ಅಸ್ಸಾಂನಲ್ಲಿ ಮಳೆಯ ರುದ್ರ ನರ್ತನ – ಉಕ್ಕಿ ಹರಿಯುತ್ತಿರೋ ನದಿಗಳು

ಅಸ್ಸಾಂನಲ್ಲಿ ಮಳೆಯ ರುದ್ರ ನರ್ತನ – ಉಕ್ಕಿ ಹರಿಯುತ್ತಿರೋ ನದಿಗಳು

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.  ಗುವಾಹಟಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಹವಾಮಾನ ಕೇಂದ್ರ ಅಸ್ಸಾಂನ ಹೆಚ್ಚಿನ ಸ್ಥಳಗಳಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ, ಆದರೆ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕಚರ್ ಮತ್ತು ಶ್ರೀಭೂಮಿ ಜಿಲ್ಲೆಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 15 ಜಿಲ್ಲೆಗಳಲ್ಲಿ ಸುಮಾರು ನಾಲ್ಕು ಲಕ್ಷ ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ ಎಂದು ಮಾಹಿತಿ ನೀಡಿದೆ.

ಈ ವರ್ಷದ ಪ್ರವಾಹ ಮತ್ತು ಭೂಕುಸಿತದಲ್ಲಿ ಒಟ್ಟು ಜೀವ ಕಳೆದುಕೊಂಡವರ ಸಂಖ್ಯೆ 10 ಕ್ಕೆ ಏರಿದೆ. ಕಚರ್ ಅತ್ಯಂತ ಹಾನಿಗೊಳಗಾದ ಪ್ರದೇಶವಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ, ನಂತರ ಶ್ರೀಭೂಮಿಯಲ್ಲಿ 85,000 ಜನರು ಮತ್ತು ನಾಗಾಂವ್‌ನಲ್ಲಿ 62,000 ಜನರು ಬಾಧಿತರಾಗಿದ್ದಾರೆ ಎಂದು ತಿಳಿಸಿದೆ.

ಬ್ರಹ್ಮಪುತ್ರ ಮತ್ತು ಬರಾಕ್ ಸೇರಿದಂತೆ 10 ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ತೀವ್ರ ಪ್ರವಾಹ ಸ್ಥಿತಿ ಕುರಿತು ಕೇಂದ್ರ ಜಲ ಆಯೋಗ  ಎಚ್ಚರಿಕೆ ನೀಡಿದೆ.ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಈಶಾನ್ಯ ರೈಲ್ವೆ ವಕ್ತಾರರು ತಿಳಿಸಿದ್ದಾರೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗಿದೆ.

12 ಜಿಲ್ಲೆಗಳಲ್ಲಿ 155 ಪರಿಹಾರ ಶಿಬಿರಗಳು ಮತ್ತು ಪರಿಹಾರ ವಿತರಣಾ ಕೇಂದ್ರಗಳನ್ನು ನಿರ್ವಹಿಸುತ್ತಿದ್ದು, ಪ್ರಸ್ತುತ 10,272 ಸ್ಥಳಾಂತರಗೊಳಿಸಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದ ಪ್ರವಾಹ ಪೀಡಿತರಿಗೆ ಅಧಿಕಾರಿಗಳು 1,090.08 ಕ್ವಿಂಟಾಲ್ ಅಕ್ಕಿ, 284.63 ಕ್ವಿಂಟಾಲ್ ಬೇಳೆ, 952.76 ಕ್ವಿಂಟಾಲ್ ಉಪ್ಪು ಮತ್ತು 4,726.26 ಲೀಟರ್ ಸಾಸಿವೆ ಎಣ್ಣೆಯನ್ನು ವಿತರಿಸಿದ್ದಾರೆ. ಪ್ರಸ್ತುತ, ಅಸ್ಸಾಂನಾದ್ಯಂತ 764 ಗ್ರಾಮಗಳು ನೀರಿನಲ್ಲಿ ಮುಳುಗಿದ್ದು, 3,524.38 ಹೆಕ್ಟೇರ್ ಬೆಳೆ ಪ್ರದೇಶಗಳು ಹಾನಿಗೊಳಗಾಗಿವೆ ಎಂದು ASDMA ತಿಳಿಸಿದೆ.

Kishor KV

Leave a Reply

Your email address will not be published. Required fields are marked *