RCB Vs PBKS.. ಪ್ಲಸ್ & ಮೈನಸ್ – ಟಾಸ್ ಗೆದ್ದವ್ರಿಗೇನಾ ಚಿನ್ನಸ್ವಾಮಿ ಗೆಲುವು?

ಪಂಜಾಬ್ ಟೀಂ ಈ ಸಲ ಸಾಲಿಡ್ ಆಗಿದೆ. ಏಪ್ರಿಲ್ 12ರಂದು ಹೈದ್ರಾಬಾದ್ ವಿರುದ್ಧ 245 ರನ್ ಹೊಡೆದ್ರೂ ಅದನ್ನ ಡಿಫೆನ್ಸ್ ಮಾಡಿಕೊಳ್ಳೋಕೆ ಆಗಿರಲಿಲ್ಲ. ಇನ್ನೂ 9 ಬಾಲ್ ಇರುವಾಗ್ಲೇ ಸೋತಿದ್ರು. ಆದ್ರೀಗ ಅದೇ ಪಂಜಾಬ್ ಬರೀ 111 ರನ್ ಸ್ಕೋರ್ ಮಾಡಿ ಅದನ್ನ ಡಿಫೆನ್ಸ್ ಮಾಡ್ಕೊಂಡಿದ್ದಾರೆ. ಅದೂ ಹೆಂಗೆ ಚಾಂಪಿಯನ್ ಟೀಂ ಕೆಕೆಆರ್ನ ಜಸ್ಟ್ 95 ರನ್ಗಳಿಗೆ ಆಲೌಟ್ ಮಾಡೋ ಮೂಲಕ. ಸೋ ಪಂಜಾಬ್ನಲ್ಲಿ ಬ್ಯಾಟಿಂಗ್ ಮಾಡೋಕೂ ಬರುತ್ತೆ. ಕಡಿಮೆ ಸ್ಕೋರ್ನ ಡಿಫೆನ್ಸ್ ಮಾಡಿಕೊಳ್ಳೋಕೂ ಆಗುತ್ತೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಅದೇ ಕಾನ್ಫಿಡೆನ್ಸ್ನಲ್ಲೇ ಆರ್ಸಿಬಿ ವಿರುದ್ಧ ಕಣಕ್ಕಿಳಿಯೋಕೆ ಕಾಯ್ತಿದ್ದಾರೆ. ಸೋ ಪಂಜಾಬ್ನ ಕಟ್ಟಿ ಹಾಕ್ಬೇಕು ಅಂದ್ರೆ ರೆಡ್ ಆರ್ಮಿಯಲ್ಲಿ ಒಂದಷ್ಟು ತಪ್ಪುಗಳನ್ನ ತಿದ್ದಿಕೊಳ್ಬೇಕು.
ಇದನ್ನೂ ಓದಿ : ಚಹಲ್ ಚಮತ್ಕಾರ – ಪಂಜಾಬ್ಗೆ ರೋಚಕ 16 ರನ್ಗಳ ಜಯ
ಯೆಸ್. ಫಸ್ಟ್ ಬ್ಯಾಟಿಂಗ್ ಇರ್ಲಿ ಅಥವಾ ಚೇಸಿಂಜ್ ಇರ್ಲಿ ಒಂದು ಮ್ಯಾಚಲ್ಲಿ ಮ್ಯಾಟ್ರ್ ಆಗೋದೇ ಓಪನಿಂಗ್ ಬ್ಯಾಟರ್ಸ್ ಹಾಗೇ ಪವರ್ ಪ್ಲೇ ಸ್ಕೋರ್. ಪವರ್ ಪ್ಲೇನಲ್ಲಿ ಯಾವುದೇ ವಿಕೆಟ್ ಬೀಳದೆ 80+ ರನ್ಸ್ ಬಂತಂದ್ರೆ ನೆಕ್ಸ್ಟ್ ಬರೋ ಬ್ಯಾಟರ್ಸ್ಗೆ ಕಂಟಿನ್ಯೂ ಮಾಡೋದು ಈಸಿ ಆಗುತ್ತೆ. ಹಾಗೇ ಫ್ರೆಶರ್ ಇರೋದಿಲ್ಲ. ಚಿನ್ನಸ್ವಾಮಿ ಮೈದಾನದಲ್ಲಿ ಈ ಕೆಲ್ಸವನ್ನ ಮಾಡ್ಬೇಕಿರೋದು ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ. ಈ ಜೋಡಿ ತವರಿನ ಹೊರಗೆ ಬೌಲರ್ಗಳನ್ನ ಚೆಂಡಾಡಿದ್ದಾರೆ. ಕೊಲ್ಕತ್ತಾ, ರಾಜಸ್ಥಾನದಲ್ಲಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಬ್ಯಾಟ್ನಿಂದ ಅರ್ಧಶತಕಗಳು ಸಿಡಿದಿವೆ. ಜೊತೆಗೆ ದೇವದತ್ ಪಡಿಕ್ಕಲ್, ರಜತ್ ಪಟಿದಾರ್ ಅದೇ ಫಾರ್ಮ್ನಲ್ಲೇ ಕಂಟಿನ್ಯೂ ಮಾಡ್ಬೇಕು. ಬಟ್ ವಿಪರ್ಯಾಸ ಅಂದ್ರೆ ಇವ್ರೆಲ್ಲಾ ಹೊರಗಿನ ಪಿಚ್ನಲ್ಲಿ ಪರ್ಫಾಮ್ ಮಾಡ್ತಿದ್ರೂ ಬೆಂಗಳೂರಲ್ಲಿ ಎಡವುತ್ತಿದ್ದಾರೆ. ಆರಂಭದಲ್ಲೇ ಎರಡು ವಿಕೆಟ್ ಬಿದ್ರೆ ನೆಕ್ಸ್ಟ್ ಬಂದವ್ರೆಲ್ಲಾ ಪರದಾಡ್ತಿದ್ದಾರೆ. ಸೋ ಚಿನ್ನಸ್ವಾಮಿಯಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ರೆ 200+ ಸ್ಕೋರ್ ಮಾಡ್ಲೇಬೇಕಾಗುತ್ತೆ.
ಆರ್ಸಿಬಿ ಮೇನ್ ಎಡವುತ್ತಾ ಇರೋದೇ ಯಂಗ್ಸ್ಟರ್ಸ್ಗೆ ಅವಕಾಶ ಕೊಡದೆ. ಲಿಯಾಮ್ ಲಿವಿಂಗ್ಸ್ಟನ್ ಒಂದು ಮ್ಯಾಚಲ್ಲಿ ಅರ್ಧಶತಕ ಸಿಡಿಸಿದ್ದು ಬಿಟ್ರೆ ಮತ್ತೆಲ್ಲೂ ಉತ್ತಮ ಪ್ರದರ್ಶನ ನೀಡಿಲ್ಲ. ಸೋ ಇವ್ರ ಬದ್ಲಿಗೆ ಜೇಕಬ್ ಬೆಥೆಲ್ ಅಥವಾ ರೊಮಾರಿಯೋ ಶೆಫರ್ಡ್ಗೆ ಚಾನ್ಸ್ ಕೊಡ್ಬೇದು. ಹಾಗೇ ಒಂದು ಪಂದ್ಯದಲ್ಲಾದ್ರೂ ಪಡಿಕ್ಕಲ್ನ ಹೊರಗಿಟ್ಟು ಕನ್ನಡಿಗ ಮನೋಜ್ ಬಾಂಡಗೆಗೆ ಅವಕಾಶ ನೀಡೋದು ಒಂದು ರೀತಿ ಬೆಸ್ಟ್ ಚಾಯ್ಸ್. ಬಿಗ್ ಹಿಟ್ಟರ್ ಆಗಿರುವ ಮನೋಜ್ಗೆ ಸಿಕ್ಸರ್ಗಳನ್ನು ಸಿಡಿಸೋ ತಾಕತ್ತಿದೆ. ಬ್ಯಾಟಿಂಗ್ನಲ್ಲಿ ಗೇಮ್ ಚೇಂಜರ್ ಆಗಬಲ್ಲರು. ಜೊತೆಗೆ ಬೌಲಿಂಗ್ನಲ್ಲೂ ನೆರವಾಗಬಲ್ಲರು. ಚಿನ್ನಸ್ವಾಮಿ ಮೈದಾನದ ಆಳ-ಅಗಲ ಗೊತ್ತಿರೋ ಮನೋಜ್ ಪರ್ಫಾಪ್ಟ್ ಇಂಪ್ಯಾಂಕ್ಟ್ ಮೂಡಿಸಬಲ್ಲರು. ಹಾಗೇ ಟಿಮ್ ಡೇವಿಡ್ ಗೆ ಕೃನಾಲ್ಗಿಂತ ಮೊದ್ಲು ಬ್ಯಾಟ್ ಬೀಸೋಕೆ ಅವಕಾಶ ಕೊಡ್ಬೇಕು.
ಜೋಶ್ ಹೇಜಲ್ವುಡ್ ಆರ್ಸಿಬಿ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡ್ತಿದ್ದಾರೆ ನಿಜ. ಬಟ್ ಅದು ಹೊರಗಿನ ಪಿಚ್ಗಳಲ್ಲಿ. ಬಟ್ ಚಿನ್ನಸ್ವಾಮಿಯಲ್ಲಿ ದಾರಾಳವಾಗಿ ರನ್ಸ್ ಬಿಟ್ಟುಕೊಡ್ತಿದ್ದಾರೆ. ಬೆಂಗಳೂರಲ್ಲಿ 2 ಮ್ಯಾಚ್ಗಳಿಂದ 6.5 ಓವರ್ ಬೌಲ್ ಮಾಡಿದ್ದು ಬರೋಬ್ಬರಿ 83 ರನ್ ಬಿಟ್ಟು ಕೊಟ್ಟಿದ್ದಾರೆ. ಒಂದು ವಿಕೆಟ್ ಮಾತ್ರ ಪಡೆದಿದ್ದಾರೆ. ಲೈನ್ ಅಂಡ್ ಲೆಂಥ್ ನಲ್ಲಿ ಫೇಲ್ಯೂರ್ ಆಗ್ತಿರೋ ಹೇಜಲ್ವುಡ್ ಬದಲಿಗೆ ಲಂಕಾದ ವೇಗಿ ನುವಾನ್ ತುಷಾರಗೆ ಬೆಂಗಳೂರಿನ ಪಂದ್ಯಕ್ಕೆ ಚಾನ್ಸ್ ನೀಡಿ ಪ್ರಯೋಗ ನಡೆಸಬಹುದು. ಥೇಟ್ ಲಸಿತ್ ಮಲಿಂಗರಂತೆ ಬೌಲಿಂಗ್ ಮಾಡೋ ತುಷಾರಾ ಪವರ್ ಪ್ಲೇ ಹಾಗೂ ಡೆತ್ ಓವರ್ಗಳಲ್ಲಿ ಎಫೆಕ್ಟಿವ್ ಆಗ್ತಾರೆ.
ಚಿನ್ನಸ್ವಾಮಿ ಮ್ಯಾಚ್ ಅಂದ್ರೆ ಒನ್ಸ್ ಅಗೇನ್ ಕಿಂಗ್ ಕೊಹ್ಲಿಯ ಮೇಲೆ ನಿರೀಕ್ಷೆಗಳು ಜಾಸ್ತಿ ಇವೆ. ಅದ್ರಲ್ಲೂ ಪಂಜಾಬ್ ವಿರುದ್ಧ ಕೊಹ್ಲಿ ರೆಕಾರ್ಡ್ಸ್ ಸಖತ್ತಾಗಿವೆ. ಪಂಜಾಬ್ ಕಿಂಗ್ಸ್ ವಿರುದ್ಧ ಈವರೆಗೆ 32 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ 1030 ರನ್ಗಳಿಸಿದ್ದಾರೆ. 133.76ರ ಸ್ಟ್ರೈಕ್ನಲ್ಲಿ ಅಬ್ಬರಿಸಿರೋ ಕೊಹ್ಲಿ 108 ಬೌಂಡರಿ, 32 ಸಿಕ್ಸರ್ ಸಿಡಿಸಿದ್ದಾರೆ. 1 ಶತಕ ಹಾಗೂ 5 ಅರ್ಧಶತಕ ಸಿಡಿಸಿದ್ದಾರೆ. ಹೀಗಾಗಿ ಈ ಮ್ಯಾಚಲ್ಲೂ ಒಳ್ಳೆ ಸ್ಕೋರ್ ಕಲೆ ಹಾಕೋ ನಿರೀಕ್ಷೆ ಇದೆ. ಇನ್ನು ಪಂಜಾಬ್ ಟೀಂ ಈ ವರ್ಷ ಸಖತ್ತಾಗಿದೆ. ಶ್ರೇಯಸ್ ಅಯ್ಯರ್ ಒಳ್ಳೇ ಸ್ಕೋರ್ ಮಾಡ್ತಿದ್ದಾರೆ. ಹೈದ್ರಾಬಾದ್ ವಿರುದ್ಧದ ಮ್ಯಾಚಲ್ಲಿ 245 ರನ್ ಹೊಡೆದಿದ್ರು. ಪ್ರಿಯಾನ್ಶ್ ಆರ್ಯ, ಪ್ರಭ್ ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್, ಶಶಾಂಕ್ ಸಿಂಗ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಹಾಗೇ ಬೌಲಿಂಗ್ ಟೀಂ ಕೂಡ ಎಷ್ಟು ಸ್ಟ್ರಾಂಗ್ ಅನ್ನೋದು ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಪ್ರೂವ್ ಆಗಿದೆ. ಕಡಿಮೆ ಸ್ಕೋರ್ ಅಂತಾ ಆರ್ಸಿಬಿ ನೆಗ್ಲೆಕ್ಟ್ ಮಾಡಿದ್ರೆ ಹೊಡೆತ ತಿನ್ನೋದು ಪಕ್ಕಾ. ಆರ್ಸಿಬಿಯ ಆಳ, ಅಗಲ ತಿಳ್ಕೊಂಡಿರೋ ಯುಜ್ವೇಂದ್ರ ಚಹಾಲ್ ಪಂಜಾಬ್ನ ಶಕ್ತಿಯಾಗ್ತಾರೆ. ವರ್ಷಗಳ ಕಾಲ ಆರ್ಸಿಬಿಯಲ್ಲೇ ಇದ್ದ ಚಹಾಲ್ ಈಗ ವಿಲನ್ ಆಗಿ ಕಾಡ್ಬೋದು. 7 ವರ್ಷಗಳ ಕಾಲ ಆರ್ಸಿಬಿಯಲ್ಲಿದ್ದ ಮೊಹಮ್ಮದ್ ಸಿರಾಜ್ ಗುಜರಾತ್ ಪರ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ರು. ಸೋ ಈ ಮ್ಯಾಚಲ್ಲಿ ಈ ಕೆಲಸವನ್ನ ಚಹಾಲ್ ಮಾಡ್ಬೋದು. ಹಾಗೆ ಅರ್ಶದೀಪ್ ಸಿಂಗ್, ಮಾರ್ಕೊ ಜಾನ್ಸೆನ್ ಕೂಡ ಬೌಲಿಂಗ್ ದಾಳಿ ಮಾಡ್ತಾರೆ. ಇನ್ನು ಬೆಂಗಳೂರಿನ ಮಾಜಿ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಯಾವುದೇ ಕ್ಷಣದಲ್ಲಾದ್ರೂ ಸಿಡಿಯಬಲ್ಲರು. ಸೋ ಈ ಎಲ್ಲಾ ಲೆಕ್ಕಾಚಾರಗಳನ್ನ ಹಾಕಿಕೊಂಡೇ ಆರ್ಸಿಬಿ ಆಡ್ಬೇಕಾಗುತ್ತೆ.