇಕರನ್ನ ಕಾಡ್ತಿದೆ.