ಸರಿಗಮಪ ಫಿನಾಲೆ ಮುನ್ನವೇ ಕಾಂಟ್ರವರ್ಸಿ.. ಬೆಳಗುಂದಿ ವಿನ್ನರ್‌ ಆಗ್ಬಾರ್ದಾ? – 6 ಜನ.. ವಿನ್ನರ್‌ ಇವರೇ?

ಸರಿಗಮಪ ಫಿನಾಲೆ ಮುನ್ನವೇ ಕಾಂಟ್ರವರ್ಸಿ.. ಬೆಳಗುಂದಿ ವಿನ್ನರ್‌ ಆಗ್ಬಾರ್ದಾ? – 6 ಜನ.. ವಿನ್ನರ್‌ ಇವರೇ?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಸೀಸನ್‌ 21 ಈಗ ಫಿನಾಲೆ ಹಂತಕ್ಕೆ ಬಂದಿದೆ. ಸ್ಪರ್ಧಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಮೊನ್ನೆಯಷ್ಟೇ ಟಿಕೆಟ್‌ ಟು ಫಿನಾಲೆ ರೌಂಡ್‌ನಲ್ಲಿ ಆರು ಜನ ಸ್ಪರ್ಧಿಗಳು ಸೆಲೆಕ್ಟ್‌ ಆಗಿದ್ರು. ಇದೀಗ ಇವರಲ್ಲಿ ಸರಿಗಮಪ ಕಿರೀಟ ಯಾರ ಮುಡಿಗೇರಲಿದೆ ಅನ್ನೋ ಕ್ಯೂರಿಯಾಸಿಟಿ ಇದೆ. ಆದ್ರೆ ಇವೆಲ್ಲದ್ರ ನಡುವೆ ಈಗ ಶೋ ವಿರುದ್ಧ ವೀಕ್ಷಕರು ಗರಂ ಆಗಿದ್ದಾರೆ. ಯಾವುದೇ ಕಾರಣಕ್ಕೂ ಬಾಳುಬೆಳಗುಂದಿ ವಿನ್‌ ಆಗ್ಬಾರ್ದು ಅಂತಾ ಕೆಲ ವೀಕ್ಷಕರು ಹೇಳ್ತಿದ್ದಾರೆ.

ಜೀ ಕನ್ನಡದ ಸರಿಗಮಪ ಶೋ ಈಗ 21ನೇ ಸೀಸನ್‌ ನಡಿತಾ ಇದೆ. ಈ ಕಾರ್ಯಕ್ರಮದ ಮೂಲಕ ಸಾಕಷ್ಟು ಯುವ ಗಾಯಕರು ಹಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಶೋನಲ್ಲಿ ಒಮ್ಮೆಯಾದ್ರೂ ಭಾಗವಹಿಸ್ಬೇಕು ಅನ್ನೋದು ಹಾಡುಗಾರರ ಆಸೆ ಆಗಿರುತ್ತೆ. ಹೀಗಾಗಿ ಕರ್ನಾಟಕ ಮಾತ್ರವಲ್ಲದೇ, ಬೇರೆ ರಾಜ್ಯದಿಂದಲೂ ಬಂದು ಗಾಯಕರು ಭಾಗವಹಿಸ್ತಾರೆ. ಈಗಾಗಲೇ ಸರಿಗಮಪ ವೇದಿಕೆಯಲ್ಲಿ ಪ್ರತಿಭಾವಂತ ಕಲಾವಿದರು ಬೆಳಕಿಗೆ ಬಂದಿದ್ದಾರೆ. ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಇದೀಗ ಸರಿಗಮಪ ಕನ್ನಡಿಗರ ಮನಸ್ಸು & ಹೃದಯ ಎರಡವನ್ನೂ ಗೆದ್ದು ಬೀಗಿದೆ. ಆದ್ರೀಗ ಈ ಸೀಸನ್‌ 21 ರಲ್ಲಿ ಶೋ ವಿರುದ್ಧ ವೀಕ್ಷಕರು ಅಪಸ್ವರ ಎತ್ತಿದ್ದಾರೆ. ಶೋನಲ್ಲಿ ಫೇವರಿಸಂ ನಡಿತಾ ಇದೆ. ಈ ಶೋನಲ್ಲಿ ವೈರಲ್‌ ಸ್ಟಾರ್‌ಗಳಿಗಾಗಿ ಮಾತ್ರನಾ ಈ ಶೋ ಇರೋದು ಅಂತಾ ಕೇಳ್ತಿದ್ದಾರೆ.

ಹೌದು, ಸರಿಗಮಪ ಶೋನ ಪ್ರತಿ ಸೀಸನ್‌ನಲ್ಲಿ ಎಲೆಮರೆ ಕಾಯಿಯಂತಿದ್ದ ಗಾಯಕರನ್ನ ವೇದಿಕೆಗೆ ಕರೆತರಲಾಗುತ್ತೆ. ಹಳ್ಳಿಯಿಂದ ಬಂದ ಅದೆಷ್ಟೋ ಪ್ರತಿಭೆಗಳು ಈಗಾಗಲೇ ಕ್ಲಿಕ್‌ ಆಗಿದ್ದಾರೆ. ಸೀಸನ್‌ 15 ರ ರನ್ನರ್‌ ಅಪ್ ಕುರಿಗಾಹಿ ಹನುಮಂತ ಲವಾಣಿ .. ಸೀಸನ್‌ 20 ರ ರನ್ನರ್‌ ಕುರಿಗಾಹಿ ರಮೇಶ್‌ ಲಂಬಾಣಿ ಇದಕ್ಕೆ ಸಾಕ್ಷಿ. ಈ ಸೀಸನ್‌ನಲ್ಲೂ ದ್ಯಾಮೇಶ್‌ ಕಾರಟಗಿ, ಬಾಳು ಬೆಳಗುಂದಿ ಈ ಸೀಸನ್‌ನಲ್ಲಿ ಚಾನ್ಸ್‌ ಕೊಡಲಾಗಿದೆ.  ದ್ಯಾಮೇಶ್‌ ಹೂ ಮಾರುತ್ತಾ ಜೀವನ ಮಾಡ್ತಾ ಬಂದಿದ್ರು. ಸಂಗೀತ ಕಲಿತಿಲ್ಲ ಅಂದ್ರೂ ಅದ್ಭುತವಾಗೇ ಹಾಡು ಹಾಡ್ತಿದ್ದಾರೆ. ದ್ಯಾಮೇಶ್‌ ವಾಯ್ಸ್‌ ಕೂಡ ಎಲ್ಲಾ ಹಾಡಿಗೂ ಸೂಟ್‌ ಆಗ್ತಿದೆ. ದ್ಯಾಮೇಶ್‌ ಫಿನಾಲೆಗೆ ಎಂಟ್ರಿ ಕೊಡಲು ಅರ್ಹರು ಅಂತಾ ಅನೇಕರು ಹೇಳ್ತಿದ್ದಾರೆ.

ಇನ್ನು ಬಾಳುಬೆಳಗುಂದಿ ಜಾನಪದ ಗಾಯಕ. ಕ್ಷಣಮಾತ್ರದಲ್ಲಿ ಹಾಡನ್ನು ರೆಡಿ ಮಾಡಿ ಹಾಡೋ ಅದ್ಭುತ ಗಾಯಕ. ಈ ಶೋಗೆ ಬರೋದಿಕ್ಕೂ ಮುನ್ನವೇ ಬೆಳಗುಂದಿಗೆ ಫುಲ್‌ ಫೇಮಸ್‌. ಇದೀಗ ಈ ಶೋಗೆ ಬಂದ್ಮೇಲಂತೂ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ ಅತೀ ಹೆಚ್ಚು ವೋಟ್‌ ಪಡ್ಕೊಳ್ಳೋ ಮೂಲಕ ಬಾಳು ಬೆಳಗುಂದಿಗೆ ಸರಿಗಮಪ ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಆದ್ರೀಗ ಬಾಳು ಬೆಳಗುಂದಿ ವಿರುದ್ಧ ಕೆಲ ವೀಕ್ಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಬಾಳು ಬೆಳಗುಂದಿ ಸಂಗೀತ ಕ್ಲಾಸ್‌ ಗೆ ಹೋಗಿಲ್ಲ.. ಬೇರೆ ಸ್ಪರ್ಧಿಗಳಿಗೆ ಹೋಲಿಸಿದ್ರೆ ಬೆಳಗುಂದಿ ಧ್ವನಿ ಇಂಪಾಗಿಲ್ಲ. ಜಾನಪದ ಹಾಡುಗಳಿಗೆ ಮಾತ್ರ ವಾಯ್ಸ್‌ ಮ್ಯಾಚ್‌ ಆಗುತ್ತೆ. ಅದ್ರೆ ಬೇರೆ ಸಾಂಗ್‌ ಹಾಡಿದ್ರೆ ಕಿರುಚಿದ ಹಾಗೇ ಕೇಳಿಸುತ್ತೆ. ಅದ್ಹೇಗೆ ಇವ್ರನ್ನ ಫೈನಲ್‌ಗೆ ಸೆಲೆಕ್ಟ್‌ ಮಾಡಿದ್ರಿ? ಜಡ್ಜಸ್‌ಗೆ ಯಾರು ಚೆನ್ನಾಗಿ ಹಾಡ್ತಾರೆ ಅಂತಾ ಗೊತ್ತಾಗಲ್ವಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

ಒಂದು ಸ್ಪರ್ಧೆಯಲ್ಲಿ ತೀರ್ಪುಗಾರರು ಇದ್ದೂ ಜನರ ವೋಟ್ ಯಾಕೆ ಬೇಕು? ಜನರ ವೋಟ್ ಮೇಲೆ ನಿರ್ಧಾರ ಆಗೋ ಹಾಗಿದ್ರೆ ಪ್ರತಿಭೆ ಯಾಕೆ, ತೀರ್ಪುಗಾರರು ಯಾಕೆ?. ಲಹರಿ, ಕಾರ್ತಿಕ್, ಸುದೀಕ್ಷಾ ಮೂವರಿಗೂ ನಿಜಕ್ಕೂ ಮೋಸ ಆಗಿದೆ. ಅರ್ಹರಿಗೆ ಫೈನಲ್ ಆಯ್ಕೆಯಿಲ್ಲ. ಫಿನಾಲೆಯಲ್ಲಿ ಬಾಳುಬೆಳಗುಂದಿಯನ್ನೇ ವಿನ್ನರ್‌ ಮಾಡಿದ್ರೂ ಆಶ್ಚರ್ಯ ಪಡ್ಬೇಕಾಗಿಲ್ಲ. ಒಟ್ಟಾರೆ ಪ್ರತಿಭೆ ಸೋತಿತು ಅಷ್ಟೆ. ಅದೂ ಸಹ ಅಂತಹ ಪ್ರತಿಭಾವಂತ ಜಡ್ಜ್ ಗಳಿದ್ದೂ ಸಹ. TRP ಬರುತ್ತೆ ಅಂತಾ ನಿಜವಾದ ಪ್ರತಿಭೆಗಳಿಗೆ ಮೋಸ ಮಾಡ್ಬೋದಾ? ಅಂತಾ ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ತುಂಬಾ ಜನ ಸಂಗೀತ ಕ್ಲಾಸ್‌ಗೆ ಹೋಗಿ ಈ ವಿದ್ಯೆನಾ ಕಲ್ತು, ಈ ಹಂತಕ್ಕೆ ಬಂದಿರ್ತಾರೆ. ಕಲೆಗೆ ಹಾಗೂ ಸಂಗೀತ ಜ್ಞಾನ ಇರುವವರಿಗೆ ಮೋಸ ಮಾಡಬೇಡಿ. ಸಂಗೀತ ಗೊತ್ತಿಲ್ಲದವರಿಗೆ ಬಹುಮಾನ ಕೊಟ್ಟು ಆತ್ಮ ವಂಚನೆ ಮತ್ತು ದ್ರೋಹ ಮಾಡಬೇಡಿ ಎಂದು ಕಾಮೆಂಟ್‌ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *